ದೆಹಲಿ ಮತದಾನ ಅಂತ್ಯ, ಯಾರಿಗೆ ಸಿಗಲಿದೆ ಪಾರುಪತ್ಯ
ನವದೆಹಲಿ, ಡಿ.4: ದೆಹಲಿ ವಿಧಾನಸಭೆ ಚುನಾವಣೆ ಮತದಾನ ಅಂತ್ಯಗೊಂಡಿದ್ದು, ಶೇ 74ರಷ್ಟು ಮತ ಚಲಾವಣೆಯಾಗಿದೆ. ಈ ಬಾರಿಯ ಚುನಾವಣೆ ದೆಹಲಿಯಲ್ಲಿ ತೀವ್ರ ಕದನ ಕುತೂಹಲ ಮೂಡಿಸಿದ್ದು, ಸಮ್ಮಿಶ್ರ ಸರ್ಕಾರ ನಿರ್ಮಾಣವಾಗುವ ಶಂಕೆ ಮೂಡಿಸಿದೆ.
ಒಂದು ವೇಳೆ ಹಾಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಗೆದ್ದರೆ, ದೀಕ್ಷಿತ್ ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಸದ್ಯ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸ್ಪರ್ಧಾಕಣದಲ್ಲಿರುವುದು ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಬಹುತೇಕ ಮತವನ್ನು ಕಸಿಯುವ ಸಾಧ್ಯತೆ ಇದೆ.
ದೆಹಲಿ ವಿಧಾನಸಭಾ ಕ್ಷೇತ್ರಗಳನ್ನು ಅವಲೋಕಿಸಿದರೆ ಒಟ್ಟು ಮತ ದಾರರು 1.2 ಕೋಟಿ, ಒಟ್ಟು ಕ್ಷೇತ್ರಗಳು 70, ಸ್ಪರ್ಧಿಸಿರುವ ಒಟ್ಟು ಅಭ್ಯರ್ಥಿಗಳು 810. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 68 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿದೆ.
ಕಳೆದ 5 ವರ್ಷಗಳಿಂದ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆ ದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಾಗುತ್ತಿದ್ದು, ಈ ಬಾರಿ ಒಟ್ಟು 108 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಎಲ್ಲಾ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. 2008ರಲ್ಲಿ 92 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರು.
ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ. ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡುತ್ತಿದೆ.. ಇಲ್ಲಿ ನೋಡಿ
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಬಿಜೆಪಿ ಸಿಎಂ ಅಭ್ಯರ್ಥಿ ಹರ್ಷವರ್ಧನ್, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕ ಗಣ್ಯರು ಮತ ಚಲಾಯಿಸಿದರು. ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಚಿತ್ರಗಳು ಇಲ್ಲಿವೆ ನೋಡಿ...

ಬಿಗಿ ಭದ್ರತೆ
ದೆಹಲಿ ವಿಧಾನಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ವಿವಿಧ ಬೂತ್ ಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.

ಯುವರಾಜ ನನ್ನ ಸಾಲಲ್ಲಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಿರ್ಮಾಣ್ ಭವನ್ ಮತದಾನ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತಿರುವುದನ್ನು ಕಂಡ ಯುವತಿ ಅಚ್ಚರಿಯಿಂದ ನೋಡಿದ್ದಾರೆ.

ನನ್ನ ಹೆಸರು ಎಲ್ಲಿದೆ
ಅನೇಕ ಬೂತ್ ಗಳಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾ ಪಟಿ ನಡೆದ ವರದಿಗಳು ಬಂದಿವೆ. ಇದೆಲ್ಲದರ ನಡುವೆ ಮತದಾರರು ಶಾಂತಚಿತ್ತರಾಗಿ ತಮ್ಮ ಹೆಸರಿರುವ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಿದ್ದಾರೆ.

ಸೋನಿಯಾ, ಶೀಲಾ
ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮತ ಕೇಂದ್ರದ ಬಳಿ...ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ

ಕಾಂಗ್ರೆಸ್ ಯುವರಾಜ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಿರ್ಮಾಣ್ ಭವನ್ ಮತದಾನ ಮಾಡಿದರು
ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡಲಿದೆ ತಪ್ಪದೇ ನಿರೀಕ್ಷಿಸಿ
ಶೀಲಾ ದೀಕ್ಷಿತ್
ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತದಾನ ಮಾಡಿದ ನಂತರ...
ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡಲಿದೆ ತಪ್ಪದೇ ನಿರೀಕ್ಷಿಸಿ

ಸರತಿ ಸಾಲಿನಲ್ಲಿ ಮತದಾರರು
ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡಲಿದೆ ತಪ್ಪದೇ ನಿರೀಕ್ಷಿಸಿ

ಡಾ. ಹರ್ಷವರ್ಧನ್
ಮತದಾನ ಮಾಡಿದ ಬಿಜೆಪಿ ಸಿಎಂ ಅಭ್ಯರ್ಥಿ ಡಾ. ಹರ್ಷವರ್ಧನ್

ದಂಪತಿಗಳಿಂದ ಮತದಾನ
ಪ್ರಿಯಾಂಕಾ ಗಾಂಧಿ ಹಾಗೂ ರಾಬರ್ಟ್ ವಾಧ್ರಾ ಅವರು ಮತ ಹಕ್ಕು ಚಲಾಯಿಸಿದರು.

ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗುರುತಿನ ಚೀಟಿ ಪ್ರದರ್ಶಿಸುತ್ತಿದ್ದಾರೆ.

ಪೂರ್ವ ದೆಹಲಿಯಲ್ಲಿ
ಪೂರ್ವ ದೆಹಲಿಯಲ್ಲಿ ಮತದಾನ ಮಾಡಿದ ಬಿಜೆಪಿ ಸಿಎಂ ಹರ್ಷವರ್ಧನ್ ಅವರು ತಮ್ಮ ಕುಟುಂಬ ವರ್ಗದೊಡನೆ

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ
ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ನಿರ್ಮಾನ್ ಭವನ್ ನಲ್ಲಿ ಮತ ಚಲಾಯಿಸಿದರು.

ಪ್ರಿಯಾಂಕಾ ಗಾಂಧಿ
ಮತ ಚಲಾಯಿಸಿದ ಪ್ರಿಯಾಂಕಾ ಗಾಂಧಿ ಅವರು ಸಾರ್ವಜನಿಕರೊಡನೆ ಮಾತುಕತೆ

ಅರವಿಂದ್ ಕೇಜ್ರಿವಾಲ್
ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ಮತ ಚಲಾಯಿಸಿದರು

ಅರವಿಂದ್ ಕುಟುಂಬ ವರ್ಗ
ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಕುಟುಂಬ ವರ್ಗ

ಶೀಲಾ, ಸೋನಿಯಾ ಗಾಂಧಿ
ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮತ ಕೇಂದ್ರದ ಬಳಿ

ಸೋನಿಯಾ, ಶೀಲಾ
ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮತ ಕೇಂದ್ರದ ಬಳಿ

ಸರತಿ ಸಾಲಿನಲ್ಲಿ ಮತದಾರರು
ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡಲಿದೆ ತಪ್ಪದೇ ನಿರೀಕ್ಷಿಸಿ

ಸರತಿ ಸಾಲಿನಲ್ಲಿ ಮತದಾರರು
ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡಲಿದೆ ತಪ್ಪದೇ ನಿರೀಕ್ಷಿಸಿ

ಅರವಿಂದ್ ಕೇಜ್ರಿವಾಲ್
ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್

ದೆಹಲಿ ಗದ್ದುಗೆಗೆ ಮತದಾನ
ಭಾರಿ ಕುತೂಹಲ ಕೆರಳಿಸಿರುವ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದೆ ಒನ್ ಇಂಡಿಯಾ ಕನ್ನಡ ನಿಮಗಾಗಿ ಸಮಗ್ರ ಫಲಿತಾಂಶ, ಟ್ರೆಂಡಿಂಗ್, ಪಕ್ಷವಾರು ಸೀಟು ಗಳಿಕೆ ವಿವರಗಳನ್ನು ನೀಡಲಿದೆ ತಪ್ಪದೇ ನಿರೀಕ್ಷಿಸಿ
ಮುಖ್ಯಮಂತ್ರಿ ಕುರ್ಚಿ ಮೇಲೆ ಅರವಿಂದ್ ಕೇಜ್ರಿವಾಲ್, ಡಾ. ಹರ್ಷವರ್ಧನ್ ಹಾಗೂ ಶೀಲಾ ದೀಕ್ಷಿತ್ ಕಣ್ಣಿಟ್ಟಿದ್ದಾರೆ.-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications