ದೆಹಲಿಯಲ್ಲಿ ಶೋಭಾಯಾತ್ರೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ
ನವದೆಹಲಿ,
ಏಪ್ರಿಲ್
16:
ದೆಹಲಿಯ
ಜಹಾಂಗೀರ್ಪುರಿಯಲ್ಲಿ
ಆಯೋಜಿಸಿದ್ದ
ಶೋಭಾ
ಯಾತ್ರೆ
ನಂತರದಲ್ಲಿ
ಎರಡು
ಸಮುದಾಯಗಳ
ನಡುವೆ
ಘರ್ಷಣೆ
ಸಂಭವಿಸಿದೆ
ಎಂದು
ಪೊಲೀಸರು
ತಿಳಿಸಿದ್ದಾರೆ.
ದೆಹಲಿಯ
ಅಧಿಕಾರಿಗಳ
ಪ್ರಕಾರ,
ಸ್ಥಳದಲ್ಲಿ
ಕಲ್ಲು
ತೂರಾಟ
ನಡೆದಿದ್ದು,
ಪರಿಸ್ಥಿತಿ
ಉದ್ವಿಗ್ನಗೊಂಡಿತ್ತು.
ಈ
ಹಿನ್ನೆಲೆ
ಪ್ರದೇಶದಲ್ಲಿ
ಹೆಚ್ಚುವರಿ
ಪೊಲೀಸ್
ಸಿಬ್ಬಂದಿಯನ್ನು
ನಿಯೋಜಿಸಲಾಗಿದ್ದು,
ಪೊಲೀಸ್
ಅಧಿಕಾರಿಗಳು
ಸೇರಿದಂತೆ
ಗಾಯಗೊಂಡವರನ್ನು
ಆಸ್ಪತ್ರೆಗೆ
ದಾಖಲಿಸಲಾಗಿದೆ.
ಉತ್ತರ
ವಲಯ
ಸ್ಪೆಷಲ್
ಸಿಪಿ
ದೇವೇಂದ್ರ
ಪಾಠಕ್
ಅವರು
ಹಿರಿಯ
ಅಧಿಕಾರಿಗಳು
ಸ್ಥಳದಲ್ಲಿದ್ದು
ಪರಿಸ್ಥಿತಿಯನ್ನು
ಮೇಲ್ವಿಚಾರಣೆ
ಮಾಡುತ್ತಿದ್ದಾರೆ.
ರಾಮನವಮಿಯಂದು ಹಿಂಸಾಚಾರ: ಕತ್ತಿ ಹಿಡಿದವನಿಂದ ಪೊಲೀಸರ ಮೇಲೆ ಗುಂಡು
ಶೋಭಾ ಯಾತ್ರೆಯ ವೇಳೆ ಎರಡು ಕೋಮುಗಳ ನಡುವೆ ತೀವ್ರ ವಾಗ್ವಾದ ನಡೆದು, ಮಾರಾಮಾರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. "ಎರಡೂ ಸಮುದಾಯಗಳ ಮಧ್ಯ ವಾಗ್ವಾದ ನಡೆದಿದ್ದು, ಪರಸ್ಪರ ಕಲ್ಲು ತೂರಾಟವನ್ನು ನಡೆಸಿದ್ದಾರೆ. ಕೆಲವರು ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿದರೆ, ಇನ್ನೂ ಕೆಲವರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ," ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಯಗೊಂಡ
ಅಧಿಕಾರಿಗಳು
ಆಸ್ಪತ್ರೆಗೆ
ದಾಖಲು:
ವಾಯವ್ಯ
ದೆಹಲಿಯ
ಜಹಾಂಗೀರ್ಪುರಿಯಲ್ಲಿ
ಎರಡು
ಸಮುದಾಯಗಳ
ನಡುವೆ
ಘರ್ಷಣೆ
ಹೆಚ್ಚುತ್ತಿದ್ದಂತೆ
ಹಿರಿಯ
ಅಧಿಕಾರಿಗಳು
ಸ್ಥಳಕ್ಕೆ
ದೌಡಾಯಿಸಿದರು.
ಪರಿಸ್ಥಿತಿ
ನಿಯಂತ್ರಿಸುವ
ನಿಟ್ಟಿನಲ್ಲಿ
ಹೆಚ್ಚುವರಿ
ಸಿಬ್ಬಂದಿಯನ್ನೂ
ಕರೆಸಲಾಯಿತು.
"ಪೊಲೀಸರು
ಗುಂಪನ್ನು
ನಿಯಂತ್ರಿಸಲು
ಪ್ರಯತ್ನಿಸಿದರು,
ಈ
ಸಂದರ್ಭದಲ್ಲಿ
ಹಲವಾರು
ಸಿಬ್ಬಂದಿ
ಗಾಯಗೊಂಡರು.
ಗಾಯಗೊಂಡವರನ್ನು
ಹತ್ತಿರದ
ಆಸ್ಪತ್ರೆಗೆ
ದಾಖಲಿಸಲಾಗಿದೆ
ಎಂದು
ಪೊಲೀಸ್
ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.
ದೆಹಲಿಯ
ಹಲವು
ಪ್ರದೇಶಗಳಲ್ಲಿ
ಶೋಭಾ
ಯಾತ್ರೆ
ನಡೆಯುತ್ತಿದ್ದು,
ಪರಿಸ್ಥಿತಿಯ
ಮೇಲೆ
ನಿಗಾ
ಇಡಲು
ಅಧಿಕಾರಿಗಳಿಗೆ
ಸೂಚಿಸಲಾಗಿದೆ.
ಎರಡು
ಸಮುದಾಯಗಳ
ನಡುವಿನ
ಘರ್ಷಣೆ
ನಂತರದಲ್ಲಿ
ಎಲ್ಲಾ
14
ಜಿಲ್ಲೆಗಳಾದ್ಯಂತ
ಪೊಲೀಸರಿಗೆ
ಅಲರ್ಟ್
ಮೆಸೇಜ್
ರವಾನಿಸಲಾಗಿದೆ.