ಇದುವರೆಗೂ PAN ವಿವರ ನೀಡದ ಸಂಸದ, ಶಾಸಕರ ಸಂಖ್ಯೆ 206!
ನವದೆಹಲಿ, ಅಕ್ಟೋಬರ್ 27: 'ಬ್ಯಾಂಕ್ ಖಾತೆಗೆ PAN(permanent account number) ಜೋಡಣೆ ಕಡ್ಡಾಯ... 1 ಲಕ್ಷಕ್ಕಿಂತ ಹೆಚ್ಚಿನ ಹಣಕಾಸು ವ್ಯವಹಾರವನ್ನು ಬ್ಯಾಂಕ್ ಮೂಲಕ ನಡೆಸುವುದಕ್ಕೂ ಪ್ಯಾನ್ ಕಡ್ಡಾಯ... ಆದರೆ ಈ ಕಡ್ಡಾಯ ನೀತಿಗಳು ಕೇವಲ ಜನಸಾಮಾನ್ಯರಿಗೆ ಮಾತ್ರವೇ?
ಶಾಸಕರು, ಸಂಸದರು ಎಲ್ಲ ಈ ಕಡ್ಡಾಯ ನೀತಿಯಿಂದ ಅತೀತರೇ? ಅಂಥದೊಂದು ಅನುಮಾನ ಹುಟ್ಟುವುದಕ್ಕೆ ಕಾರಣ ಇತ್ತೀಚೆಗೆ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಮತ್ತು ನ್ಯಾಶ್ನಲ್ ಎಲೆಕ್ಷನ್ ವಾಚ್(NEW) ಬಿಡುಗಡೆ ಮಾಡಿದ ವರದಿ.
ಈ ವರದಿಯ ಪ್ರಕಾರ ಒಟ್ಟು 206 ಜನಪ್ರತಿನಿಧಿಗಳು ತಮ್ಮ ಪ್ಯಾನ್ ವಿವರವನ್ನು ನೀಡಿಲ್ಲ. ಚುನಾವಣೆಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಆಸ್ತಿ ವಿವರಗಳನ್ನು ದೃಢಪಡಿಸಲು ಪ್ಯಾನ್ ಅಗತ್ಯ. ಆದರೆ ಎಷ್ಟೋ ಶಾಸಕರು, ಸಂಸದರು ಈ ವಿವರವನ್ನೇ ನೀಡಿಲ್ಲ ಎಂಬ ಆಘಾತಕಾರಿ ವಿಷಯ ಇದೀಗ ಹೊರಬಿದ್ದಿದೆ.

ಒಟ್ಟು 206 ಜನಪ್ರತಿನಿಧಿಗಳು
7 ಸಂಸದರು ಮತ್ತು 199 ಶಾಸಕರು ತಮ್ಮ ಪ್ಯಾನ್ ವಿವರಗಳನ್ನು ನೀಡಿಲ್ಲ. ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಮತ್ತು ನ್ಯಾಶ್ನಲ್ ಎಲೆಕ್ಷನ್ ವಾಚ್(NEW) ಈ ವಿವರಗಳನ್ನು ಕಲೆಹಾಕಿದೆ.

ಕಾಂಗ್ರೆಸ್ಸಿಗರೇ ಜಾಸ್ತಿ!
ಪ್ಯಾನ್ ವಿವರವನ್ನು ನೀಡದವರಲ್ಲಿ ಕಾಂಗ್ರೆಸ್ಸಿಗರೇ ಹೆಚ್ಚಿದ್ದಾರೆ. ಒಟ್ಟು 51 ಕಾಂಗ್ರೆಸ್ ಶಾಸಕರು ಪ್ಯಾನ್ ವಿವರ ನೀದೆ ಉಳಿದರೆ, 42 ಬಿಜೆಪಿ ಶಾಸಕರು, 25 ಸಿಪಿಐಎಂ ಶಾಸಕರು ತಮ್ಮ ಪ್ಯಾನ್ ವಿವರಗಳನ್ನು ನೀಡಿಲ್ಲ.

ಪ್ಯಾನ್ ವಿವರ ನೀಡದ 7 ಸಂಸದರು
ಒಡಿಶಾದ ಮತ್ತು ತಮಿಳುನಾಡಿನ ತಲಾ ಇಬ್ಬರು ಸಂಸದರು ಮತ್ತು ಅಸ್ಸಾಂ, ಮಿಜೋರಾಮ್, ಲಕ್ಷದ್ವೀಪ್ ತಲಾ ಒಬ್ಬೊಬ್ಬ ಸಂಸದರು ತಮ್ಮ ಪ್ಯಾನ್ ವಿವರಗಳ್ನು ಘೋಷಿಸಿಲ್ಲ. ಇವರಲ್ಲಿ ಬಿಜೆಡಿಯ ಮತ್ತು ಎಐಎಡಿಎಂಕೆಯ ತಲಾ ಇಬ್ಬರು, ಎಐಯುಡಿಎಫ್ ಮತ್ತು ಎನ್ ಸಿಪಿಯ ತಲಾ ಒಬ್ಬೊಬ್ಬ ಶಾಸಕರು ಸೇರಿದ್ದಾರೆ.

ಮಿಜೋರಾಂನ 40 ರಲ್ಲಿ 28 ಶಾಸಕರ ಪ್ಯಾನ್ ವಿವರವಿಲ್ಲ!
ಇದೇ ನವೆಂಬರ್ 28 ರಂದು ಚುನಾವಣೆ ನಡೆಯಲಿರುವ ಮಿಜೋರಾಂ ರಾಜ್ಯದಲ್ಲಿ ಇರುವುದೇ 40 ವಿಧಾನಸಭಾ ಕ್ಷೇತ್ರ. ಅವುಗಳಲ್ಲಿ 28 ಶಾಸಕರು ತಮ್ಮ ಪ್ಯಾನ್ ವಿವರವನ್ನೇ ನೀಡಿಲ್ಲ ಎಂಬುದು ಸೋಜಿಗದ ಸಂಗತಿ! ಕೇರಳದಲ್ಲಿ 33 ಮತ್ತು ಮಧ್ಯಪ್ರದೇಶದಲ್ಲಿ 19 ಶಾಸಕರು ಪ್ಯಾನ್ ವಿವರಗಳನ್ನು ಘೋಷಿಸಿಲ್ಲ.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications