ನಂಜನಗೂಡು ರಥದ ಚಕ್ರ ಸಿಲುಕಿ ಆತಂಕ!
ನಂಜನಗೂಡು, ಏ.11: ದಕ್ಷಿಣ ಕಾಶಿ ನಂಜನಗೂಡಿಯಲ್ಲಿ ಮುಂಜಾನೆ ಪಂಚ ಮಹಾರಥೋತ್ಸವ ರಸ್ತೆಯ ಹಳ್ಳಕ್ಕೆ ಸಿಲುಕಿ ಮಧ್ಯದಲ್ಲೇ ನಿಂತ ಪ್ರಸಂಗ ನಡೆಯಿತು. ಸುಮಾರು ಎರಡುಗಂಟೆಗಳ ಕಾಲ ಭಕ್ತರದಲ್ಲಿ ಆತಂಕ ಹುಟ್ಟಿಸಿತ್ತು. ಆದರೆ, ಕೆಲಕಾಲದ ವಿಳಂಬದ ನಂತರ ಪೂಜಾ ಕಾರ್ಯಗಳು ಎಂದಿನಂತೆ ಸಾಗಿದ್ದು, ಭಕ್ತರು ಆತಂಕಪಡುವ ಅಗತ್ಯವಿಲ್ಲ ಎಂದು ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ 5.20 ರಿಂದ ಆರಂಭವಾದ ಇತಿಹಾಸ ಪ್ರಸಿದ್ಧ ಪಂಚ ರಥೋತ್ಸವ ಅರ್ಧಕ್ಕೆ ನಿಂತಿದ್ದರಿಂದ ಭಕ್ತರಲ್ಲಿ ಆತಂಕ ಎದುರಾಯಿತು. ಬೆಳಿಗ್ಗೆ ಪೂಜಾ ಕೈಂಕರ್ಯದ ನಂತರ ರಥಬೀದಿಯಲ್ಲಿ ಸಾಗಿದ ರಥ ರಸ್ತೆಯ ಹಳ್ಳಕ್ಕೆ ಸಿಲುಕಿ ಎರಡು ಗಂಟೆಗೂ ಹೆಚ್ಚು ಕಾಲ ಕದಲದೆ ನಿಂತಿದ್ದು ಆತಂಕಕ್ಕೆ ಕಾರಣವಾಯಿತು.
ಆದರೆ, ಸುಮಾರು 8.10 ರ ಹೊತ್ತಿಗೆ ಮತ್ತೆ ರಥವನ್ನು ಹಳ್ಳದಿಂದ ಮೇಲಕ್ಕೆತ್ತಿ ಉತ್ಸವ ಜರುಗಿಸಲಾಯಿತು. ಆದರೆ, ಮುಂದೆ ಬಂದು ಮತ್ತೊಂದು ಹಳ್ಳಕ್ಕೆ ಸಿಲುಕಿ ವಿಜಯಾ ಬ್ಯಾಂಕ್ ಬಳಿ ನಿಂತಿತು. ಇದಕ್ಕೂ ಮೊದಲು ದೇವಸ್ಥಾನದ ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್ ರವರು ಧಾರ್ಮಿಕ ವಿಧಿ-ವಿಧಾನಗಳು ಹಾಗೂ ಪೂಜಾ ಕೈಂಕರ್ಯ ಹಾಗೂ ಮಹಾ ಮಂಗಳಾರತಿ ನೆರವೇರಿಸಿದರು.
ನೆರೆದಿದ್ದ ಭಕ್ತ ಮಹಾಸ್ತೋಮ ಹರ ಹರ ಮಹದೇವ, ಹರ ಹರ ಶ್ರೀಕಂಠ ಎಂದು ಘೋಷಣೆಗಳನ್ನು ಕೂಗುತ್ತಿದ್ದಂತೆಯೇ ರಥಗಳು ಚಾಲನೆಗೊಂಡವು. ರಥಗಳು ರಾಜ ಬೀದಿಗಳಲ್ಲಿ ಚಲಿಸಿದವು. ಮೊದಲಿಗೆ ಗಣಪತಿ ರಥ, ಶ್ರೀಕಂಠೇಶ್ವರ ಸ್ವಾಮಿ ರಥ (ಗೌತಮ ರಥ), ಚಂಡಿಕೇಶ್ವರ, ಸುಬ್ರಹ್ಮಣ್ಯ ಕೊನೆಯಲ್ಲಿ ಪಾರ್ವತಮ್ಮ ರಥಗಳು ಉತ್ಸವದಲ್ಲಿ ಜತೆಗೂಡಿದವು.

ಶ್ರೀಕಂಠೇಶ್ವರ ಸ್ವಾಮಿಯವರ ವಿಶೇಷ ಹೂವಿನ ಅಲಂಕಾರದ ರಥವನ್ನು ನೋಡಿದ ಭಕ್ತರು ಭಾವ ಪರವಶರಾಗಿ ಹಣ್ಣು ಜವನವನ್ನು ರಥಕ್ಕೆ ಎಸೆದು ತಮ್ಮ ಹರಕೆ ತೀರಿಸಿಕೊಂಡರು.
ಭಕ್ತರ ಆತಂಕ: ಪಂಚ ಮಹಾ ರಥೋತ್ಸವದ ವೇಳೆ ರಥ ಹಳ್ಳಕ್ಕೆ ಸಿಲುಕಿ ನಿಂತು ಅಪಶಕುನವಾಯಿತು ಎಂದು ಭಕ್ತರು ಆತಂಕ ವ್ಯಕ್ತಪಡಿಸಿದರು. ದೇವಸ್ಥಾನದ ಸುತ್ತಮುತ್ತ ಹಾಗೂ ರಾಜಬೀದಿಗಳನ್ನು ದುರಸ್ತಿಗೊಳಿಸಿ ರಥ ಬರಲು ಅನುಕೂಲ ಕಲ್ಪಿಸದೆ ಇರುವುದೇ ಇಂಥ ಅವಘಡಕ್ಕೆ ಕಾರಣ ಎಂದು ಆರೋಪಿಸಿದರು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ಇಂತಹ ಅವಘಡಗಳು ಹೆಚ್ಚಾಗಲಿವೆ ಎಂದು ಆತಂಕದಿಂದ ಅಲ್ಲಿ ನೆರೆದಿದ್ದ ಭಕ್ತರು ಅಳಲು ತೋಡಿಕೊಂಡರು.ಪಟ್ಟಣದಲ್ಲಿ ಅನೇಕ ಸಂಘ-ಸಂಸ್ಥೆಗಳು, ದೇಗುಲದ ವತಿಯಿಂದ ಬರುವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿದ್ದರು.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications