ವಿಷಪ್ರಸಾದ ಆರೋಪಿ ಅಂಬಿಕಾ ಚಾಮರಾಜನಗರದಲ್ಲಿ ಉಳಿಯೋದು ಡೌಟು?
ಮೈಸೂರು, ಡಿಸೆಂಬರ್ 21: ಸುಳ್ವಾಡಿ ವಿಷಪ್ರಸಾದ ಪ್ರಕರಣದ ನಾಲ್ವರು ಆರೋಪಿಗಳ ಹೆಚ್ಚಿನ ವಿಚಾರಣೆ ನಂತರ ಅವರನ್ನು ಸಹಜವಾಗಿಯೇ ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಇಮ್ಮಡಿ ಮಹದೇವಸ್ವಾಮಿ, ಮಾದೇಶ, ದೊಡ್ಡಯ್ಯ ತಂಬಡಿ ಈ ಮೂವರು ಆರೋಪಿಗಳನ್ನು ಬಹುತೇಕ ಚಾಮರಾಜನಗರ ಕಾರಾಗೃಹದಲ್ಲಿಯೇ ಇರಿಸಲಾಗುತ್ತದೆ.
ಈ ಪ್ರಕರಣದ ಮಹಿಳಾ ಆರೋಪಿ ಅಂಬಿಕಾಳನ್ನು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವುದು ಬಹುತೇಕ ಖಚಿತವಾಗಿದೆ.
ಚಾಮರಾಜನಗರ ವಿಷ ಪ್ರಸಾದ ಸೇವನೆ: ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದೆ
ವಿಚಾರಣೆಗೆ ಅನುಕೂಲವಾಗಲೆಂದು ಸಾಮಾನ್ಯವಾಗಿ ಹತ್ತಿರದಲ್ಲೇ ಇರುವ ಕಾರಾಗೃಹದಲ್ಲಿ ಆರೋಪಿಗಳನ್ನು ಇರಿಸುವುದು ವಾಡಿಕೆ. ಆ ಪ್ರಕಾರ ಈ ಮೂವರು ಪುರುಷ ಆರೋಪಿಗಳು ಚಾಮರಾಜನಗರದಲ್ಲೇ ಉಳಿಯುವಂತೆ ಕಾಣುತ್ತಿದೆ. ಚಾ.ನಗರದಲ್ಲಿ 2005ರಲ್ಲೇ ಜಿಲ್ಲಾ ಕಾರಾಗೃಹವಾಗಿದ್ದು, ಪ್ರಾರಂಭದಲ್ಲಿ ಮಹಿಳಾ ಬಂದಿಖಾನೆ ವ್ಯವಸ್ಥೆಯೂ ಇಲ್ಲಿ ಇತ್ತು.
2013ರಲ್ಲಿ ಪುಟ್ಟನಂಜಮ್ಮ ಎಂಬ ವಿಚಾರಣಾಧೀನ ಕೈದಿ ನೇಣು ಬಿಗಿದು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಕೇಂದ್ರ ಕಚೇರಿಯಿಂದ ಒಬ್ಬಿಬ್ಬರು ಮಹಿಳಾ ವಿಚಾರಣಾಧೀನ ಕೈದಿಗಳನ್ನು ಇಲ್ಲಿ ಉಳಿಸಬಾರದು. ಕನಿಷ್ಠ 10 ಮಂದಿ ಇದ್ದರಷ್ಟೇ ಇರಿಸಬೇಕೆಂಬ ಸೂಚನೆ ಹೊರಬಿದ್ದಿತು. ಆವಾಗಿನಿಂದಲೂ ಮಹಿಳಾ ಕೈದಿಗಳ ಸಂಖ್ಯೆ 10 ತಲುಪಿಲ್ಲ.
ಪೊಲೀಸರು ಸುಳ್ವಾಡಿ ವಿಷಪ್ರಸಾದ ಪ್ರಕರಣ ಭೇದಿಸಿದ್ದು ಹೇಗೆ ?
ಅಪರೂಪಕ್ಕೊಮ್ಮೆ ಮಹಿಳೆಯರು ಬರುತ್ತಿದ್ದು, ಅವರನ್ನು ಮೈಸೂರು ಕಾರಾಗೃಹಕ್ಕೆ ಕಳಿಸುತ್ತಾ ಬರಲಾಗಿದೆ ಎಂದು ಕಾರಾಗೃಹ ಅಧೀಕ್ಷಕಿ ಶಾಂತಶ್ರೀ ತಿಳಿಸಿದ್ದಾರೆ.
ವಿಷಪ್ರಸಾದ ಸೇವಿಸಿ ಇಂದಿಗೆ 7 ದಿನ: ಸುಳ್ವಾಡಿ ಜನರ ಸ್ಥಿತಿ ಹೇಗಿದೆ?
ಇನ್ನುಇಮ್ಮಡಿ ಸ್ವಾಮೀಜಿಯನ್ನು ಗುರುವಾರ ಸಂಜೆ 6 ರಿಂದ ರಾತ್ರಿ 11 ರವರೆಗೆ ತೀವ್ರ ವಿಚಾರಣೆಗೊಳಪಡಿಸಲಾಯಿತು. ಇದೇ ವೇಳೆ ಅವರಿಗೆ ಲೋ ಶುಗರ್ ಸಹ ಕಾಣಿಸಿಕೊಂಡಿದೆ ಎನ್ನಲಾಗಿದೆ. ಆಗ ಸ್ವಾಮೀಜಿಗೆ ಸೂಕ್ತ ಚಿಕಿತ್ಸೆ ನೀಡಿಲಾಗಿದ್ದು, ಅಗತ್ಯ ಬಿದ್ದರೆ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಯಿದೆ ಎನ್ನುತ್ತದೆ ಪೊಲೀಸ್ ಮೂಲ.