ಪ್ರವಾಹ: ರಾಜ್ಯಕ್ಕೆ ಕೇಂದ್ರ ನೆರವು ಘೋಷಣೆ ಇಂದು

Recommended Video

      Karnataka Flood: ಪ್ರವಾಹ: ರಾಜ್ಯಕ್ಕೆ ಕೇಂದ್ರ ನೆರವು ಘೋಷಣೆ ಇಂದು

      ನವದೆಹಲಿ, ಆಗಸ್ಟ್ 17: ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಕೇಂದ್ರ ಸರ್ಕಾರವು ಇಂದು ನೆರವು ಘೋಷಿಸುವ ಸಾಧ್ಯತೆ ಇದೆ.

      ಸಿಎಂ ಯಡಿಯೂರಪ್ಪ ಅವರು ಎರಡು ದಿನದಿಂದಲೂ ನವದೆಹಲಿಯಲ್ಲಿದ್ದು, ಪ್ರಧಾನಿ ಮೋದಿ ಅವರನ್ನು ನೆರೆ ಸಂತ್ರಸ್ತರಿಗೆ ನೆರವು ನೀಡಲು ಮನವಿ ಮಾಡಿದ್ದಾರೆ. ಪ್ರವಾಹ ಬಂದ ನಂತರ ಯಡಿಯೂರಪ್ಪ ಅವರು ಮೋದಿಯ ಭೇಟಿಯಾಗಿ ನೆರವು ಕೇಳುತ್ತಿರುವುದು ಇದು ಎರಡನೇ ಬಾರಿ.

      ಇಂದು ಗೃಹ ಸಚಿವ ಅಮಿತ್ ಶಾ, ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣೆ ಉನ್ನತ ಮಟ್ಟದ ಅಧಿಕಾರಿಗಳು ಸಭೆ ನಡೆಸಲಿದ್ದು, ಸಭೆಯಲ್ಲಿ ರಾಜ್ಯಕ್ಕೆ ಎಷ್ಟು ನೆರವು ಬಿಡುಗಡೆ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.

      Central government may announce fund to Karnataka flood victims

      ಯಡಿಯೂರಪ್ಪ ಅವರು ಈಗಾಗಲೇ ಪ್ರವಾಹ ಪರಿಸ್ಥಿತಿಯಿಂದ ಆಗಿರುವ ನಷ್ಟದ ಬಗ್ಗೆ ಕೇಂದ್ರಕ್ಕೆ ವರದಿ ನೀಡಿದ್ದಾರೆ. ಅಷ್ಟೆ ಅಲ್ಲದೆ ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಅವರು ಖುದ್ದಾಗಿ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದ್ದಾರೆ. ಕೇಂದ್ರದಲ್ಲಿ ವಿಶೇಷ ತಂಡವೂ ಒಂದು ರಾಜ್ಯಕ್ಕೆ ಬಂದು ಪ್ರವಾಹ ಸಮೀಕ್ಷೆ ಮಾಡಿದೆ.

      ಯಡಿಯೂರಪ್ಪ ಅವರು ಹೇಳಿರುವಂತೆ ಪ್ರವಾಹದಿಂದ ರಾಜ್ಯದಲ್ಲಿ ಸುಮಾರು 40,000 ಕೋಟಿ ನಷ್ಟವಾಗಿದ್ದು, ಈ ಕೂಡಲೇ ಕನಿಷ್ಟ ಮೂರು ಸಾವಿರ ಕೋಟಿ ಅನುದಾನವನ್ನು ಕೇಂದ್ರ ನೀಡಬೇಕು ಎಂದು ಮನವಿ ಮಾಡಿದ್ದರು. ಕೇಂದ್ರ ಸರ್ಕಾರವು ಎಷ್ಟು ನೆರವು ನೀಡಲಿದೆ ಎಂಬುದು ಇಂದು ತಿಳಿಯಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+