ನರೇಂದ್ರ ಮೋದಿ ಸಭೆಗೆ ಕಾಂಗ್ರೆಸ್ ಸಿಎಂಗೆ ಆಹ್ವಾನ
ನವದೆಹಲಿ, ಸೆ 28: ಅನಿರೀಕ್ಷಿತ ನಡೆಯೊಂದರಲ್ಲಿ ಭಾನುವಾರ (ಸೆ 29) ರಾಜಧಾನಿಯಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆಗೆ ಬಿಜೆಪಿ, ದೆಹಲಿ ಕಾಂಗ್ರೆಸ್ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಆಹ್ವಾನ ನೀಡಿದೆ.
ಬೆಲೆ ಏರಿಕೆ, ಅತ್ಯಾಚಾರ ಪ್ರಕರಣಗಳು, ಭ್ರಷ್ಟಾಚಾರ, ರೂಪಾಯಿ ಅಪಮೌಲ್ಯ ಮುಂತಾದ ಗಂಭೀರ ವಿಚಾರದ ಬಗ್ಗೆ ಜನರು ಕಾಂಗ್ರೆಸ್ ಬಗ್ಗೆ ಮತ್ತು ನಿಮ್ಮ ಸರಕಾರದ ಬಗ್ಗೆ ಏನೆನ್ನುತ್ತಾರೆಂದು ಕೇಳಲು ನೀವು ಈ ಸಾರ್ವಜನಿಕ ಸಭೆಗೆ ಬರ ಬೇಕೆಂದು ಬಿಜೆಪಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಸವಾಲೆಸೆದಿದೆ.
ಭಾನುವಾರ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾಗವಹಿಸುವ ಐತಿಹಾಸಿಕ ಸಭೆಗೆ ದೆಹಲಿ ಮುಖ್ಯಮಂತ್ರಿಗೆ ಅಧಿಕೃತ ಆಹ್ವಾನ ಕಳುಹಿಸಲಾಗಿದೆ ಎಂದು ಹಿರಿಯ ಬಿಜೆಪಿ ಮುಖಂಡ ವಿಜೇಂದರ್ ಗುಪ್ತಾ ಹೇಳಿದ್ದಾರೆ.
ರಾಜಧಾನಿ ಸೇರಿದಂತೆ ಎಲ್ಲಡೆ ನರೇಂದ್ರ ಮೋದಿ ಪರ ಗಾಳಿ ಬೀಸುತ್ತಿದೆ. ಈ ಸಾರ್ವಜನಿಕ ಸಭೆಯ ಮೂಲಕ ದೆಹಲಿ ಜನತೆಯ ಪ್ರೀತಿ, ವಿಶ್ವಾಸವನ್ನು ಗಳಿಸುತ್ತೇವೆ ಎಂದು ಗುಪ್ತಾ ಹೇಳಿದ್ದಾರೆ.
ನಾಳೆ ನಡೆಯಲಿರುವ ನರೇಂದ್ರ ಮೋದಿ ಸಭೆಗೆ ದೆಹಲಿ ಪೋಲೀಸರು, ಮೆಟ್ರೋ ಸರ್ವ ಸನ್ನದ್ದವಾಗಿದೆ. ಈ ಸಾರ್ವಜನಿಕ ಸಭೆಯಲ್ಲಿ ಸುಮಾರು ಐದು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದೆ.
ಪ್ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ನಂತರ ಇದೇ ಮೊದಲ ಬಾರಿಗೆ ರಾಜಧಾನಿಯ ಸಭೆಯಲ್ಲಿ ಭಾಗವಹಿಸಲಿರುವ ಮೋದಿ, ನೇರವಾಗಿ ಹೆಲಿಕಾಪ್ಟರ್ ಮೂಲಕ ಸಾರ್ವಜನಿಕ ಸಭೆ ನಡೆಯುವ ನಗರದ ರೋಹಿಣಿಯಲ್ಲಿರುವ ಜಪಾನೀಸ್ ಪಾರ್ಕಿನಲ್ಲಿ ಇಳಿಯಲಿದ್ದಾರೆ. ಈ ಸಾರ್ವಜನಿಕ ಸಭೆ ನಾಳೆ ಬೆಳಗ್ಗೆ ಹತ್ತು ಗಂಟೆಗೆ ಆರಂಭವಾಗಲಿದೆ.
ಜಪಾನೀಸ್ ಪಾರ್ಕ್, ರೋಹಿಣಿ: ಸುಮಾರು ಮೂವತ್ತು ವರ್ಷದ ಹಿಂದೆ ವಾಯುವ್ಯ ದೆಹಲಿಯಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಬಡಾವಣೆಯ ಪ್ರದೇಶ . ಇದು ದ್ವಾರಕಾ ನಂತರ ಏಷ್ಯಾದ ಎರಡನೇ ಅತಿದೊಡ್ಡ ಬಡಾವಣೆ. ಇಲ್ಲಿರುವ ಜಪಾನೀಸ್ ಪಾರ್ಕ್ ಅಥವಾ ಸ್ವರ್ಣ ಜಯಂತಿ ಪಾರ್ಕ್ ದೆಹಲಿಯ ಅತಿ ದೊಡ್ಡ ಪಾರ್ಕ್. ಈ ಪಾರ್ಕಿನಲ್ಲಿ ಐದು ಕೊಳಗಳಿದ್ದು, ಪೊಗೋ ಚಾನೆಲ್ ಇಲ್ಲಿ ಕಾರ್ಯ ನಿರ್ವಹಿಸಲಿದೆ.
ನಾಳೆಯ ಸಭೆಗೆ ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಆಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಭಾಗವಹಿಸುತ್ತಿಲ್ಲ ಎನ್ನಲಾಗುತ್ತಿದೆ.
ಭಾನುವಾರ ನಡೆಯಲಿರುವ ಮೋದಿ ಸಾರ್ವಜನಿಕ ಸಭೆಯ ವಿಶೇಷತೆಗಳು.. ಸ್ಲೈಡಿನಲ್ಲಿ

ಎಲ್ ಸಿ ಡಿ ಸ್ಕ್ರೀನ್
ಮೋದಿ ಸಾರ್ವಜನಿಕ ಸಭೆಯನ್ನು ದೆಹಲಿ ಜನತೆ ಸುಲಭವಾಗಿ ವೀಕ್ಷಿಸುವಂತಾಗಲು ದೆಹಲಿ ಬಿಜೆಪಿ ಘಟಕ ಮಹಾನಗರದ ವಿವಿಧ ಭಾಗಗಳಲ್ಲಿ ಸುಮಾರು ನೂರು ಎಲ್ ಸಿ ಡಿ ಸ್ಕ್ರೀನ್ ಹಾಕಿ ನೇರ ಪ್ರಸಾರ ನೀಡಲಿದೆ.

ಅಮೆರಿಕಾ ಹೈಕಮಿಷನರ್
ನರೇಂದ್ರ ಮೋದಿಗೆ ಅಮೆರಿಕಾ ವೀಸಾ ನಿರಾಕರಿಸಿದರೂ ಬಿಜೆಪಿ, ಭಾರತದಲ್ಲಿರುವ ಅಮೆರಿಕಾದ ಹೈಕಮಿಷನರ್ ಅವರನ್ನು ನಾಳೆಯ ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದೆ.

ವಿದೇಶಿ ರಾಯಭಾರಿಗಳು
ವಿಡಿಯೋ ಕಾನ್ಫರೆನ್ಸ್ ಮೂಲಕ ಈಗಾಗಲೇ ಅಮೆರಿಕಾ ಮತ್ತು ಬ್ರಿಟನ್ ಅನಿವಾಸಿ ಭಾರತೀಯರ ಜೊತೆ ಸಂವಾದ ನಡೆಸಿರುವ ಮೋದಿ, ನಾಳೆಯ ಸಭೆಗೆ ಭಾರತದಲ್ಲಿರುವ ವಿವಿಧ ದೇಶದ ರಾಯಭಾರಿಗಳಿಗೆ ಸಭೆಯಲ್ಲಿ ಭಾಗವಹಿಸಿಲು ಕೇಳಿಕೊಂಡಿದೆ.

ವಿವಿಧ ಸಂಘಟನೆಗಳು
ಸಭೆಯಲ್ಲಿ ಭಾಗವಹಿಸಲು ವಿವಿಧ ಸಂಘಟನೆಗಳು ಒಲವು ತೋರಿದ ಹಿನ್ನಲೆಯಲ್ಲಿ ಬಿಜೆಪಿ ಎಲ್ಲಾ ಸಂಘಟನೆಗಳಿಗೂ ಪ್ರತ್ಯೇಕ ಪ್ರತ್ಯೇಕವಾಗಿ ಆಹ್ವಾನಿಸಿದೆ. ಕಾರ್ಪೋರೇಟ್ ಕ್ಷೇತ್ರದವರೂ ಸೇರಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿಐಪಿಗಳು ನಾಳಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮೆಟ್ರೋ ವಿಶೇಷ ಸರ್ವಿಸ್
ರಜಾದಿನವಾದ ಭಾನುವಾರದಂದು ಪೂರ್ಣ ಪ್ರಮಾಣದ ಸೇವೆ ಇರದ ದೆಹಲಿ ಮೆಟ್ರೋ ಸರ್ವಿಸ್ ನಾಳಿನ ಸಭೆಗೆ ವಿಶೇಷ ವ್ಯವಸ್ಥೆ ಮಾಡಲು ಒಪ್ಪಿಕೊಂಡಿದೆ. ಸುಮಾರು ಐವತ್ತು ಸಾವಿರ ಜನ ಮೆಟ್ರೋ ಮೂಲಕ ಸಭೆಗೆ ಬರುವ ನಿರೀಕ್ಷೆ ಇರುವುದರಿಂದ ಮೆಟ್ರೋ ಇಪ್ಪತ್ತು ವಿಶೇಷ ರೈಲು ಓಡಿಸಲಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications