ಮೈಸೂರು ವಿವಿ ರಕ್ಷಣಾ ಸಿಬ್ಬಂದಿ ವೇತನಕ್ಕೆ ಬಿತ್ತು ಕತ್ತರಿ!
ಮೈಸೂರು, ಜುಲೈ 21 : ಮೈಸೂರು ವಿವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಸಿಬ್ಬಂದಿಗೆ 2 ತಿಂಗಳಿನಿಂದ ವೇತನೇ ಸಿಕ್ಕಿಲ್ಲ. ಹೌದು, ಇವರನ್ನು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡಿರುವ ಖಾಸಗಿ ರಕ್ಷಣಾ ಸಂಸ್ಥೆಯ ಲೋಪದಿಂದಾಗಿ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ.
ಬೆಂಗಳೂರು ಮೂಲದ ಕ್ಯಾನನ್ ಡಿಟೆಕ್ಟಿವ್ ಸೆಕ್ಯುರಿಟಿ ಸರ್ವಿಸ್ ಸಂಸ್ಥೆಯು ಮೈಸೂರು ವಿವಿಗೆ ಭದ್ರತೆ ನೀಡಲು ಗುತ್ತಿಗೆ ಪಡೆದಿದೆ. 2016ರ ಆಗಸ್ಟ್ ತಿಂಗಳಿನಿಂದ ವಿವಿ ವ್ಯಾಪ್ತಿಯ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಕೇಂದ್ರಗಳಲ್ಲಿ ಸೇವೆ ನೀಡುತ್ತಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ 95 ಸಿಬ್ಬಂದಿಗೆ ಈಗ ವೇತನವೇ ಇಲ್ಲದಂತಾಗಿದೆ.

ವೇತನ ನೀಡದಿರುವುದಕ್ಕೆ ಕಾರಣ
ಕಾರ್ಮಿಕ ಕಾನೂನು ಸೇವೆಗಳ ಪ್ರಕಾರ ನೌಕರರಿಗೆ ಪಿಎಫ್ ಹಾಗೂ ಇಎಸ್ಐ ಸೌಲಭ್ಯವನ್ನು ನೀಡಬೇಕು. ಆದರೆ, ಈ ಮೇಲಿನ ಸೌಲಭ್ಯವನ್ನು ನೀಡದಿರುವ ಕಾರಣ, ಸಂಸ್ಥೆಗೆ ವಿವಿಯು ಹಣ ನೀಡುವುದನ್ನು ನಿಲ್ಲಿಸಿದೆ. ಫೆಬ್ರವರಿಯಿಂದ ಸಂಸ್ಥೆಯು ಪಿಎಫ್, ಇಎಸ್ ಐ ನೀಡಿಲ್ಲ. ಹಾಗಾಗಿ ಮೇ, ಹಾಗೂ ಜೂನ್ ತಿಂಗಳು ಸಂಸ್ಥೆಯು ಸಿಬ್ಬಂದಿಗೆ ವೇತನ ನೀಡಿಲ್ಲ. ಇನ್ನೊಂದು ತಿಂಗಳು ಮಾತ್ರ ಸಂಸ್ಥೆಗೆ ಗುತ್ತಿಗೆ ಅವಧಿಯಿದ್ದು, ನಂತರ ಟೆಂಡರ್ ಕರೆದು ಹೊಸ ಸಂಸ್ಥೆಯನ್ನು ನೇಮಿಸಿಕೊಳ್ಳುತ್ತೇವೆ ಎನ್ನುತ್ತಾರೆ ಮೈಸೂರು ವಿವಿ ಕುಲಸಚಿವೆ ವಿ. ವಿ ಭಾರತಿ.
ಸಂಬಳ ನೀಡಿಲ್ಲವಾದ್ರೂ ದಿನಕ್ಕೆ 12 ಗಂಟೆ ಕರ್ತವ್ಯ
'ಈಗ ನಮಗೆ ರೂ, 8500 ನೀಡಲಾಗುತ್ತಿದೆ. ಒಟ್ಟು ರೂ, 13000 ವೇತನ ನೀಡುವುದಾಗಿ ಒಪ್ಪಂದವಾಗಿತ್ತು. ಆದರೆ, ಈವರೆಗೆ ಅಷ್ಟೂ ವೇತನವನ್ನು ನೀಡಿಲ್ಲ. ವೇತನ ಚೀಟಿ(ಸ್ಯಾಲರಿ ಸ್ಲಿಪ್)ಯನ್ನೂ ನೀಡಿಲ್ಲ. ಹಾಗಾಗಿ ನಮಗೆ ಎಷ್ಟು ಹಣ ಪಿಎಫ್ ಗಾಗಿ ಮುರಿದುಕೊಳ್ಳಲಾಗುತ್ತಿದೆ ಎಂಬ ಮಾಹಿತಿಯಿಲ್ಲ. ದಿನಕ್ಕೆ 12 ಗಂಟೆ ದುಡಿಯುತ್ತೇವೆ' ಎಂದು ರಕ್ಷಣಾ ಸಿಬ್ಬಂದಿಯೊಬ್ಬರು ತಿಳಿಸುತ್ತಾರೆ.
ರಕ್ಷಣಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣರವನ್ನು ಫೋನ್ ಸಂಪರ್ಕಕ್ಕೆ ಪ್ರಯತ್ನಿಸಿದರೂ ಅವರು ದೊರಕದೇ ಇರುವುದು ಬೇಸರದ ಸಂಗತಿ. ಇನ್ನಾದರೂ ವಿವಿ ಆಡಳಿತ ಮಂಡಳಿ ಇವರ ಪರಿಶ್ರಮಕ್ಕೆ ಸಂಬಳವನ್ನು ನೀಡುವತ್ತ ಮುಂದಾಗಬೇಕೆಂಬುದು 'ಒನ್ ಇಂಡಿಯಾ' ಅಭಿಲಾಷೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications