ಅಂತರ್ಜಾತಿ ವಿವಾಹಿತ ದಂಪತಿಗಳ ರಕ್ಷಣೆಗೆ ವಿಶೇಷ ಘಟಕಗಳು: ದೆಹಲಿ ಪೊಲೀಸರ ಮಾದರಿ ನಡೆ
ನವದೆಹಲಿ, ಸೆ.21: ಅಂತರ್ಜಾತಿ ವಿವಾಹಿತ ದಂಪತಿಗಳನ್ನು ರಕ್ಷಿಸಲು 15 "ಜಿಲ್ಲಾ ವಿಶೇಷ ಘಟಕ" ಗಳಿವೆ ಮತ್ತು ಯಾವುದೇ ಸಂತ್ರಸ್ತರು ಸಂಕಷ್ಟದ ಸಂದರ್ಭದಲ್ಲಿ ಸಹಾಯಕ್ಕಾಗಿ ಮಹಿಳಾ ಸಹಾಯವಾಣಿ ಸಂಖ್ಯೆ '181' ಗೆ ಕರೆ ಮಾಡಬಹುದು ಎಂದು ದೆಹಲಿ ಪೊಲೀಸರು ದೆಹಲಿ ಹೈಕೋರ್ಟ್ಗೆ ತಿಳಿಸಿದ್ದಾರೆ.
ಒಮ್ಮೆ ಸಹಾಯವಾಣಿಗೆ ಬಂದ ಕರೆ ಸ್ವೀಕರಿಸಿದ ನಂತರ, ಸಂಬಂಧಪಟ್ಟ ಡಿಸಿಪಿಯೊಂದಿಗೆ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ. ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿದ ನಂತರ ಸಂಬಂಧಿತ ದಂಪತಿಯನ್ನು "ಸುರಕ್ಷಿತ ಮನೆಗೆ" ಸ್ಥಳಾಂತರಿಸಲಾಗುತ್ತದೆ ಎಂದು ದೆಹಲಿ ಪೊಲೀಸರು ವಿವರಿಸಿದರು.
ಸುಪ್ರೀಂನಲ್ಲಿ ಹಿಜಾಬ್ ನಿಷೇಧ ತೀರ್ಪು ಸಮರ್ಥಿಸಿಕೊಂಡ ಕರ್ನಾಟಕ ಸರ್ಕಾರ
ಈ ವಿಶೇಷ ಘಟಕಗಳಿಗೆ ಸಂಬಂಧಿಸಿದ ವಿವರಗಳನ್ನು ಸಾಮಾಜಿಕ ಮಾಧ್ಯಮ ಮತ್ತು ದೆಹಲಿ ಪೊಲೀಸ್ ವೆಬ್ಸೈಟ್ನಲ್ಲಿ ಪ್ರಚಾರ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ಕಿರುಕುಳ ಮತ್ತು ಬೆದರಿಕೆಗಳ ದೂರುಗಳನ್ನು ಸ್ವೀಕರಿಸಲು ರಾಜ್ಯ ಸರ್ಕಾರಗಳು ವಿಶೇಷ ಸೆಲ್ಗಳನ್ನು ರಚಿಸುವಂತೆ ಸುಪ್ರೀಂ ಕೋರ್ಟ್ನ ಆದೇಶ ನೀಡಿತ್ತು. ಇದರ ಪ್ರಕಾರ ನಗರದಲ್ಲಿ ವಿಶೇಷ ಸೆಲ್ಗಳನ್ನು ರಚಿಸುವ ಎನ್ಜಿಒ ಧನಕ್ ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿ ವರದಿಯ ಮೇಲೆ ಪೊಲೀಸರ ಹೇಳಿಕೆ ಬಂದಿದೆ. ವಕೀಲ ಉತ್ಕರ್ಷ್ ಸಿಂಗ್ ಎನ್ಜಿಒವನ್ನು ಪ್ರತಿನಿಧಿಸಿದ್ದರು.
ಪೊಲೀಸ್ ತನ್ನ ವರದಿಯಲ್ಲಿ, ನಿರ್ದೇಶನದ ಅನುಸಾರವಾಗಿ, ಆಯಾ ಡಿಸಿಪಿಗಳನ್ನು ಸಮನ್ವಯ ಅಧಿಕಾರಿಗಳನ್ನಾಗಿ 15 ವಿಶೇಷ ಸೆಲ್ಗಳನ್ನು ರಚಿಸಲಾಗಿದೆ ಮತ್ತು ಈ ಘಟಕಗಳು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳನ್ನು ಸಹ ಒಳಗೊಂಡಿದೆ ಎಂದು ಮಾಹಿತಿ ನೀಡಿದೆ.
ದೆಹಲಿ ಸರ್ಕಾರವು ಹೊರಡಿಸಿದ ಎಸ್ಒಪಿ ಪ್ರಕಾರ "ವಸತಿ, ಹಾಸಿಗೆ, ಊಟ, ದಂಪತಿಗಳಿಗೆ ವೈದ್ಯಕೀಯ ಸೌಲಭ್ಯದ ಮೂಲಕ ಸಮಾಲೋಚನೆ" ಸೌಲಭ್ಯಗಳನ್ನು ಒದಗಿಸುವ ವಿಶೇಷ ಕೋಶಗಳು ಈಗಾಗಲೇ 17 ಅಂತರ್ ಜಾತಿ ದಂಪತಿಗಳೊಂದಿಗೆ ವ್ಯವಹರಿಸಿದೆ ಎಂದು ತಿಳಿಸಿದೆ.
"ಮಾರ್ಚ್ 27, 2018 ರ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಸಾರವಾಗಿ ಆಗಸ್ಟ್ 28, 2020 ರ GNCT ಆದೇಶದ ಮೂಲಕ 15 ಜಿಲ್ಲಾ ವಿಶೇಷ ಘಟಕಗಳನ್ನು ರಚಿಸಲಾಗಿದೆ ಎಂದು ಸಲ್ಲಿಸಲಾಗಿದೆ. ಜಿಲ್ಲಾ ವಿಶೇಷ ಕೋಶವು ಆಯಾ DCP ಯನ್ನು ಸಮನ್ವಯ ಅಧಿಕಾರಿಯಾಗಿ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳನ್ನು ಸದಸ್ಯರಾಗಿ ಹೊಂದಿರುರುತ್ತದೆ" ಎಂದು ವರದಿ ತಿಳಿಸಿದೆ.
"ಸಂತ್ರಸ್ತರು ಮಹಿಳಾ ಸಹಾಯವಾಣಿ ಸಂಖ್ಯೆಗೆ ಅಂದರೆ 181 ಗೆ ಕರೆ ಮಾಡಬಹುದು. ಕರೆಗಳ ವಿವರಗಳನ್ನು ಈ ವಿಶೇಷ ಘಟಕದ ಮುಖ್ಯಸ್ಥರು ಸಂಬಂಧಿತ ಡಿಸಿಪಿಯೊಂದಿಗೆ ಹಂಚಿಕೊಳ್ಳಬೇಕು. ದೂರು ಸ್ವೀಕರಿಸಿ, ವಿಚಾರಣೆಯ ನಂತರ ದಂಪತಿಗಳನ್ನು ಸುರಕ್ಷಿತವಾಗಿ 'ಸುರಕ್ಷಿತ ಮನೆ'ಗೆ ಸ್ಥಳಾಂತರಿಸಲಾಗಿಗುತ್ತದೆ" ಎಂದು ವರದಿಯಲ್ಲಿ ಸೇರಿಸಲಾಗಿದೆ.
ಸಂಬಂಧಿತ ಎಸ್ಒಪಿ ಮತ್ತು ಜಿಲ್ಲಾ ವಿಶೇಷ ಘಟಕಗಳ ಪಟ್ಟಿಯನ್ನು ದೆಹಲಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ನಲ್ಲಿಯೂ ಅಪ್ಲೋಡ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಆಗಸ್ಟ್ನಲ್ಲಿ, ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ದೆಹಲಿ ಪೊಲೀಸರಿಗೆ ವಿಶೇಷ ಘಟಕಗಳು ಒದಗಿಸಿದ ಸೇವೆಗಳು, ಜನರು ಮತ್ತು ಅಂತರ್ಜಾತಿ ವಿವಾಹದ ದಂಪತಿಗಳು ಈ ಘಟಕಗಳ ಬಗ್ಗೆ ತಿಳಿದುಕೊಳ್ಳಲು ಪ್ರಚಾರ ನೀಡುವ ಕುರಿತು ವಿವರವಾದ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಕೇಳಿದರು.
ಈ ವಿಶೇಷ ಘಟಕಗಳು ನೀಡುವ ರಕ್ಷಣೆ ಮತ್ತು ಅವುಗಳನ್ನು ಸಂಪರ್ಕಿಸುವ "ವಿಧಾನ" ದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ನ್ಯಾಯಾಲಯವು ಹೇಳಿತ್ತು.