ಮಳೆರಾಯನ ಓಲೈಕೆಗೆ ಎಚ್ಡಿ ಕೋಟೆಯಲ್ಲಿ ಕಪ್ಪೆ ಮೆರವಣಿಗೆ
ಮೈಸೂರು, ಏಪ್ರಿಲ್ 18 : ಬೇಸಿಗೆಯ ಬಿಸಿಲು ತಲೆಸುಡುತ್ತಿದ್ದರೆ, ಗಿಡಮರಗಳು ಒಣಗುತ್ತಿವೆ. ಭೂಮಿ ಕಾದು ಕಬ್ಬಿಣವಾಗುತ್ತಿದೆ. ಬೆಳೆ ಬೆಳೆಯುವುದಿರಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇದೀಗ ನಿರ್ಮಾಣವಾಗಿದೆ. ಹೋಮಹವನ ಮಾಡಿದಾಗಲೂ ವರುಣದೇವ ಬಗ್ಗದಿದ್ದಾಗ ಜನರಿಗೆ ಉಳಿದದ್ದು ಒಂದೇ ದಾರಿ, ಕಪ್ಪೆ ಮೆರವಣಿಗೆ!
ಇದೇನಪ್ಪಾ ಕಪ್ಪೆ ಮೆರವಣಿಗೆ ಎಂದು ಅಚ್ಚರಿಪಡಬೇಡಿ. ಜಿಲ್ಲೆಯ ಕೆಲವೆಡೆ ಮಳೆಯಾಗಿದ್ದರೆ ಮತ್ತೆ ಕೆಲವೆಡೆ ಒಂದೇ ಒಂದು ಹನಿಯೂ ಜಿನುಗಿಲ್ಲ. ಬೆವರಿನಿಂದ ಅಂಗಿ ಒದ್ದೆಯಾಗುತ್ತಿದೆಯೇ ಹೊರತು ಇಳೆ ತಣಿಯುತ್ತಿಲ್ಲ. ಮಳೆ ಬಾರದೆ ಇರುವ ಕಾರಣ ಮಳೆಗಾಗಿ ವಿವಿಧ ಆಚರಣೆಗಳನ್ನು ಜನ ಮಾಡುತ್ತಿದ್ದು ಅದರಲ್ಲಿ ಇದೂ ಒಂದಾಗಿದೆ.
ಮಳೆಗಾಲ ಹತ್ತಿರ ಬಂದಂತೆಲ್ಲ ಚರಂಡಿಯಲ್ಲಿ ಕುಳಿತ ಕಪ್ಪೆಗಳು ಒಡರ್ ಒಡರ್ ಎಂದು ಸದ್ದು ಮಾಡುವುದು ಸಾಮಾನ್ಯ ಸಂಗತಿ. ಈ ಕಾರಣದಿಂದಲೋ ಏನೋ ಹಳ್ಳಿಗಳಲ್ಲಿ ಕಪ್ಪೆಗಳ ಮೆರವಣಿಗೆ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳುವ ನಂಬಿಕೆ ಜಾರಿಯಲ್ಲಿದೆ. ಇದನ್ನು ಮೂಢನಂಬಿಕೆ ಅಂದರೂ ಮಳೆಗಾಗಿ ಜನರು ಎಷ್ಟು ಪರಿತಪಿಸುತ್ತಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆ. [ಮುನಿಸಿಕೊಂಡಿರುವ ವರುಣ ಮಹಾಶಯನಿಗಾಗಿ ಕತ್ತೆಗಳ ಮದುವೆ]

ಹಿಂದಿನ ಕಾಲದಲ್ಲಿ ಮಳೆ ಬಾರದಿದ್ದಾಗ ಏನೇನೆಲ್ಲ ಸಂಪ್ರದಾಯವನ್ನು ಮಾಡುತ್ತಿದ್ದರೋ ಅದನ್ನು ಈಗ ಮಾಡಲು ಆರಂಭಿಸಿದ್ದಾರೆ. ತಾತಮುತ್ತಾಂದಿರ ಕಾಲದಲ್ಲಿ ನಡೆಯುತ್ತಿದ್ದ ಆಚರಣೆಯನ್ನು ಮೌಢ್ಯ ಎಂದು ಟೀಕಿಸುತ್ತಲೇ ಬಂದಿದ್ದರೂ ಇದೀಗ ಕೆಲವೆಡೆ ಆವತ್ತಿನ ಸಂಪ್ರದಾಯವನ್ನು ಮತ್ತೆ ಆಚರಣೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸುತ್ತಿರುವುದು ಕಂಡು ಬರುತ್ತಿದೆ.
ಕೆಲ ದಿನಗಳ ಹಿಂದೆಯಷ್ಟೆ ಶ್ರೀರಂಗಪಟ್ಟಣದ ಅರಕೆರೆಯಲ್ಲಿ ಕತ್ತೆಗೆ ಮದುವೆ ಮಾಡಲಾಗಿತ್ತು. ಇದೀಗ ಎಚ್.ಡಿ.ಕೋಟೆ ತಾಲೂಕಿನ ಸರಗೂರು ಸಮೀಪವಿರುವ ಎನ್ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಕ್ಕಹಳ್ಳಿ ಕಾಲೋನಿ ಗ್ರಾಮದಲ್ಲಿ ಮಳೆಗಾಗಿ ಮಕ್ಕಳು ಒನಕೆಯಲ್ಲಿ ಕಪ್ಪೆಯನ್ನು ಕಟ್ಟಿ ಊರಿನ ತುಂಬಾ ಮೆರವಣಿಗೆ ಮಾಡಿದ್ದಾರೆ. [ಕತ್ತಿ ಲಗ್ನಾ ಮಾಡಿದ್ರ... ಮಳಿ ಹೆಂಗ ಬರತದ?]
ಪ್ರತಿ ಮನೆಗಳಿಗೆ ತೆರಳಿ ಕಪ್ಪೆಗೆ ನೀರು ಹಾಕಿಸಿ ತಾವು ನೀರು ಹಾಕಿಸಿಕೊಂಡು ಹುಯ್ಯೋ ಹುಯ್ಯೋ ಮಳೆರಾಯ ಎಂದು ಕರೆಯುತ್ತಾ ಜನರಿಂದ ಕಪ್ಪೆಗೆ ಪೂಜೆ ಮಾಡಿಸಿಕೊಂಡು, ಮನೆಮನೆಯಿಂದ ಸಂಗ್ರಹಿಸಿದ ಆಹಾರ ಪದಾರ್ಥದಿಂದ ಅಡುಗೆ ಮಾಡಿ ಸಹಭೋಜನ ನಡೆಸಲಾಯಿತು. ಕಪ್ಪೆ ಮೆರವಣಿಗೆಯಿಂದ ಮಳೆ ಬರುತ್ತಾ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ












Click it and Unblock the Notifications