ನಂಜನಗೂಡು ರಥದ ಚಕ್ರ ಸಿಲುಕಿ ಆತಂಕ!
ನಂಜನಗೂಡು, ಏ.11: ದಕ್ಷಿಣ ಕಾಶಿ ನಂಜನಗೂಡಿಯಲ್ಲಿ ಮುಂಜಾನೆ ಪಂಚ ಮಹಾರಥೋತ್ಸವ ರಸ್ತೆಯ ಹಳ್ಳಕ್ಕೆ ಸಿಲುಕಿ ಮಧ್ಯದಲ್ಲೇ ನಿಂತ ಪ್ರಸಂಗ ನಡೆಯಿತು. ಸುಮಾರು ಎರಡುಗಂಟೆಗಳ ಕಾಲ ಭಕ್ತರದಲ್ಲಿ ಆತಂಕ ಹುಟ್ಟಿಸಿತ್ತು. ಆದರೆ, ಕೆಲಕಾಲದ ವಿಳಂಬದ ನಂತರ ಪೂಜಾ ಕಾರ್ಯಗಳು ಎಂದಿನಂತೆ ಸಾಗಿದ್ದು, ಭಕ್ತರು ಆತಂಕಪಡುವ ಅಗತ್ಯವಿಲ್ಲ ಎಂದು ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ 5.20 ರಿಂದ ಆರಂಭವಾದ ಇತಿಹಾಸ ಪ್ರಸಿದ್ಧ ಪಂಚ ರಥೋತ್ಸವ ಅರ್ಧಕ್ಕೆ ನಿಂತಿದ್ದರಿಂದ ಭಕ್ತರಲ್ಲಿ ಆತಂಕ ಎದುರಾಯಿತು. ಬೆಳಿಗ್ಗೆ ಪೂಜಾ ಕೈಂಕರ್ಯದ ನಂತರ ರಥಬೀದಿಯಲ್ಲಿ ಸಾಗಿದ ರಥ ರಸ್ತೆಯ ಹಳ್ಳಕ್ಕೆ ಸಿಲುಕಿ ಎರಡು ಗಂಟೆಗೂ ಹೆಚ್ಚು ಕಾಲ ಕದಲದೆ ನಿಂತಿದ್ದು ಆತಂಕಕ್ಕೆ ಕಾರಣವಾಯಿತು.
ಆದರೆ, ಸುಮಾರು 8.10 ರ ಹೊತ್ತಿಗೆ ಮತ್ತೆ ರಥವನ್ನು ಹಳ್ಳದಿಂದ ಮೇಲಕ್ಕೆತ್ತಿ ಉತ್ಸವ ಜರುಗಿಸಲಾಯಿತು. ಆದರೆ, ಮುಂದೆ ಬಂದು ಮತ್ತೊಂದು ಹಳ್ಳಕ್ಕೆ ಸಿಲುಕಿ ವಿಜಯಾ ಬ್ಯಾಂಕ್ ಬಳಿ ನಿಂತಿತು. ಇದಕ್ಕೂ ಮೊದಲು ದೇವಸ್ಥಾನದ ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್ ರವರು ಧಾರ್ಮಿಕ ವಿಧಿ-ವಿಧಾನಗಳು ಹಾಗೂ ಪೂಜಾ ಕೈಂಕರ್ಯ ಹಾಗೂ ಮಹಾ ಮಂಗಳಾರತಿ ನೆರವೇರಿಸಿದರು.
ನೆರೆದಿದ್ದ ಭಕ್ತ ಮಹಾಸ್ತೋಮ ಹರ ಹರ ಮಹದೇವ, ಹರ ಹರ ಶ್ರೀಕಂಠ ಎಂದು ಘೋಷಣೆಗಳನ್ನು ಕೂಗುತ್ತಿದ್ದಂತೆಯೇ ರಥಗಳು ಚಾಲನೆಗೊಂಡವು. ರಥಗಳು ರಾಜ ಬೀದಿಗಳಲ್ಲಿ ಚಲಿಸಿದವು. ಮೊದಲಿಗೆ ಗಣಪತಿ ರಥ, ಶ್ರೀಕಂಠೇಶ್ವರ ಸ್ವಾಮಿ ರಥ (ಗೌತಮ ರಥ), ಚಂಡಿಕೇಶ್ವರ, ಸುಬ್ರಹ್ಮಣ್ಯ ಕೊನೆಯಲ್ಲಿ ಪಾರ್ವತಮ್ಮ ರಥಗಳು ಉತ್ಸವದಲ್ಲಿ ಜತೆಗೂಡಿದವು.

ಶ್ರೀಕಂಠೇಶ್ವರ ಸ್ವಾಮಿಯವರ ವಿಶೇಷ ಹೂವಿನ ಅಲಂಕಾರದ ರಥವನ್ನು ನೋಡಿದ ಭಕ್ತರು ಭಾವ ಪರವಶರಾಗಿ ಹಣ್ಣು ಜವನವನ್ನು ರಥಕ್ಕೆ ಎಸೆದು ತಮ್ಮ ಹರಕೆ ತೀರಿಸಿಕೊಂಡರು.
ಭಕ್ತರ ಆತಂಕ: ಪಂಚ ಮಹಾ ರಥೋತ್ಸವದ ವೇಳೆ ರಥ ಹಳ್ಳಕ್ಕೆ ಸಿಲುಕಿ ನಿಂತು ಅಪಶಕುನವಾಯಿತು ಎಂದು ಭಕ್ತರು ಆತಂಕ ವ್ಯಕ್ತಪಡಿಸಿದರು. ದೇವಸ್ಥಾನದ ಸುತ್ತಮುತ್ತ ಹಾಗೂ ರಾಜಬೀದಿಗಳನ್ನು ದುರಸ್ತಿಗೊಳಿಸಿ ರಥ ಬರಲು ಅನುಕೂಲ ಕಲ್ಪಿಸದೆ ಇರುವುದೇ ಇಂಥ ಅವಘಡಕ್ಕೆ ಕಾರಣ ಎಂದು ಆರೋಪಿಸಿದರು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ಇಂತಹ ಅವಘಡಗಳು ಹೆಚ್ಚಾಗಲಿವೆ ಎಂದು ಆತಂಕದಿಂದ ಅಲ್ಲಿ ನೆರೆದಿದ್ದ ಭಕ್ತರು ಅಳಲು ತೋಡಿಕೊಂಡರು.ಪಟ್ಟಣದಲ್ಲಿ ಅನೇಕ ಸಂಘ-ಸಂಸ್ಥೆಗಳು, ದೇಗುಲದ ವತಿಯಿಂದ ಬರುವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications