ಬತ್ತಿದ ಶಿಂಷಾ ನದಿ ಒಡಲು, ಚನ್ನಪಟ್ಟಣ ಜನತೆಯಿಂದ ಎಚ್ಚರಿಕೆ
ಚನ್ನಪಟ್ಟಣ,ಮಾರ್ಚ್,21: ಬೇಸಿಗೆ ಝಳದಿಂದ ಶಿಂಷಾ ನದಿ ನೀರು ಸಂಪೂರ್ಣ ಇಂಗಿದ್ದು, ಜೀವ ಹನಿಗಾಗಿ ಜನರು ಒದ್ದಾಡುತ್ತಿದ್ದಾರೆ. ಆದರೂ ಈ ನದಿ ನೀರನ್ನು ಪಕ್ಕದ ಮದ್ದೂರಿನ ಗ್ರಾಮದ ಕೆರೆಗಳಿಗೆ ಹರಿಸುತ್ತಿರುವ ಕ್ಷೇತ್ರದ ಶಾಸಕ ತಮ್ಮಣ್ಣ ಅವರ ಕ್ರಮವನ್ನು ಖಂಡಿಸಿದ ಮದ್ದೂರು ಜನತೆಗೆ ಕೊನೆಗೂ ಫಲ ಸಿಕ್ಕಿದೆ.
ಶಿಂಷಾನದಿಯಿಂದ ಪಕ್ಕದ ಮದ್ದೂರಿನ ಕೆರೆಗಳಿಗೆ ನೀರು ನೀಡುತ್ತಿರುವುದನ್ನು ಗಮನಿಸಿದ ನೂರಾರು ಜನರು ಇಗ್ಗಲೂರು ಶಿಂಷಾನದಿಯ ದೇವೆಗೌಡ ಬ್ಯಾರೆಜ್ ಬಳಿ ನೀರು ಸರಬರಾಜು ಮಾಡುತ್ತಿದ್ದ ಮೋಟಾರ್ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ಕೈಗೊಂಡ ಪರಿಣಾಮ ತಕ್ಷಣ ಅಲ್ಲಿನ ಇಂಜಿನಿಯರ್ ಗಳ ಮುಖಾಂತರ ನೀರು ಸರಬರಾಜು ಮಾಡುತ್ತಿದ್ದ ಮೋಟಾರ್ ಗಳನ್ನು ನಿಲುಗಡೆ ಮಾಡಿದ್ದಾರೆ.[85 ಅಡಿಗೆ ಕುಸಿದ ಕೆಆರ್ ಎಸ್ ನೀರಿನ ಮಟ್ಟ]

ಘಟನೆಯ ವಿವರ:
ಶಿಂಷಾ ನದಿಯು ಮಂಡ್ಯ, ಚನ್ನಪಟ್ಟಣ ಜನರ ಜೀವನಕ್ಕೆ ಆಧಾರವಾಗಿದೆ. ಆದರೆ ಬೇಸಿಗೆಯ ಬೇಗೆಗೆ ಶಿಂಷಾ ನದಿಯ ಒಡಲು ಬರಿದಾಗುತ್ತಿದೆ. ಆದರೂ ಮದ್ದೂರು ಗ್ರಾಮದ ಜನರು ಹಾಗೂ ಅಲ್ಲಿನ ಕೆಲವು ರಾಜಕೀಯ ಮುಖಂಡರುಗಳು ಶಿಂಷಾ ನದಿ ನೀರನ್ನು ಮೋಟಾರು ವಾಹನಗಳ ಮೂಲಕ ಮದ್ದೂರಿನ ಜನತೆಗೆ ಸರಬರಾಜು ಮಾಡಲು ಪ್ರಯತ್ನಿಸುತ್ತಿದ್ದರು.[ಕಳಸಾ-ಬಂಡೂರಿಗಾಗಿ ಏ.18ರಂದು ಕರ್ನಾಟಕ ಬಂದ್]
ರಾಜಕೀಯ ಮುಖಂಡರುಗಳ ನೀತಿಯನ್ನು ಖಂಡಿಸಿದ ಚನ್ನಪಟ್ಟಣದ ಜನರು ಇಡೀ ಗ್ರಾಮವೇ ನೀರಿಲ್ಲದೆ ಬವಣೆ ಪಡುತ್ತಿರುವಾಗ ಪಕ್ಕದ ಮದ್ದೂರು ಗ್ರಾಮದ ಕೆರೆಗಳಿಗೆ ನೀರು ಬಿಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ'? ಎಂದು ಭಾನುವಾರ ಕೈಗೊಂಡ ಪ್ರತಿಭಟನೆಯಲ್ಲಿ ಪ್ರಶ್ನಿಸಿದ್ದಾರೆ. [ಜಲಾಶಯಗಳ ನೀರು ಕುಡಿಯುವ ನೀರಿಗಾಗಿ ಮಾತ್ರ]
ಕೊನೆಗೆ ಇವರ ಒತ್ತಾಯಕ್ಕೆ ಮಣಿದ ಪೊಲೀಸ್ ಅಧಿಕಾರಿಗಳು ಹಾಗೂ ಎಂಜಿನಿಯರ್ ಗಳು ನೀರು ಸರಬರಾಜು ಪ್ರಕ್ರಿಯೆಯನ್ನು ಸದ್ಯಕ್ಕೆ ಕೈಬಿಟ್ಟಿದ್ದಾರೆ. ಆದರೆ ಈ ಘಟನೆ ಪುನಃ ಮರುಕಳಿಸಿದರೆ ಬೇರೆ ರೀತಿಯ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications