ಬಿಜೆಪಿಗೆ ಗಾಯದ ಮೇಲೆ ಬರೆ ಎಳೆಯುತ್ತಿರುವ ಟ್ರೋಲ್ ಹೈಕ್ಳು!
ನವದೆಹಲಿ, ಡಿಸೆಂಬರ್ 12: ಹೇಳಿ ಕೇಳಿ ಇದು ಟ್ರೋಲ್ ಕಾಲ. ಸೋಶಿಯಲ್ ಲೈಪ್ ನಲ್ಲಿರುವವರೆಲ್ಲ ನಿಂತರೂ, ಕೂತರೂ ಸುದ್ದಿಯಾಗೋ ಕಾಲ! ಇಂಥ ಸಮಯದಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಸೋಲುಂಡಿದ್ದಂತೂ ಟ್ರೋಲ್ ಹೈಕ್ಳಿಗೆ ಹಬ್ಬದೂಟ ಬಡಿಸಿದಂತಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿಯಾದಿಯಾಗಿ, ಯೋಗಿ, ಶಿವರಾಜ್ ಸಿಂಗ್ ಚೌಹಾಣ್ ಮುಂತಾದ ಘಟಾನುಘಟಿಗಳು ಟ್ರೋಲ್ ಹೈಕ್ಳ ಕೈಯಲ್ಲಿ ಸಿಕ್ಕು, ತರಹೇವಾರಿ ಜೋಕುಗಳಿಗೆ ಆಹಾರವಾಗಿದ್ದಾರೆ.
ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಮೂರು ರಾಜ್ಯಗಳಲ್ಲೂ ಬಿಜೆಪಿ ಸೋತಿದ್ದು, ಕಾಂಗ್ರೆಸ್ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಒಂದಾನೊಂದು ಕಾಲದಲ್ಲಿ ಕಾಂಗ್ರೆಸ್ ಅನ್ನು ಆಡಿಕೊಳ್ಳಲು ಹುಟ್ಟಿಕೊಂಡ ಜೋಕುಗಳೇ ಇದೀಗ ಬಿಜೆಪಿಯತ್ತ ತಿರುಗಿವೆ. ಸೋಲಿನ ಗಾಯದಿಂದ ಹಣ್ಣಾಗಿರುವ ಬಿಜೆಪಿಗೆ ಈ ಜೋಕುಗಳ ಬರೆ ಮತ್ತಷ್ಟು ಕಸಿವಿಸಿಯನ್ನುಂಟು ಮಾಡಿದೆ.
| Array |
ಮೋದಿ ಅಲೆ ಈಗ...
ಮೋದಿ ಅಲೆಯ ಒಂದು ಸದ್ಯದ ಚಿತ್ರ ಇದು ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಹೇಗಿದೆ ಅಲೆ, ನೀವೇ ನೋಡಿ!
ಅಚ್ಚೇ ದಿನ್
ಮೋದಿಯವರನ್ನು ನೋಡಿ ಜವಾಹರಲಾಲ್ ನೆಹರೂ ಅವರು ನಗುತ್ತಿರುವ ಚಿತ್ರವನ್ನು ಅಚ್ಚೇ ದಿನ್ ಮೀಮ್ಸ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ ನೋಡಿ.
ಹೆಸರು ಬದಲಿಸೋಣ
ಈಗ ಏನು ಮಾಡೋಣ? ಎಂಬ ಮೋದಿ ಪ್ರಶ್ನೆಗೆ ಯೋಗಿಯ ಉತ್ತರ 'ಕಾಂಗ್ರೆಸ್ ಹೆಸರನ್ನು ಬಿಜೆಪಿ ಎಂದು ಬದಲಿಸೋಣ!' ಇದು ಸಹ ಅಚ್ಚೇ ದಿನ್ ಮೀಮ್ಸ್ ನ ಪೋಸ್ಟ್!
| Array |
ಯೋಗಿ ಹೆಸರು ಬದಲಿಸಿ
ರಾಜಸ್ಥಾನ ಮತ್ತು ಛತ್ತೀಸ್ ಗಢದ ಸೋಲಿನ ನಂತರ ಬಿಜೆಪಿಯು ತನ್ನ ಸ್ಟಾರ್ ಕ್ಯಾಂಪೇನರ್ ಯೋಗಿಯ ಹೆಸರನ್ನು ಬದಲಿಸಿದೆ. 'ವಿನ್ ಡೀಸೆಲ್' ಅನ್ನು 'ಲಾಸ್ ಡೀಸೆಲ್' ಎಂದು ಬದಲಿಸೋಣ ಎಂದಿದ್ದಾರೆ ಅರ್ರೆ.
-
Viral Video: ತೆಂಗಿನ ಚಿಪ್ಪನ್ನು ಮಗುವಿನ ಶೌಚಾಲಯ ಮಾಡಿಕೊಂಡ ದಂಪತಿ, ವಿಡಿಯೋ ವೈರಲ್ -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ












Click it and Unblock the Notifications