ಮೈಸೂರು ಝೂ ಮಾಹಿತಿ ಕುರಿತಾಗಿ ಮೈ ಝೂ ಅಪ್ಲಿಕೇಷನ್ ಬಿಡುಗಡೆ
ಮೈಸೂರು, ಡಿಸೆಂಬರ್ 19 : ಪ್ರವಾಸಿಗರಿಗೆ ಮೃಗಾಲಯದ ಸಮಗ್ರ ಮಾಹಿತಿಯನ್ನು ತಿಳಿಸುವ ಮೈಜೂ ಅಪ್ಲಿಕೇಷನ್ ಒಂದನ್ನು ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಲಾಯಿತು.
ಮೂಲತಃ ಮೈಸೂರಿನ ಕೆಸರೆ ನಿವಾಸಿಯಾದ, ಯುನೈಟೆಡ್ ಕಿಂಗ್ಡಂನ ಜೀನಿಯಸ್ ಲೀಡ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾಗಿರುವ ದೀಪಕ್ ರಾಯ್ ಈ ಕುರಿತು ಮಾತನಾಡಿ, ಮೃಗಾಲಯದ ನಕ್ಷೆ ಹಾಗೂ ಸ್ಥಳ ವೀಕ್ಷಿಸಲು, ಯಾವ ಕಡೆಗಳಲ್ಲಿ ಯಾವ ಪ್ರಾಣಿ ಇದೆ ಎಂಬುದೂ ಸೇರಿದಂತೆ, ಆ ಪ್ರಾಣಿಯ ಸಮಗ್ರ ಮಾಹಿತಿಯೂ ಆ್ಯಪ್ನಲ್ಲಿ ಲಭ್ಯವಿರುತ್ತದೆ. ಅಲ್ಲದೇ ಮೃಗಾಲಯದಲ್ಲಿನ ಕುಡಿಯುವ ನೀರು, ಶೌಚಾಲಯ, ಊಟೋಪಚಾರ ವ್ಯವಸ್ಥೆ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ವಿವರಿಸಿದರು.
ಆಪ್ ಮೂಲಕವೇ ಯಾವುದೇ ಬ್ಯಾಂಕ್ನ ಕಾರ್ಡ್ ಬಳಸಿ ಮೃಗಾಲಯ ಪ್ರವೇಶದ ಟಿಕೆಟ್ ಸಹ ಕೊಳ್ಳ ಬಹುದಾಗಿದೆ. ಅಲ್ಲದೆ ಮೊಬೈಲ್ ವಾಲೆಟ್ ಮೂಲಕ ಮೃಗಾಲಯ ದತ್ತು ಸ್ವೀಕಾರ ಯೋಜನೆಗೂ ಒಳಪಡಬಹುದಾಗಿದೆ.

ಜೀನಿಯಸ್ ಲೀಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 3.5 ಲಕ್ಷ ರೂ.ಗಳಲ್ಲಿ 'ಮೈಜೂ' ಆಪ್ ಮೈಸೂರು ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡಿದೆ. ಇದರ ಬಳಕೆ ಮೂಲಕ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭ ಮೃಗಾಲಯದಲ್ಲಿರುವ ಅಗತ್ಯ ಸೌಲಭ್ಯಗಳ ನೆರವು ಪಡೆಯುವ ಜತೆಗೆ ಟಿಕೇಟ್ ಖರೀದಿ, ಮೃಗಾಲಯಕ್ಕೆ ವಂತಿಗೆ ನೀಡಲೂ ಸಾಧ್ಯವಾಗಲಿದೆ.
ಕರ್ನಾಟಕ ಮೃಗಾಲಯ ಪ್ರಾಧಿಕಾರ, ಚಾಮರಾಜೇಂದ್ರ ಮೃಗಾಲಯದ ವತಿಯಿಂದ ಸೋಮವಾರದಿಂದ ಆರಂಭಗೊಂಡ ನಾಲ್ಕು ದಿನಗಳ ಅಖಿಲ ಭಾರತ ಮೃಗಾಲಯ ನಿರ್ದೇಶಕರ ಸಮ್ಮೇಳನದಲ್ಲಿ 'ಮೈಜೂ' ಆ್ಯಪ್ನ್ನು ಬಿಡುಗಡೆ ಮಾಡಲಾಯಿತು. ದೀಪಕ್ ರಾಯ್ ಅವರು ಇದನ್ನು ಅಭಿವೃದ್ಧಿ ಮಾಡಿದ್ದು, ಇದರಲ್ಲಿ ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುವ ಪ್ರಯತ್ನ ಮಾಡಲಾಗಿದೆ.
ರಾತ್ರಿ ಸಫಾರಿಗೆ ಚಿಂತನೆ :
ರಾತ್ರಿ ಸಫಾರಿಗೆ ಯಾವುದೇ ಪ್ರಸ್ತಾವನೆ ಬಂದರೆ ಸಾಧಕ-ಬಾಧಕ ಪರಿಶೀಲಿಸಿ ಅನುಮತಿ ನೀಡಲು ಕೇಂದ್ರ ಮೃಗಾಲಯ ಪ್ರಾಧಿಕಾರ ಸಿದ್ಧವಿದೆ. ಈ ಹಿಂದೆ ಬನ್ನೇರುಘಟ್ಟ ಮೃಗಾಲಯಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಇನ್ನೂ ಆನ್ ಜೂ ಮಾದರಿಯಲ್ಲಿ ಮೃಗಾಲಯಗಳ ಅಭಿವೃದ್ಧಿಗೆ ಚಿಂತನೆ ನಡೆದಿದೆ. ಪ್ರಾಣಿಗಳಿಗೆ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಆನ್ ಜೂ ಅತ್ಯಗತ್ಯವಾಗಿದೆ ಎನ್ನುತ್ತಾರೆ ಅಧಿಕಾರಿಗಳು. .
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications