ಆತ್ಮೀಯ ಗೆಳೆಯನ ಅಗಲಿಕೆಗೆ ಭಾವುಕ ಪತ್ರ ಬರೆದ ಅಡ್ವಾಣಿ
ನವದೆಹಲಿ, ಆಗಸ್ಟ್ 16: ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ನಿಧನರಾಗಿದ್ದಾರೆ. ದೇಶದ ಎಲ್ಲ ಪ್ರಮುಖ ರಾಜಕಾರಣಿಗಳು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಅಟಲ್ ಜೀ ಅವರ ಬಲಗೈ ಎಂದೇ ಎನಿಸಿಕೊಂಡಿದ್ದ ಅಡ್ವಾಣಿ ಅವರು ಭಾವುಕ ಪತ್ರವೊಂದನ್ನು ಬರೆದಿದ್ದಾರೆ.
ಅಡ್ವಾಣಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರದ್ದು ಬರೋಬ್ಬರಿ 65 ವರ್ಷದ ಗೆಳೆತನ, ಇಂದು ತಮ್ಮ ಬಹು ಕಾಳದ ಗೆಳೆಯನನ್ನು ಅಡ್ವಾಣಿ ಅವರು ಕಳೆದುಕೊಂಡಿದ್ದಾರೆ.
'ನಿಮ್ಮ ಅಗಲಿಕೆ ನನಗೆ ತಂದಿರುವ ನೋವನ್ನು ಹೇಳಲು ನನ್ನಲ್ಲಿ ಪದಗಳೇ ಇಲ್ಲ, ನೀವು ನನ್ನ ಹಿರಿಯ ರಾಜಕೀಯ ಸಹೋದ್ಯೋಗಿ ಮಾತ್ರವಾಗಿರಲಿಲ್ಲ, ನೀವು ನನ್ನ 65 ವರ್ಷದ ಗೆಳೆಯ' ಎಂದು ಅಡ್ವಾಣಿ ಅವರು ಅಗಲಿದ ಅಟಲ್ ಜೀ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.

ಇಬ್ಬರೂ ಆರ್ಎಸ್ಎಸ್ನಿಂದ ಪಯಣ ಪ್ರಾರಂಭಿಸಿದ್ದರು
ಇಬ್ಬರೂ ಆರ್ಎಸ್ಎಸ್ನ ಸ್ವಯಂ ಸೇವಕರಾಗಿ ರಾಜಕೀಯ ಜೀವನ ಪ್ರಾರಂಭಿಸಿದವರು, ಅದನ್ನೂ ನೆನೆಸಿಕೊಂಡಿರುವ ಅಡ್ವಾಣಿ ಅವರು, ನಾನು ಮತ್ತು ಅವರು ಆರ್ಎಸ್ಎಸ್ ಸ್ವಯಂ ಸೇಕವರಾಗಿ ಪ್ರಾರಂಭಿಸಿ ಭಾರತೀಯ ಜನಸಂಘ ಸೇರ್ಪಡೆ, ಆ ನಂತರ ಕಷ್ಟದ ದಿನಗಳು, ತುರ್ತು ಪರಿಸ್ಥಿತಿ, ಆ ನಂತರದ ಜನತಾ ಪಾರ್ಟಿ ಸ್ಥಾಪನೆ, ಬಿಜೆಪಿ ಸ್ಥಾಪನೆ ಎಲ್ಲ ಕಾಲದಲ್ಲೂ ನಾವಿಬ್ಬರೂ ಜೊತೆಗಿದ್ದೆವು ಎಂದು ನೆನೆಸಿಕೊಂಡಿದ್ದಾರೆ.

ಮೊದಲ ಕಾಂಗ್ರೆಸ್ ಏತರ ಸರ್ಕಾರ ರಚಿಸಿದ್ದು ಅಟಲ್ ಜೀ
ಅಟಲ್ ಬಿಹಾರಿ ವಾಜಪೇಯಿ ಅವರು, ಮೊದಲ ಕಾಂಗ್ರೆಸ್ ಏತರ ಸರ್ಕಾರ ರಚಿಸಿದ ವ್ಯಕ್ತಿ ಎಂಬುದನ್ನೂ ಇತಿಹಾಸ ನೆನಪಿಸಿಕೊಳ್ಳುತ್ತದೆ ಎಂದಿರುವ ಅಡ್ವಾಣಿ ಅವರು, ಅವರಿಗೆ ಸಹಾಯಕನಾಗಿ ನನಗೆ ಸಿಕ್ಕ ಆರು ವರ್ಷ ನನ್ನ ಪುಣ್ಯದ ವರ್ಷಗಳು ನನ್ನ ಹಿರಿಯರಾಗಿ ಅವರು ನನ್ನನ್ನು ಸದಾ ಮಾರ್ಗದರ್ಶಿಸಿದ್ದಾರೆ, ಮುನ್ನಡೆಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ಎದುರಾಳಿಗಳನ್ನು ನಗುವಿನಿಂದ ಗೆಲ್ಲುವ ಚತುರತೆ
ಅವರ ನಾಯಕತ್ವ ಗುಣಗಳು, ಸಮ್ಮೋಹನ ಗೊಳಿಸುವ ಭಾಷಣ, ಅವರ ದೇಶಭಕ್ತಿ ಮತ್ತು ಎಲ್ಲದಕ್ಕಿಂತಲೂ ಹೆಚ್ಚಾಗಿ ಅವರ ಸಹಾನುಭೂತಿ, ನಮ್ರತೆ, ಮಾನವೀಯತೆ ಅವರನ್ನು ಒಬ್ಬ ನಿಶ್ಕಲ್ಮಶ ರಾಜಕಾರಣಿಯಾಗಿಸಿತ್ತು. ಭಿನ್ನಾಭಿಪ್ರಾಯಗಳ ನಡುವೆಯೂ ಅವರು ಎದುರಾಳಿಯ ಮನಸ್ಸನ್ನು ಗೆಲ್ಲುವ ಚತುರರಾಗಿದ್ದರು ಎಂದು ಅಡ್ವಾಣಿ ಅವರು, ಅಟಲ್ ಜೀ ಅವರ ವ್ಯಕ್ತಿತ್ವವನ್ನು ಹೊಗಳಿಸಿದ್ದಾರೆ.

ಬಿಜೆಪಿಯ ಹಕ್ಕ ಬುಕ್ಕರು
ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಹಕ್ಕ-ಬುಕ್ಕರಂತೆ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಕ್ಕ-ಬುಕ್ಕರೆಂದೇ ಅಟಲ್ ಜೀ ಮತ್ತು ಅಡ್ವಾಣಿ ಅವರು ಖ್ಯಾತರು. ಬಿಜೆಪಿಯ ಎಡಗೈ-ಬಲಗೈ ಎಂತಲೂ ಅವರಿಬ್ಬರನ್ನೂ ಕರೆಯಲಾಗುತ್ತಿತ್ತು. ಅಟಲ್ ಜೀ ಬಿಜೆಪಿಯ ಮೆದುಳು ಮತ್ತು ಬಾಯಾದರೆ, ಅಡ್ವಾಣಿ ಜೀ ಬಿಜೆಪಿಯ ದುಡಿಯುವ ಬಾಹುಗಳು ಎಂದು ರೂಪಕ ಹೆಣೆಯಾಗಿತ್ತು. ಅವರಿಬ್ಬರದ್ದೂ ಅಪರೂಪದಲ್ಲಿ ಅಪರೂಪ ಎಂಬ ಸ್ನೇಹ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications