ಮೈಸೂರು ಬಹುರೂಪಿ ರಂಗೋತ್ಸವಕ್ಕೆ ಓಂ ಪುರಿ ಬರಬೇಕಿತ್ತಾ?
ಮೈಸೂರು, ಜನವರಿ 7: ಹಿರಿಯ ಚಲನಚಿತ್ರ ನಟ ಓಂಪುರಿ ನಿಧನ ಹಿನ್ನೆಲೆ ಮೈಸೂರಿನ ರಂಗಾಯಣದಲ್ಲಿ ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟನೆಗೆ ಅತಿಥಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ.
ಹೌದು, ಪ್ರತಿ ವರ್ಷ ರಂಗಾಯಣದಿಂದ ನಡೆಸಲಾಗುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಈ ಬಾರಿಯ ನಟ ಓಂಪುರಿಯನ್ನು ಆಯ್ಕೆಮಾಡಲಾಗಿತ್ತು. ಜನವರಿ 13 ರಿಂದ ಆರಂಭವಾಗಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಹಿನ್ನೆಲೆ ಒಂದು ದಿನ ಮುಂಚಿತವಾಗಿಯೇ ಮೈಸೂರಿಗೆ ಬರುವುದಾಗಿ ತಿಳಿಸಿದ್ದ ಓಂಪುರಿಯವರ ಅಕಾಲಿಕ ನಿಧನಕ್ಕೆ ರಂಗಾಯಣ ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಬರಲು ಒಪ್ಪಿದ್ದ ಓಂಪುರಿ
ಈ ಬಾರಿ ಬಹುರೂಪಿ ನಾಟಕೋತ್ಸವದ ಉದ್ಘಾಟನೆಗೆ ಓಂಪುರಿಯವರನ್ನು ಆಹ್ವಾನಿಸಲು ನಿರ್ಧರಿಸಿದ ಮೇಲೆ ಅವರಿಗೆ ಮೊಬೈಲ್ ಕರೆ ಮಾಡಿ ಖಚಿತಪಡಿಸಿಕೊಳ್ಳಲು ಉಪನಿರ್ದೇಶಕಿ ನಿರ್ಮಲ ಮಠಪತಿ ತುಂಬಾ ಸಲ ಪ್ರಯತ್ನಿಸಿದ್ದರು. ಆದರೆ ನವೆಂಬರ್ 25 ರಂದು ನಿರ್ಮಲ ಅವರಿಗೆ ಫೋನ್ ಮಾಡಿದ್ದ ಓಂಪುರಿ 10 ನಿಮಿಷಗಳ ಕಾಲ ಮಾತನಾಡಿ ಬಹುರೂಪಿ ನಾಟಕೋತ್ಸವಕ್ಕೆ ಬರುವ ಭರವಸೆ ನೀಡಿದ್ದರು.
ಅಂತಾರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಗೂ ಮುನ್ನ ಚಾಮುಂಡಿ ತಾಯಿಯ ದರ್ಶನ ಪಡೆದು ಹೋಗುತ್ತೇನೆ ಎಂದು ಹೇಳಿದ್ದ ಹಿರಿಯ ನಟ ಓಂಪುರಿ ನಿಧನ ಕಲಾವಿದರಿಗೆ ಆಘಾತ ತಂದಿದೆ.[ಮರೆಯಲಾಗದ ಕಲಾವಿದ ಓಂ ಪುರಿಗೆ ನುಡಿನಮನ]
ಕನ್ನಡದಲ್ಲೇ ಮಾತನಾಡಿದ್ದ ಹಿರಿಯ ನಟ !
ಭರವಸೆ ನೀಡಿದ ಕೆಲ ಸಮಯದ ಬಳಿಕ ಓಂಪುರಿಯವರು ಮತ್ತೆ ಫೋನ್ ಮಾಡಿ, ಚೆನ್ನಾಗಿದ್ದೀರಾ ಊಟ ಆಯ್ತ ಎಂದು ಕನ್ನಡದಲ್ಲಿ ಮಾತನಾಡಿದ್ದರು. ಅವರು ತಮ್ಮ ಮಾತನ್ನು ಮುಂದುವರೆಸಿ ಬಹುರೂಪಿ ನಾಟಕೋತ್ಸವ ಉದ್ಘಾಟನೆಗೆ ನಾನು ಬರುತ್ತೇನೆ ಯಾಕೆಗೊತ್ತಾ ? ನಾನು ಚಾಮುಂಡಿಬೆಟ್ಟದಲ್ಲಿ ಬಿ.ವಿ. ಕಾರಂತ್ ನಿರ್ದೇಶನದ ಚಲನಚಿತ್ರದಲ್ಲಿ ನಟಿಸಿದ್ದೆ. ಆದ್ದರಿಂದ ಈ ಬಾರಿ ಬಹುರೂಪಿ ಉದ್ಘಾಟನೆಗೂ ಮೊದಲು ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿಯ ದರ್ಶನ ಪಡೆದು ಬರುತ್ತೇನೆ ಎಂದಿದ್ದರಂತೆ.

ಓಪುರಿ ನಿಧನ ಹಿನ್ನೆಲೆ ಉಮಾಶ್ರೀಗೆ ಸ್ಥಾನ
ಆದರೆ ಹಿರಿಯ ಕಲಾವಿದ ಓಂಪುರಿ ನಿಧನದಿಂದ ಬಹುರೂಪಿ ಉದ್ಘಾಟನೆಗೆ ಹೊಸ ಅತಿಥಿಯನ್ನು ಆಯ್ಕೆ ಮಾಡಲು ಮೈಸೂರು ರಂಗಾಯಣ ಅಧಿಕಾರಿ ವರ್ಗ ಶುಕ್ರವಾರ ವಿಶೇಷ ಸಭೆ ನಡೆಸಿತು. ಈ ಸಭೆಯಲ್ಲಿ ಹಿರಿಯ ಕಲಾವಿದೆ ಹಾಗೂ ಸಚಿವೆ ಉಮಾಶ್ರೀ ಅವರನ್ನು ಉದ್ಘಾಟಕರನ್ನು ಆಯ್ಕೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ರಂಗಾಯಣದೊಂದಿಗೆ ಅವಿನಾಭವ ನಂಟು ಹೊಂದಿದ ಓಂಪುರಿ ಯನ್ನು ಕಳೆದುಕೊಂಡ ಕಲಾವಿದರು ಮಾತ್ರ ದುಃಖದ ಮಡುವಿನಲ್ಲಿರುವುದಂತೂ ನಿಜ.
-
Ajay Devgn: ಅಜಯ್ ದೇವಗನ್ ಹುಟ್ಟುಹಬ್ಬಕ್ಕೆ 1.4 ಕೋಟಿಯ ಐಷಾರಾಮಿ ಮರ್ಸಿಡಿಸ್ ಖರೀದಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ?












Click it and Unblock the Notifications