ನೋಟು ನಿಷೇಧ ಘೋಷಣೆ ನಂತರ 469 ನಕ್ಸಲ್ಸ್ ಶರಣಾಗತಿ
ಗರಿಷ್ಠ ಮುಖಬೆಲೆಯ ನೋಟು ನಿಷೇಧ ಪರಿಣಾಮ ನಕ್ಸಲ್ ಚಟುವಟಿಕೆಗಳ ಮೇಲೂ ಗಾಢವಾಗಿ ಬೀರಿದೆ. ನವೆಂಬರ್ 8ರಿಂದ ಇದುವರೆಗೆ ಒಟ್ಟು 469 ನಕ್ಸಲರು ಶರಣಾಗತರಾಗಿದ್ದಾರೆ.
ನವದೆಹಲಿ, ನವೆಂಬರ್, 29: ಕಪ್ಪು ಹಣ ಮತ್ತು ಭ್ರಷ್ಟಾಚಾರದ ಬೆನ್ನು ಮೂಳೆ ಮುರಿಯಲು ಪ್ರಧಾನಿ ಮೋದಿ ಅವರು ಅಧಿಕ ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ ಪ್ರಭಾವ ನಕ್ಸಲ್ ಚಟುವಟಿಕೆಗಳ ಮೇಲೂ ಬಿರಿದ್ದು, ನವೆಂಬರ್ 8ರಿಂದ ಇದುವರೆಗೆ ಒಟ್ಟು 469 ನಕ್ಸಲರು ಶರಣಾಗತರಾಗಿದ್ದಾರೆ.
ಕಳೆದ ಒಂದು ತಿಂಗಳಿಂದ ಒಟ್ಟು ಒಟ್ಟು 564 ನಕ್ಸಲರು ಮತ್ತು ಅವರ ಬೆಂಬಲಿಗರು ಶರಣಾಗತರಾಗಿದ್ದು, ಇವರಲ್ಲಿ ಶೆ.70ರಷ್ಟು ಮಂದಿ ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯವರೇ ಆಗಿದ್ದಾರೆ.

ನವೆಂಬರ್ 8ರಂದು ಪ್ರಧಾನಿ ಮೋದಿ ಅವರು ರೂ.500 ಹಾಗು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ಈ ಬೆಳವಣಿಗೆ ನಡೆದಿದ್ದು, ನೋಟು ನಿಷೇಧ ಪರಿಣಾಮ ಕಾಳಧನಿಕರು ಮತ್ತು ಭ್ರಷ್ಟಾಚಾರಿಗಳಷ್ಟೇ ಅಲ್ಲದೇ ನಕ್ಸಲ್ ಮೇಲೂ ಬೀರಿದೆ.
ಶರಣಾಗತರಾಗಿರುವ ಹಲವು ನಕ್ಸಲರು "ನಮ್ಮ ಸಿದ್ಧಾಂತಗಳಲ್ಲಿ ದೃಢತೆ ಇಲ್ಲ ಅವೆಲ್ಲಾ ಟೊಳ್ಳು ಎಂದು ದೂರಿದ್ದಾರೆ" ಅಷ್ಟೇ ಅಲ್ಲದೆ ಹಲವು ಗ್ರಾಮಸ್ಥರು ನಕ್ಸಲರು ವಿರುದ್ಧ ದೂರುಗಳನ್ನು ನೀಡಿದ್ದಾರೆ. ಇದು ಕೂಡ ನಕ್ಸಲ್ ಚಟುವಟಿಕೆಗಳಿಗೆ ಹಿನ್ನೆಡೆ ಆಗಿದ್ದು, ಗ್ರಾಮಸ್ಥರನ್ನು ಪುನಶ್ಚೇತನಗೊಳಿಸುವಲ್ಲಿ ಮತ್ತು ಅವರ ಬೆಂಬಲ ಗಳಿಸುವಲ್ಲಿ ನಕ್ಸಲರು ವಿಫಲರಾಗಿದ್ದಾರೆ.
ಕಳೆದ ವಾರವಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು "ನೋಟು ನಿಷೇಧ ಪರಿಣಾಮ ನಕ್ಸಲರ ಅಸ್ತಿತ್ವಕ್ಕೆ ಮಾರಕವಾಗಬಹುದು"ಎಂದು ಹೇಳಿದ್ದರು.
ನಕ್ಸಲ್ ಸಿದ್ದಾಂತಗಳ ಮೌಲ್ಯ ಕುಸಿಯುತ್ತಿರುವುದೇ ನಕ್ಸಲರ ಶರಣಾಗತಿಗೆ ಪ್ರಮುಖ ಕಾರಣವಾಗಿದ್ದು, ಅದೇ ರೀತಿ ನೋಟು ನಿಷೇಧದ ಪರಿಣಾಮವೂ ಸಹ ಅವರ ಮೇಲೆ ಗಾಢವಾಗಿ ಬೀರಿದೆ. ಇದಕ್ಕೆ ನಿದರ್ಶನವೆಂಬಂತೆ ಇತ್ತೀಚೆಗಷ್ಟೇ ಕೊಂಡಾಗನ್ ಜಿಲ್ಲೆಯ ಗ್ರಾಮವೊಂದರಲ್ಲಿ ಪೊಲೀಸರು ಒಟ್ಟು 42ಲಕ್ಷ ಮೌಲ್ಯದ ರೂ.500 ಹಾಗು 1000 ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆದಿದ್ದರು.
ಹಳ್ಳಿಗೆ ಬಂದಿದ್ದ ನಕ್ಸಲರು ನೋಟುಗಳನ್ನು ವಿನಿಮಯ ಮಾಡಿಕೊಡಿ ಎಂದು ಗ್ರಾಮಸ್ಥರಲ್ಲಿ ಕೇಳಿಕೊಂಡಿದ್ದರು, ಗ್ರಾಮಸ್ಥರು ಅದಕ್ಕೆ ಒಪ್ಪದಿದ್ದಾಗ ಹಣದ ಚೀಲವನ್ನು ಅಲ್ಲೇ ಬಿಟ್ಟು ಹೋಗಿದ್ದರು. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ನೋಟು ನಿಷೇಧದ ಪರಿಣಾಮದಿಂದ ನಕ್ಸಲರು ಒಟ್ಟು ರೂ. ಸಾವಿರ ಕೋಟಿ ಮೊತ್ತದಷ್ಟು ಹಣವನ್ನು ಕಳೆದುಕೊಂಡಿದ್ದು, ಇದರಿಂದಲೇ ನಕ್ಸಲ್ ಚಟುವಟಿಕೆಗಳಿಗೆ ಭಾರಿ ಹಿನ್ನೆಡೆ ಆಗಿದೆ.
ಕೇವಲ ಬಾಸ್ಟರ್ ಪ್ರದೇಶವೊಂದರಲ್ಲೇ ನಕ್ಸಲರು ಒಟ್ಟು 400 ರಿಂದ 600 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ ಎಂದು ಅಂಕಿ ಅಂಶಗಳ ಮೂಲಕ ತಿಳಿದು ಬಂದಿದೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications