'ದೇವಮಾನವ' ಡಾಟಿ ವಿರುದ್ಧ ರೇಪ್ ಕೇಸ್ ದಾಖಲಿಸಿದ ಸಿಬಿಐ
ನವದೆಹಲಿ, ಅಕ್ಟೋಬರ್ 26: ಭಕ್ತೆಯೊಬ್ಬರ ಮೇಲೆ ವಿರುದ್ಧ ಆತ್ಯಾಚಾರ ಎಸಗಿದ ಆರೋಪ ಹೊತ್ತುಕೊಂಡಿರುವ ಸ್ವಯಂಘೋಷಿತ ದೇವಮಾನವ ಡಾಟಿ ಮಹಾರಾಜ್ ವಿರುದ್ಧ ಸಿಬಿಐ ಅಧಿಕಾರಿಗಳು, ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಾಟಿ ಮಹಾರಾಜ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರೂ ದೆಹಲಿ ಪೊಲೀಸರು ಸೂಕ್ತ ರೀತಿ ತನಿಖೆ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಜೂನ್ 07ರಂದು ದೂರು ದಾಖಲಾಗಿದ್ದು, ಜೂನ್ 11ರಂದು ಎಫ್ಐಆರ್ ಹಾಕಲಾಗಿತ್ತು. ಜೂನ್ 22ರಂದು ಡಾಟಿ ಮಹಾರಾಜ್ ಅವರನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದರು. ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದರೂ ಇದು ನನ್ನ ವಿರುದ್ಧ ನಡೆದಿರುವ ಸಂಚು ಎಂದೇ ಮಹಾರಾಜ್ ಅವರು ಪ್ರತಿಪಾದಿಸಿದ್ದರು.
ಅಕ್ಟೋಬರ್ 01ರಂದು ಸಾಕೇತ್ ಕೋರ್ಟಿನಲ್ಲಿ ಬಾಬಾ ಡಾಟಿ ಮಹಾರಾಜ್ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಆದರೆ, ಇದರಿಂದ ತೃಪ್ತರಾಗದ ಹೈಕೋರ್ಟ್ ನ್ಯಾಯಪೀಠವು, ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡು, ಆರೋಪಿಯನ್ನು ಇನ್ನು ಏಕೆ ಬಂಧಿಸಿಲ್ಲ? ಎಂದು ಪ್ರಶ್ನಿಸಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.
ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು ಶುಕ್ರವಾರ(ಅಕ್ಟೋಬರ್ 26) ದಂದು ಡಾಟಿ ಮಹಾರಾಜ್ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದೆ.

ಕೇಸ್ ಫೈಲ್ ಗಳು ಸಿಬಿಐ ಅಧಿಕಾರಿಗಳ ಕೈ ಸೇರಿವೆ
ತಮ್ಮ ಆಶ್ರಮದಲ್ಲಿದ್ದ ಯುವತಿ ಮೇಲೆ ಡಾಟಿ ಮಹಾರಾಜ್ ಹಾಗೂ ಆತನ ಸಹಚರರು ಎರಡು ವರ್ಷಗಳ ಹಿಂದೆ ಅತ್ಯಾಚಾರ ಎಸಗಿದ ಆರೋಪವಿದೆ. ಫತೇಪುರ್ ಬೆರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಾಟಿ ಮಹಾರಾಜ್ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 376, 377, 354 ಮತ್ತು 34ರ ಅಡಿಯಲ್ಲಿ ಕೇಸ್ ಹಾಕಲಾಗಿದೆ. ಈಗ ಕೇಸ್ ಫೈಲ್ ಗಳು ಸಿಬಿಐ ಅಧಿಕಾರಿಗಳ ಕೈ ಸೇರಿವೆ.

ಡಾಟಿ ಮಹಾರಾಜ್ ಪ್ರವಚನಕಾರರಾಗಿ ಫೇಮಸ್
ದೆಹಲಿ ಹಾಗೂ ಎನ್ ಸಿಆರ್ ಭಾಗದಲ್ಲಿ ಜನಪ್ರಿಯತೆ ಗಳಿಸಿರುವ ಡಾಟಿ ಮಹಾರಾಜ್ ಅವರು ಗುರುವಾರ ಹಾಗೂ ಶನಿವಾರದಂದು ನಡೆಸುವ ಸತ್ಸಂಗ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಹಲವು ಟಿವಿ ಶೋಗಳು, ವೆಬ್ ಸೈಟ್, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರವಚನ ನೀಡುತ್ತಾ ಬಂದಿದ್ದಾರೆ.

ಎರಡು ವರ್ಷಗಳ ಹಿಂದೆ ನಡೆದ ಘಟನೆ
ರಾಜಸ್ಥಾನದ ಬಾಲ್ ಗ್ರಾಮ್ ಆಶ್ರಮದಲ್ಲಿ ಗುರುಕುಲ್ ಆಶ್ರಮದಲ್ಲಿ 25 ವರ್ಷ ವಯಸ್ಸಿನ ಯುವತಿ ಮೇಲೆ ಡಾಟಿ ಮಹಾರಾಜ್ ಅಲಿಯಾಸ್ ಡಾಟಿ ಮದನ್ ಲಾಲ್ ಅವರು ಅತ್ಯಾಚಾರ ಎಸಗಿದ ಆರೋಪವಿದೆ. ಡಾಟಿ ಮಹಾರಾಜ್ ಹಾಗೂ ಅವರ ಸಂಗಡಿಗರ ಬೆದರಿಕೆಯಿಂದ ನಾನು ಈ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ನಂತರ ಪೊಲೀಸರ ಮೊರೆ ಹೊಕ್ಕಬೇಕಾಯಿತು ಎಂದಿದ್ದಾರೆ.
ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಡಾಟಿ ಮಹಾರಾಜ್ ಅವರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಅನೈಸರ್ಗಿಕ ಲೈಂಗಿಕ ಕಿರುಕುಳಕ್ಕೆ ಸಾಕ್ಷಿ ಸಿಗಲಿಲ್ಲ
ದಾಟಿ ಮಹಾರಾಜ್ ಹಾಗೂ ಸೋದರರು, ಜನವರಿ 09,2016ರಂದು ನಂತರ ಮಾರ್ಚ್ 26,27 ಹಾಗೂ 28 ರಂದು ಚರಣ ಸೇವೆ ಹೆಸರಿನಲ್ಲಿ ನನ್ನ ಮೇಲೆ ಅನೈಸರ್ಗಿಕ ಲೈಂಗಿಕ ಕಿರುಕುಳ ನೀಡಲಾಗಿದೆ. ದಾಟಿ ಅವರ ಮೂತ್ರವನ್ನು ಸೇವಿಸುವಂತೆ ಬಲವಂತ ಪಡಿಸಲಾಯಿತು ಎಂದು ಯುವತಿ ದೂರಿದ್ದಾಳೆ.
ಘಟನೆ ನಡೆದಿದೆ ಎನ್ನಲಾದ ದಿನಾಂಕಗಳಲ್ಲಿ ದಾತಿ ಮಹಾರಾಜ್ ಅವರು ಹೋಮ ಹವನದಲ್ಲಿ ನಿರತರಾಗಿದ್ದರು. ಯುವತಿಯು ಶನಿ ಅಮಾವಾಸ್ಯ ಪೂಜೆಯಲ್ಲಿ ತೊಡಗಿಕೊಂಡಿದ್ದಳು.
ಈ ಕೇಸಿಗೆ ಸಾಕ್ಷಿಯಾಗಿರುವ ಯುವತಿಯ ಸೋದರಿ ನೀಡಿರುವ ಹೇಳಿಕೆಯಲ್ಲೂ ಸತ್ಯಾಂಶವಿಲ್ಲ. ನನ್ನ ಕಣ್ಣ ಮುಂದೆ ಅತ್ಯಾಚಾರ ಆಗಿದೆ ಎಂದು ಸಂತ್ರಸ್ತೆಯ ಸೋದರಿ ಹೇಳಿದ್ದಾಳೆ. ಆದರೆ ತನಿಖೆ ನಡೆಸಿದಾಗ, ಉಲ್ಲೇಖಗೊಂಡ ದಿನಾಂಕದಂದು ಆಕೆ ಅಜ್ಮೇರ್ ನ ಕಾಲೇಜಿನಲ್ಲಿದ್ದಳು ಎಂದು ತಿಳಿದು ಬಂದಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications