ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ ವಿವಾದ
ಮೈಸೂರು, ಫೆಬ್ರವರಿ 27: ಒಂದು ದಿನದ ಹಿಂದೆ ಮೈಸೂರು ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. "ನನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ, ಯುದ್ಧ" ಎಂಬ ಕಾರ್ಗಿಲ್ ಹುತಾತ್ಮ ಕ್ಯಾಪ್ಟನ್ ಮಂಗಲ್ ದೀಪ್ ಸಿಂಗ್ ಮಗಳು ಗುರ್ಮೆಹರ್ ಪೋಸ್ಟ್ ಮಾಡಿದ್ದರು. [ಹೋರಾಟದಿಂದ ಹಿಂದೆ ಸರಿದ ಕೌರ್ ಗೆ ಪ್ರತಾಪ್ ತಿರುಗೇಟು]
Dear Media, don't u know the difference between comparison and metaphor or analogy? pic.twitter.com/kgP881HxRg
— Pratap Simha (@mepratap) 27 February 2017
ಆ ಹೇಳಿಕೆಯನ್ನು ಹಾಕಿ, ಅದರ ಪಕ್ಕದಲ್ಲೇ ದಾವೂದ್ ಇಬ್ರಾಹಿಂನ ಫೋಟೋ, 1993ರಲ್ಲಿ ಜನರನ್ನು ಕೊಂದಿದ್ದು ನಾನಲ್ಲ, ಬಾಂಬ್ ಎಂಬ ಹೇಳಿಕೆ ಇರುವಂಥದ್ದನ್ನು ಶಂಖ್ ನಾದ್ ಹೆಸರಿನಲ್ಲಿ ಹಾಕಲಾಗಿತ್ತು. ಅದನ್ನು ಪ್ರತಾಪ್ ಸಿಂಹ ಅವರು ಷೇರ್ ಮಾಡಿದ್ದರು. ಜತೆಗೆ ದೇಶವಿರೋಧಿ ಕೆಲಸಕ್ಕೆ ಪೊಲೀಸನ ಮಗನಾಗಿದ್ದ ದಾವೂದ್ ಇಬ್ರಾಹಿಂ ತನ್ನ ತಂದೆ ಹೆಸರನ್ನು ಬಳಸಿರಲಿಲ್ಲ ಎಂಬ ಒಕ್ಕಣೆ ಸಹ ಅದರಲ್ಲಿತ್ತು.[ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ ಗುರ್ಮೆಹರ್ ಕೌರ್]

ಅದನ್ನು ಪ್ರತಾಪ್ ಸಿಂಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಷೇರ್ ಮಾಡಿದ್ದರು. ಆ ನಂತರ ವೀರೇಂದ್ರ ಸೆಹ್ವಾಗ್ ಅವರ ಟ್ವೀಟ್ ವೊಂದನ್ನು ಸಹ ಷೇರ್ ಮಾಡಿದ್ದಾರೆ. ಆದರೆ ಆ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ವಿರೋಧ ವ್ಯಕ್ತವಾದಾಗ, ಫೇಸ್ ಬುಕ್ ನಲ್ಲಿ ಬಂದದ್ದನ್ನು ಮತ್ತೆ ಟ್ವೀಟ್ ಮಾಡಿದ್ದೇನೆ ಅಷ್ಟೇ. ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ನನ್ನ ಕ್ಷೇತ್ರದಲ್ಲಿ ಬರವಿದೆ. ಅದರಿಂದ ಹೊರಬರುವ ದಾರಿ ತೋರಿಸಿ ಮಾಧ್ಯಮಗಳೇ ಎಂದು ಮತ್ತೆ ಟ್ವೀಟ್ ಮಾಡಿದ್ದಾರೆ.
— Pratap Simha (@mepratap) 26 February 2017
ಅದಾದ ನಂತರ ಆ ರೀತಿ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣ, ವಾಟ್ಸ್ ಅಪ್ ಗಳಲ್ಲಿ ಹರಿದಾಡುತ್ತಿರುವ ಇನ್ನಷ್ಟು ಸಂದೇಶಗಳನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಹಿಟ್ಲರ್, ಯಹೂದಿಗಳನ್ನು ಕೊಂದಿದ್ದು ನಾನಲ್ಲ, ವಿಷಾನಿಲ. ಒಸಾಮ ಬಿನ್ ಲಾಡೆನ್ ಚಿತ್ರದಲ್ಲಿ, ಜನರನ್ನು ಕೊಂದಿದ್ದು ನಾನಲ್ಲ, ಬಾಂಬ್, ಕೃಷ್ಣಮೃಗದ ಚಿತ್ರ ಹಾಕಿ, ಭಾಯ್ ನನ್ನನ್ನು ಕೊಂದದ್ದಲ್ಲ, ಗುಂಡು ಎನ್ನುವಂಥ ಟ್ವೀಟ್ ಮಾಡಿದ್ದಾರೆ.[ಮತ್ತೆ ಸುದ್ದಿಯಲ್ಲಿ ಸೆಹ್ವಾಗ್, ಬ್ಯಾಟ್ ಬೀಸಿದ್ದು ಯಾರಿಗೆ?]
ಮುಂದುವರಿದು, ಪ್ರಿಯ ಮಾಧ್ಯಮದವರೇ ಹೋಲಿಕೆ ಮತ್ತು ರೂಪಕ ಅಥವಾ ಸಾದೃಶ್ಯದ ವ್ಯತ್ಯಾಸ ನಿಮಗೆ ಗೊತ್ತಿಲ್ಲವೇ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications