ಎಚ್ಡಿಕೆ ಅಳು ಕಂಡು ಹಳೆ ಬಾಲಿವುಡ್ ಸಿನಿಮಾ ನೆನಪಾಯ್ತಂತೆ ಜೇಟ್ಲಿಗೆ
ನವದೆಹಲಿ, ಜುಲೈ 16: ರಾಜ್ಯ ರಾಜಕಾರಣದಲ್ಲಿ ಈಗ ಕುಮಾರಸ್ವಾಮಿ ಕಣ್ಣೀರಿನದ್ದೇ ಚರ್ಚೆ. ಇಂತಿಪ್ಪ ಎಚ್ಡಿಕೆ ಕಣ್ಣೀರಿನ ಕತೆ ರಾಜ್ಯದ ಗಡಿ ದಾಟಿ ದೆಹಲಿಯ ಗಮನವನ್ನೂ ಸೆಳೆದಿದೆ.
ಕುಮಾರಸ್ವಾಮಿ ಇತ್ತೀಚೆಗಷ್ಟೆ ಭಾಷಣ ಮಾಡುತ್ತಾ ಭಾವುಕರಾಗಿ ಕಣ್ಣೀರು ಹಾಕಿದ ಬಗ್ಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಕಣ್ಣೀರು ತುಂಬಿದ ಭಾಷಣ ನೋಡಿ ಹಳೆ ದುರಂತ ಬಾಲಿವುಡ್ ಸಿನಿಮಾಗಳ ಸಂಭಾಷಣೆ ನೆನಪಾಯಿತು ಎಂದು ಕಾಲೆಳೆದಿದ್ದಾರೆ.
ಹಾಗಾದ್ರೆ.. ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರಿಗೆ ಅಸಲಿ ಕಾರಣಕರ್ತರಾರು?
ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಸುದೀರ್ಘ ಲೇಖನ ಬರೆದಿರುವ ಅರುಣ್ ಜೇಟ್ಲಿ, ಕೇವಲ ಬಿಜೆಪಿಯನ್ನು ಹೊರಗಿಡಬೇಕೆಂದು ಧ್ಯೇಯ, ಉದ್ದೇಶಗಳಲ್ಲಿ ತಾಳೆಯೇ ಇಲ್ಲದ ಎರಡು ಪಕ್ಷಗಳು ಸೇರಿ ಮಾಡಿದ ಸರ್ಕಾರದ ಪರಿಸ್ಥಿತಿ ಹೀಗೆಯೇ ಇರುತ್ತದೆ ಎಂದಿದ್ದಾರೆ.
ಸಿಎಂ ಕುಮಾರಸ್ವಾಮಿ ಹಾಕಿದ ಕಣ್ಣೀರಿಗೆ ಟ್ವಿಟ್ಟಿಗರ ಪ್ರತಿಕ್ರಿಯೆ ನೋಡಿ..
ಕಾಂಗ್ರೆಸ್ ಹಾಗೂ ಜೆಡಿಎಸ್ನ ಸಮ್ಮಿಶ್ರ ಸರ್ಕಾರದ ಹುಳುಕುಗಳನ್ನು ತೆರೆದಿಟ್ಟಿರುವ ಅವರು, ಕಾಂಗ್ರೆಸ್ ಪಕ್ಷ ಇತಿಹಾಸ ನೋಡಿದರೆ ತಿಳಿಯುತ್ತದೆ ಅದು ಪ್ರಾದೇಶಿಕ ಪಕ್ಷಗಳನ್ನು ಕೇವಲ ಲಾಭಕ್ಕಾಗಿ ಬಳಸುತ್ತದೆ ಎಂದು ಹೇಳುತ್ತಾ, ಐಕೆ ಗುಜರಾಲ್, ದೇವೇಗೌಡ, ಚಂದ್ರಶೇಖರ್ ಅವರುಗಳ ಪ್ರಸ್ತಾಪ ಮಾಡಿದ್ದಾರೆ.