ಮಹತ್ವದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ, ಸಿದ್ದರಾಮಯ್ಯ ಭಾಗಿ

ನವದೆಹಲಿ, ಆಗಸ್ಟ್ 04: ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ ಇಂದು ದೆಹಲಿಯಲ್ಲಿ ನಡೆಯಿತು. ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಮೇಲೆ ನಡೆದ ಎರಡನೇ ಕಾರ್ಯಕಾರಿಣಿ ಸಭೆ ಇದಾಗಿದೆ.

ಕೇಂದ್ರ ಸರ್ಕಾರದ ವಿರದ್ಧ ರಫೆಲ್ ಒಪ್ಪಂದ, ನಿರುದ್ಯೋಗ, ಕಪ್ಪುಹಣ ಹಾಗೂ ಎನ್‌ಸಿಆರ್ ವಿಷಯಗಳನ್ನು ಇಟ್ಟುಕೊಂಡು ಹೋರಾಟವನ್ನು ತೀವ್ರಗೊಳಿಸಬೇಕು ಎಂದು ಸಭೆಯು ತೀರ್ಮಾನಕ್ಕೆ ಬಂದಿತು.

Congress working comity Meeting decides to take on central government

ಸಭೆಯಲ್ಲಿ ಎನ್‌ಸಿಆರ್ ಸೇರಿದಂತೆ ಕೆಲವು ವಿಷಯದಲ್ಲಿ ಒಮ್ಮತವೂ ಬರಲಿಲ್ಲ ಎನ್ನಲಾಗಿದ್ದು, ಎನ್‌ಸಿಆರ್ ಸೂಕ್ಷ್ಮ ವಿಷಯವಾಗಿದ್ದು ಈ ಬಗ್ಗೆ ಸ್ಪಷ್ಟ ನಿಲವು ತಳೆಯುವ ಅಗತ್ಯವಿದೆ ಎಂದು ಕೆಲವರು ಹೇಳಿದರೆ ಆ ಬಗ್ಗೆ ವಿರೋಧಿಸಿಯೇ ಸಿದ್ಧ ಎಂದು ಕೆಲವು ಸದಸ್ಯರು ಹೇಳಿದರು.

ಪ್ರತ್ಯೇಕ ರಾಜ್ಯಗಳ ಸ್ಥಳೀಯ ಸಮಸ್ಯೆಗಳು ಮತ್ತು ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಅವುಗಳನ್ನು ಎದುರಿಸಬೇಕಾದ ರೀತಿ-ನೀತಿಗಳ ಬಗ್ಗೆಯೂ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿದೆ. ಅಲ್ಲದೆ ರಾಜ್ಯ ಕಾಂಗ್ರೆಸ್‌ಗಳಲ್ಲಿ ಶೀಘ್ರವೇ ಸದಸ್ಯರ ಬದಲಾವಣೆ ಮಾಡುವ ಬಗ್ಗೆಯೂ ಸೂಚನೆ ನೀಡಲಾಗಿದೆ.

Congress working comity Meeting decides to take on central government

ನೂತನವಾಗಿ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆ ಆಗಿರುವ ಸಿದ್ದರಾಮಯ್ಯ ಅವರು ಸಹ ಇಂದಿನ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+