ಮೈಸೂರು: ಸಿನಿಮಾ ಶೂಟಿಂಗ್ ವೇಳೆ ತೆಲುಗು ನಟ ಗೋಪಿಚಂದ್ಗೆ ಗಾಯ
ಮೈಸೂರು, ಏಪ್ರಿಲ್ 29: ತೆಲುಗು ನಟ ಗೋಪಿಚಂದ್ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಸುತ್ತಿದ್ದು, ಶೂಟಿಂಗ್ ವೇಳೆ ನಿಯಂತ್ರಣ ತಪ್ಪಿ ಕಾಲು ಜಾರಿ ಬಿದ್ದಿರುವ ಘಟನೆ ನಡೆದಿದೆ.
ಶುಕ್ರವಾರ ನಿಯಂತ್ರಣ ತಪ್ಪಿ ಕಾಲು ಜಾರಿ ಬಿದ್ದಿದ್ದರಿಂದ ಅಲ್ಪ ಪ್ರಮಾಣದ ಗಾಯವಾಗಿದ್ದು, ಹಾಗಾಗಿ ಚಿತ್ರದ ಚಿತ್ರೀಕರಣವು ಇಂದು ಸ್ಥಗಿತಗೊಂಡಿದೆ.
ಇನ್ನು ಈ ಕುರಿತು ಚಲನಚಿತ್ರ ಘಟಕ ಪ್ರತಕ್ರಿಯಿಸಿದ್ದು, ನಟ ಗೋಪಿಚಂದ್ ಚೆನ್ನಾಗಿದ್ದಾರೆ. ಘಟನೆಯ ಬಗ್ಗೆ ಚಿಂತಿಸಬೇಡಿ ಎಂದು ಅವರ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ವಿನಂತಿಸಿದೆ.

ಅಂದಹಾಗೆ, ಈ ಚಿತ್ರ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ನಾಯಕಿಯಾಗಿ ಹಯಾತಿ ಮತ್ತು ಜಗಪತಿಬಾಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.












Click it and Unblock the Notifications