ಮೈಸೂರಿನಲ್ಲಿ 'ಸೆಲ್ಫಿ ವಿತ್ ಯುವರ್ ವೋಟರ್ ಐಡಿ'ಗೆ ಭರ್ಜರಿ ರೆಸ್ಪಾನ್ಸ್
ಮೈಸೂರು, ಏಪ್ರಿಲ್ 10: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಮತ ಚಲಾವಣೆ ಮಾಡುತ್ತಿರುವ ಯುವ ಸಮೂಹವನ್ನು ಮತಗಟ್ಟೆಯತ್ತ ಸೆಳೆಯಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, 'ಸೆಲ್ಫಿ ವಿತ್ ಯುವರ್ ವೋಟರ್ ಐಡಿ' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಾಡಿನ ಶಕ್ತಿ ಯುವಕರು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಯುವಕರು ಮತದಾನದಿಂದ ದೂರ ಸರಿದಿದ್ದರು ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೊದಲ ಸಲ ಮತ ಚಲಾಯಿಸುತ್ತಿರುವವರನ್ನು ಮತಗಟ್ಟೆಯತ್ತ ಸೆಳೆಯಲು ಪಾಲಿಕೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ.
ಅದರಲ್ಲಿ 'ಸೆಲ್ಫಿ ವಿತ್ ಯುವರ್ ವೋಟರ್ ಐಡಿ' ಕಾರ್ಯಕ್ರಮ ಇದೇ ಮೊದಲ ಸಲ ಆಯೋಜಿಸಿದ್ದು, ಯುವ ಸಮೂಹದಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಯುವಕರು ಸಾಮಾಜಿಕ ಜಾಲ ತಾಣವಾದ ಟ್ವಿಟ್ಟರ್ , ಫೇಸ್ ಬುಕ್ , ವಾಟ್ಸಪ್ ನಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ.ಇದನ್ನು ಮನಗಂಡಿರುವ ಪಾಲಿಕೆ ಯುವಕರು 'ಸೆಲ್ಫಿ ವಿಥ್ ವೋಟರ್ ಐಡಿ'
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದೆ. ಮುಂದೆ ಓದಿ...

ಪಾಲಿಕೆಯಿಂದ ಆಕರ್ಷಕ ಬಹುಮಾನ
ಮೊದಲ ಸಲ ವೋಟ್ ಮಾಡುತ್ತಿರುವವರು ತಮ್ಮ ಐಡಿ ಕಾರ್ಡ್ ಜೊತೆ ಸೆಲ್ಫಿ ಫೋಟೋ ತೆಗೆದು ಅದನ್ನು ಮೈಸೂರು ನಗರ ಪಾಲಿಕೆಯ ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆ ಟ್ಯಾಗ್ ಮಾಡಬೇಕು. ನಮ್ಮ ಮತ, ನಮ್ಮ ಹಕ್ಕು ಅಡಿ ಟಿಪ್ಪಣಿ ಬರೆಯಬೇಕು. ಹೀಗೆ ಕಳುಹಿಸಿದ ಫೋಟೊಗಳಲ್ಲಿ ಆಯ್ಕೆಯಾದ ಐವರಿಗೆ ಪಾಲಿಕೆಯಿಂದ ಆಕರ್ಷಕ ಬಹುಮಾನ ಕೂಡ ಸಿಗಲಿದೆ.

ಏಪ್ರಿಲ್ 12ರವರೆಗೆ ಅವಕಾಶ
ಈಗಾಗಲೇ ಪಾಲಿಕೆ ಖಾತೆಗೆ ಸಾಕಷ್ಟು ಸೆಲ್ಫಿ ಫೋಟೊ ಟ್ಯಾಗ್ ಆಗುತ್ತಿದ್ದು, ಯುವಜನರ ಮೂಲಕವೇ ಮತ ಜಾಗೃತಿ ಪಾಲಿಕೆ ಮುಂದಾಗಿರುವುದು ಶ್ಲಾಘನೀಯ. ಏಪ್ರಿಲ್ 12ರವರೆಗೆ ಯುವ ಸಮೂಹ ತಮ್ಮ ಸೆಲ್ಫಿ ಫೋಟೋ ಒಂದು ಪೋಸ್ಟ್ ಮಾಡಲು ಪಾಲಿಕೆ ಅವಕಾಶ ಕಲ್ಪಿಸಿದೆ.

ಐಡಿ ಕಾರ್ಡ್ ಹಿಡಿದು ಸೆಲ್ಫಿ ಫೋಟೋ
ಒಬ್ಬರು ತಮ್ಮ ವೋಟರ್ ಐಡಿ ಕಾರ್ಡಿನೊಂದಿಗೆ ಸೆಲ್ಫಿ ತೆಗೆದು ಕಳುಹಿಸಬಹುದು ಅಥವಾ ಗ್ರೂಪ್ ನಲ್ಲಿ ಎಲ್ಲರೂ ಒಟ್ಟಿಗೆ ಐಡಿ ಕಾರ್ಡ್ ಹಿಡಿದು ಸೆಲ್ಫಿ ಫೋಟೋವನ್ನು ಪೋಸ್ಟ್ ಮಾಡಬಹುದು. 1 ಸಾವಿರಕ್ಕೂ ಹೆಚ್ಚು ಸೆಲ್ಫಿ ಫೋಟೋ ಬರಬಹುದೆಂದು ಪಾಲಿಕೆ ನಿರೀಕ್ಷಿಸಿದೆ.

ಮತದಾನದಿಂದ ಹಿಂದುಳಿಯಬೇಡಿ
ಈಗಾಗಲೇ ಮೈಸೂರು ಮಹಾನಗರ ಪಾಲಿಕೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಮತ ಜಾಗೃತಿ ಆರಂಭಿಸಿದೆ. ಶಾಲಾ ಕಾಲೇಜುಗಳಲ್ಲಿ ಜಾಥಾ ಮಾಡುವ ಮೂಲಕ ಯಾರು ಮತದಾನದಿಂದ ಹಿಂದುಳಿಯಬಾರದು ಎಂದು ಅರಿವು ಮೂಡಿಸುತ್ತಿದೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications