ಮೈಸೂರಿಗೆ ಬಂದಿದೆ ಸೀಡ್ಲೆಸ್ ದ್ರಾಕ್ಷಿ, ಹೋಗೋಣ ಬಾರೆ ಮೀನಾಕ್ಷಿ!
ಮೈಸೂರು, ಫೆಬ್ರವರಿ 20 : ಹಸಿರು ಬಣ್ಣದ, ಬೀಜರಹಿತ ದ್ರಾಕ್ಷಿ ಹಣ್ಣಿನ ಋತುಮಾನ ಆರಂಭವಾಗಿದ್ದು, ಬೆಲೆಯೂ ಅಗ್ಗವಾಗಿದೆ. ಮೈಸೂರಿನಲ್ಲಿ 50 ರು.ನಿಂದ 60 ರೂಗೆ ಒಂದು ಕೆ.ಜಿ ದ್ರಾಕ್ಷಿ ಮಾರಾಟವಾಗುತ್ತಿದೆ.
ಮಹಾರಾಷ್ಟ್ರದ ಸಾಂಗ್ಲಿ, ಸೊಲ್ಲಾಪುರದಲ್ಲಿ ಬೆಳೆಯುವ ದ್ರಾಕ್ಷಿ ನಗರದ ಮಾರುಕಟ್ಟೆಗೆ ಬಂದಿದೆ. ಕಳೆದ ಎರಡು ವಾರಗಳ ಹಿಂದೆ 100ರೂ ಕೆ.ಜಿ ಮಾರಾಟವಾಗುತ್ತಿದ್ದ ದ್ರಾಕ್ಷಿ 60 ರೂಗೆ ಕುಸಿದಿದೆ. ರಾಜ್ಯದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬಳ್ಳಾರಿ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಮುಂದಿನ 15 ದಿನಗಳಲ್ಲಿ ರಾಜ್ಯದ ದ್ರಾಕ್ಷಿ ಮಾರುಕಟ್ಟೆಗೆ ಬರುತ್ತದೆ. ಆಗ ದ್ರಾಕ್ಷಿ ಬೆಲೆಯಲ್ಲಿ ಮತ್ತಷ್ಟು ಕುಸಿತವಾಗಬಹುದು ಎಂದು ಹಣ್ಣಿನ ವ್ಯಾಪಾರಿ ರಮೇಶ್ ಹೇಳಿದರು.
ಇನ್ನು ರಾಜ್ಯದ ನಾನಾ ಭಾಗದಿಂದ ಥಾಮ್ಸನ್ ಸೀಡ್ಲೆಸ್, ಶರದ್, ಕೃಷ್ಣ ಶರದ್, ಗ್ಲೋಬ್, ಸೋನಿಧಿಕಾ ಹೀಗೆ ಬಗೆಬಗೆಯ ರುಚಿಕರವಾದ ದ್ರಾಕ್ಷಿ ಹಣ್ಣು ಹಾಗೂ ಕಲ್ಲಂಗಡಿ ಹಣ್ಣುಗಳು ನಗರ ಪ್ರವೇಶಿಸಿವೆ.

ಇತ್ತ ಬೇಸಿಗೆ ಆರಂಭವಾಗಿದ್ದು, ಸೇಬು ಹಣ್ಣಿನ ಋತುಮಾನ ಮುಕ್ತಾಯವಾಗಿದೆ. ಹೀಗಾಗಿ ಹೊರದೇಶದ ಸೇಬುಹಣ್ಣು ಆಮದು ಮಾಡಿಕೊಳ್ಳುತ್ತಿದ್ದು, 140 ರೂಕ್ಕೆ ಒಂದು ಕೆ.ಜಿ ಗುಣಮಟ್ಟದ ಸೇಬು ಮಾರಾಟವಾಗುತ್ತಿದೆ. ದಾಳಿಂಬೆ 80 ರೂ, ಕಿತ್ತಳೆ, ಮೋಸಂಬಿ ರೂ 60, ಸಪೋಟರೂ 40, ಏಲಕ್ಕಿ ಬಾಳೆ ಹಾಗೂಪಚ್ಚಬಾಳೆ 30 ರೂ, ಪಪ್ಪಾಯ, ಕರಬೂಜ, ಪೈನಾಪಲ್ 20 ರೂ ಹಾಗೂ ಕಲ್ಲಂಗಡಿ 15 ರೂಕ್ಕೆ ಕೆ.ಜಿ ಮಾರಾಟವಾಗುತ್ತಿದೆ.
ಕೊತ್ತಂಬರಿ, ಸಬ್ಬಸಿಗೆ, ಪುದೀನಾ, ಕರಿಬೇವು, ದಂಟು5 ರೂಕ್ಕೆ ಒಂದು ಕಂತೆ ಮಾರಾಟವಾಗುತ್ತಿವೆ. ಪಾಲಕ್, ಮೆಂತೆ, ಕೀರೆ ಸೊಪ್ಪು 3 ರೂ.ಗೆ ಒಂದು ಕಂತೆ ಮಾರಾಟವಾಗುತ್ತಿವೆ. ತರಕಾರಿ ಬೆಲೆಯೂ ಸ್ಥಿರವಾಗಿದ್ದು ಬದನೆಕಾಯಿ, ಟೊಮೆಟೊ 10 ರೂ, ಎಲೆಕೋಸು, ಮೂಲಂಗಿ, ಈರುಳ್ಳಿ ದಪ್ಪ15 ರೂ, ಸಣ್ಣ ಈರುಳ್ಳಿ 12ಕ್ಕೆಕೆ.ಜಿ ಮಾರಾಟವಾಗುತ್ತಿವೆ. ಕ್ಯಾರೆಟ್, ಹೂಕೋಸು, ಗೆಡ್ಡೆಕೋಸು, ಸೀಮೆಬದನೆ, ದುಂಡು ಬದನೆ, ಮೂಲಂಗಿ, ಕುಂಬಳಕಾಯಿ, ಸಾಂಬಾರ್ ಸೌತೆಕಾಯಿ, ಪಡವಲಕಾಯಿ, ಫಾರಂ ಬೆಳ್ಳುಳ್ಳಿ 20 ರೂಕ್ಕೆ ಒಂದು ಕೆ.ಜಿ. ಮಾರಾಟವಾಗುತ್ತಿವೆ.
ಬೀಟ್ರೂಟ್, ಅವರೆಕಾಯಿ, ಹಸಿಬಟಾಣಿ, ಫಾರಂ ಬೀನ್ಸ್, ಭಜಿಮೆಣಸಿನಕಾಯಿ, ಆಲೂಗಡ್ಡೆ 30, ಮೆಣಸಿನಕಾಯಿ, ದಪ್ಪಮೆಣಸಿನಕಾಯಿ, ಹಾಗಲಕಾಯಿ, ಹಿರೇಕಾಯಿ, ಸುವರ್ಣಗೆಡ್ಡೆ, ಬೆಂಡೆಕಾಯಿ, ತೊಂಡೆಕಾಯಿ, 40ಕ್ಕೆ ಕೆ.ಜಿ ಮಾರಾಟವಾಗುತ್ತಿವೆ. ಶುಂಠಿ 70 ರೂ, ನುಗ್ಗೆಕಾಯಿ 60 ರೂ ಕ್ಕೆ ಕೆ.ಜಿ ಮಾರಾಟವಾಗುತ್ತಿವೆ.
-
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ











Click it and Unblock the Notifications