ಮೈಸೂರು : ಹೀಗಿರುತ್ತೆ ಯದುವೀರ ದತ್ತು ಸ್ವೀಕಾರ ಸಮಾರಂಭ
ಮೈಸೂರು, ಫೆ. 19: ಮೈಸೂರು ಸಂಸ್ಥಾನದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಯದುವೀರ ಗೋಪಾಲರಾಜ ಅರಸ್ ಅವರನ್ನು ದತ್ತು ಪಡೆಯುವ ಕಾರ್ಯಕ್ರಮಕ್ಕೆ ಮೈಸೂರಿನಲ್ಲಿ ಸಕಲ ತಯಾರಿ ನಡೆಯುತ್ತಿದೆ.
ಯದುವೀರ ಅರಸ್ ಅವರನ್ನು ಬೆಟ್ಟದ ಕೋಟೆ ಕುಟುಂಬದಿಂದ ರಾಜ ಕುಟುಂಬಕ್ಕೆ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಫೆ. 23ರಂದು ಅರಮನೆಯ ಕಲ್ಯಾಣ ಮಂಟಪದಲ್ಲಿ ನಡೆಸಲಾಗುವುದು. ಇದೇ ಕಲ್ಯಾಣ ಮಂಟಪದಲ್ಲಿ ಪ್ರಮೋದಾ ದೇವಿ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವಿವಾಹ ಜರುಗಿತ್ತು. ಅರಮನೆಯ ಪುರೋಹಿತರು ನಿಗದಿಪಡಿಸಿರುವಂತೆ ಮಧ್ಯಾಹ್ನ 1.20 ರಿಂದ 1.52ರೊಳಗೆ ದತ್ತು ಪಡೆಯುವ ಕಾರ್ಯಕ್ರಮ ನಡೆಯಲಿದೆ. [ಯದುವೀರ ಕೃತಜ್ಞತೆ]

ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ ಆಯ್ದ ವ್ಯಕ್ತಿಗಳಿಗೆ ರಾಜ ಕುಟುಂಬದ ಸದಸ್ಯರು ಆಹ್ವಾನ ಪತ್ರಿಕೆ ನೀಡಲು ಆರಂಭಿಸಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವವರು ನಿಗದಿಪಡಿಸಿದ ದಿರಿಸು (ದರ್ಬಾರ್ ದಿರಿಸು / ರಾಷ್ಟ್ರೀಯ ದಿರಿಸು / ಲಾಂಚ್ ಸೂಟ್) ಧರಿಸಿರಬೇಕು. ದತ್ತು ಸ್ವೀಕಾರ ಕಾರ್ಯಕ್ರಮದ ಸ್ಥಳದಲ್ಲಿ ಮಧ್ಯಾಹ್ನ 12.45 ಗಂಟೆಗೆ ಹಾಜರಿರಬೇಕು. [ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಘೋಷಣೆ]
ಅತಿಥಿಗಳು ಬ್ರಹ್ಮಪುರಿ ಗೇಟು ಮತ್ತು ಮದನ ವಿಲಾಸ ಪೋರ್ಟಿಕೊ ಮೂಲಕ ಒಳ ಪ್ರವೇಶಿಸಲು ಅವಕಾಶವಿದೆ.
ಹೇಗೆ ನಡೆಯುತ್ತೆ ಮೆರವಣಿಗೆ : ದತ್ತು ಸ್ವೀಕರಿಸಿದ ನಂತರ ಸಂಜೆ 6.30 ಗಂಟೆಗೆ ಮೈಸೂರು ರಾಜ ಕುಟುಂಬದ ಸಂಪ್ರದಾಯದಂತೆ ಸಾರ್ವಜನಿಕ ಮೆರವಣಿಗೆ ಆಯೋಜಿಸಲಾಗಿದೆ. ಮೈಸೂರು ಅರಮನೆಯ ಆನೆಬಾಗಿಲಿನಿಂದ ಮೆರವಣಿಗೆ ಆರಂಭವಾಗಲಿದೆ. ಬಲರಾಮ ಗೇಟ್ ಕೋಟೆ ಗಣಪತಿ ದೇಗುಲದ ಮಾರ್ಗದಲ್ಲಿ ಮುಂದುವರಿಯಲಿದೆ. [ಪ್ರಮೋದಾ ದೇವಿ ಮೇಲೆ ಅಸಮಾಧಾನ]
ಚಾಮರಾಜ ಮೂರ್ತಿ ವೃತ್ತವನ್ನು ಸುತ್ತುಹಾಕಿ ಕೋಟೆ ಆಂಜನೇಯ ದೇಗುಲವನ್ನು ತಲುಪಲಿದೆ. ಅರಮನೆಯನ್ನು ಪ್ರವೇಶಿಸಿ ಜಯರಾಮ ಗೇಟ್ ಮೂಲಕ ಅರಮನೆಯನ್ನು ಪ್ರವೇಶಿಸಿ ವರಾಹ ದೇಗುಲ (ಸೋಮೇಶ್ವರ ದೇಗುಲ ಹಾಗೂ ತ್ರಿನೇಶ್ವರ ದೇಗುಲ) ಪ್ರವೇಶಿಸಲಿದೆ. ನಂತರ ಚಾಮುಂಡಿ ತೊಟ್ಟಿ ಮೂಲಕ ಆನೆಬಾಗಿಲು ಪ್ರವೇಶಿಸಲಿದೆ.
ಅಂದು ಸಂಜೆ 6.30ರ ನಂತರ ಅರಮನೆಯಲ್ಲಿ ದೀಪ ಹಚ್ಚಲಾಗುವುದು.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications