ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಷಪ್ರಸಾದ ಆರೋಪಿ ಅಂಬಿಕಾ ಚಾಮರಾಜನಗರದಲ್ಲಿ ಉಳಿಯೋದು ಡೌಟು?

|
Google Oneindia Kannada News

ಮೈಸೂರು, ಡಿಸೆಂಬರ್ 21: ಸುಳ್ವಾಡಿ ವಿಷಪ್ರಸಾದ ಪ್ರಕರಣದ ನಾಲ್ವರು ಆರೋಪಿಗಳ ಹೆಚ್ಚಿನ ವಿಚಾರಣೆ ನಂತರ ಅವರನ್ನು ಸಹಜವಾಗಿಯೇ ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಇಮ್ಮಡಿ ಮಹದೇವಸ್ವಾಮಿ, ಮಾದೇಶ, ದೊಡ್ಡಯ್ಯ ತಂಬಡಿ ಈ ಮೂವರು ಆರೋಪಿಗಳನ್ನು ಬಹುತೇಕ ಚಾಮರಾಜನಗರ ಕಾರಾಗೃಹದಲ್ಲಿಯೇ ಇರಿಸಲಾಗುತ್ತದೆ.

ಈ ಪ್ರಕರಣದ ಮಹಿಳಾ ಆರೋಪಿ ಅಂಬಿಕಾಳನ್ನು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವುದು ಬಹುತೇಕ ಖಚಿತವಾಗಿದೆ.

ಚಾಮರಾಜನಗರ ವಿಷ ಪ್ರಸಾದ ಸೇವನೆ: ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದೆಚಾಮರಾಜನಗರ ವಿಷ ಪ್ರಸಾದ ಸೇವನೆ: ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದೆ

ವಿಚಾರಣೆಗೆ ಅನುಕೂಲವಾಗಲೆಂದು ಸಾಮಾನ್ಯವಾಗಿ ಹತ್ತಿರದಲ್ಲೇ ಇರುವ ಕಾರಾಗೃಹದಲ್ಲಿ ಆರೋಪಿಗಳನ್ನು ಇರಿಸುವುದು ವಾಡಿಕೆ. ಆ ಪ್ರಕಾರ ಈ ಮೂವರು ಪುರುಷ ಆರೋಪಿಗಳು ಚಾಮರಾಜನಗರದಲ್ಲೇ ಉಳಿಯುವಂತೆ ಕಾಣುತ್ತಿದೆ. ಚಾ.ನಗರದಲ್ಲಿ 2005ರಲ್ಲೇ ಜಿಲ್ಲಾ ಕಾರಾಗೃಹವಾಗಿದ್ದು, ಪ್ರಾರಂಭದಲ್ಲಿ ಮಹಿಳಾ ಬಂದಿಖಾನೆ ವ್ಯವಸ್ಥೆಯೂ ಇಲ್ಲಿ ಇತ್ತು.

Sulwadi poison prasada case accused ambika will not stay in chamrajnagara jail

2013ರಲ್ಲಿ ಪುಟ್ಟನಂಜಮ್ಮ ಎಂಬ ವಿಚಾರಣಾಧೀನ ಕೈದಿ ನೇಣು ಬಿಗಿದು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಕೇಂದ್ರ ಕಚೇರಿಯಿಂದ ಒಬ್ಬಿಬ್ಬರು ಮಹಿಳಾ ವಿಚಾರಣಾಧೀನ ಕೈದಿಗಳನ್ನು ಇಲ್ಲಿ ಉಳಿಸಬಾರದು. ಕನಿಷ್ಠ 10 ಮಂದಿ ಇದ್ದರಷ್ಟೇ ಇರಿಸಬೇಕೆಂಬ ಸೂಚನೆ ಹೊರಬಿದ್ದಿತು. ಆವಾಗಿನಿಂದಲೂ ಮಹಿಳಾ ಕೈದಿಗಳ ಸಂಖ್ಯೆ 10 ತಲುಪಿಲ್ಲ.

ಪೊಲೀಸರು ಸುಳ್ವಾಡಿ ವಿಷಪ್ರಸಾದ ಪ್ರಕರಣ ಭೇದಿಸಿದ್ದು ಹೇಗೆ ?ಪೊಲೀಸರು ಸುಳ್ವಾಡಿ ವಿಷಪ್ರಸಾದ ಪ್ರಕರಣ ಭೇದಿಸಿದ್ದು ಹೇಗೆ ?

ಅಪರೂಪಕ್ಕೊಮ್ಮೆ ಮಹಿಳೆಯರು ಬರುತ್ತಿದ್ದು, ಅವರನ್ನು ಮೈಸೂರು ಕಾರಾಗೃಹಕ್ಕೆ ಕಳಿಸುತ್ತಾ ಬರಲಾಗಿದೆ ಎಂದು ಕಾರಾಗೃಹ ಅಧೀಕ್ಷಕಿ ಶಾಂತಶ್ರೀ ತಿಳಿಸಿದ್ದಾರೆ.

ವಿಷಪ್ರಸಾದ ಸೇವಿಸಿ ಇಂದಿಗೆ 7 ದಿನ: ಸುಳ್ವಾಡಿ ಜನರ ಸ್ಥಿತಿ ಹೇಗಿದೆ?ವಿಷಪ್ರಸಾದ ಸೇವಿಸಿ ಇಂದಿಗೆ 7 ದಿನ: ಸುಳ್ವಾಡಿ ಜನರ ಸ್ಥಿತಿ ಹೇಗಿದೆ?

ಇನ್ನುಇಮ್ಮಡಿ ಸ್ವಾಮೀಜಿಯನ್ನು ಗುರುವಾರ ಸಂಜೆ 6 ರಿಂದ ರಾತ್ರಿ 11 ರವರೆಗೆ ತೀವ್ರ ವಿಚಾರಣೆಗೊಳಪಡಿಸಲಾಯಿತು. ಇದೇ ವೇಳೆ ಅವರಿಗೆ ಲೋ ಶುಗರ್ ಸಹ ಕಾಣಿಸಿಕೊಂಡಿದೆ ಎನ್ನಲಾಗಿದೆ. ಆಗ ಸ್ವಾಮೀಜಿಗೆ ಸೂಕ್ತ ಚಿಕಿತ್ಸೆ ನೀಡಿಲಾಗಿದ್ದು, ಅಗತ್ಯ ಬಿದ್ದರೆ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಯಿದೆ ಎನ್ನುತ್ತದೆ ಪೊಲೀಸ್ ಮೂಲ.

English summary
Four convicts in the Sulwadi case need more inquiries, which will be sent to jail for 4 days after the completion of the police custody. It is almost certain that the woman convict Ambika was sent to the Central Prison in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X