Mysuru: ಮೈಸೂರಿನಲ್ಲಿ ಮತ್ತೆ ಅವಳಿ ಚಿತ್ರಮಂದಿರಗಳು ನೆಲಸಮ
ಮೈಸೂರು, ಮಾರ್ಚ್ 05: ಕೋವಿಡ್ ನಂತರ ಮೈಸೂರಿನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಒಂದೊಂದಾಗಿ ನೆಲಸಮವಾಗುತ್ತಿದ್ದು, ಈ ಸಾಲಿಗೆ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಸೇರಿಕೊಂಡಂತಾಗಿದೆ. ಕನ್ನಡ ಚಿತ್ರಗಳು ಮಾತ್ರವಲ್ಲದೇ ಹಿಂದಿ, ತೆಲುಗು, ಇಂಗ್ಲೀಷ್, ತಮಿಳು ಸಹಿತ ನಾನಾ ಭಾಷೆಗಳ ಚಿತ್ರ ಪ್ರದರ್ಶನದ ಮೂಲಕ ಮನೆಮಾತಾಗಿದ್ದ ಸ್ಟರ್ಲಿಂಗ್ ಹಾಗೂ ಸ್ಕೈಲೈನ್ ಚಿತ್ರಮಂದಿರಗಳು ಕೋವಿಡ್ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕೆಲ ವರ್ಷಗಳ ಹಿಂದೆಯೇ ಬಂದ್ ಆಗಿದ್ದವು.
ದಿನ ಕಳೆದಂತೆ ಬಂದ್ ಆಗಿದ್ದ ಅವಳಿ ಚಿತ್ರಮಂದಿರಗಳನ್ನು ಇದೀಗ ನೆಲಸಮ ಮಾಡಲಾಗಿದೆ. ಈಗಾಗಲೇ ಮೈಸೂರಿನಲ್ಲಿ ರಣಜಿತ್, ಅಪೇರಾ, ಶಾಂತಲಾ, ತಿಬ್ಬಾದೇವಿ, ಗಣೇಶ, ರತ್ನ, ಒಲಂಪಿಯಾ ಚಿತ್ರಮಂದಿರಗಳು ನೆಲಸಮಗೊಂಡಿವೆ. ಇತ್ತೀಚೆಗೆ ಲಕ್ಷ್ಮೀ ಹಾಗೂ ಸರಸ್ವತಿ ಚಿತ್ರಮಂದಿರಗಳು ನೆಲಸಮಗೊಂಡಿದ್ದವು. ಅವುಗಳ ಸಾಲಿಗೆ ಇದೀಗ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರಮಂದಿಗಳು ಸೇರಿದ್ದು ಸಿನಿಪ್ರಿಯರಿಗೆ ಬೇಸರ ತರಿಸಿದೆ.

ಮೈಸೂರಿನಲ್ಲೀಗ ಕೇವಲ ಬೆರಳೆಣಿಕೆಯಷ್ಟು ಚಿತ್ರಮಂದಿರಗಳು ಮಾತ್ರ ಇದ್ದು ಅವುಗಳನ್ನಾದರೂ ಉಳಿಸಿಕೊಳ್ಳಬೇಕು ಎಂಬುದು ಸಿನಿಮಾ ಪ್ರೇಕ್ಷಕರ ಆಶಯವಾಗಿದೆ.
ಬಾಂಬೆಯ ಗಂಗಾ ಜಮುನ, ಬೆಂಗಳೂರಿನ ಬ್ಲೂಮೂನ್ ಮತ್ತು ಬ್ಲೂ ಡೈಮಂಡ್ ಮಾದರಿಯಲ್ಲೇ ಮೈಸೂರಿನಲ್ಲಿ ಸ್ಟರ್ಲಿಂಗ್ ಹಾಗೂ ಸ್ಕೈಲೇನ್ ಚಿತ್ರಮಂದಿರ ನಿರ್ಮಿಸಲಾಗಿತ್ತು. 1974ರಲ್ಲಿ ಸ್ಟರ್ಲಿಂಗ್ ಆರಂಭವಾದರೆ, 1978ರಲ್ಲಿ ಸ್ಕೈಲೇನ್ ಆರಂಭವಾಯಿತು. ಆರಂಭದಲ್ಲಿ ಹೆಚ್ಚು ಪ್ರೇಕ್ಷಕರಿಲ್ಲದೆ ಹೊರೆಯಾಗಿ ಪರಿಣಮಿಸಿತು. ಕ್ರಮೇಣ ಇಂಗ್ಲಿಷ್ ಚಿತ್ರಗಳನ್ನು ಪ್ರದರ್ಶನ ಮಾಡಲು ಆರಂಭಿಸಿದ ನಂತರ ಚಿತ್ರಮಂದಿರದ ಅದೃಷ್ಟ ಬದಲಾಯಿತು. ನಂತರ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲಾರಂಭಿಸಿದರು.
ಹಿಂದಿ ಚಿತ್ರಗಳೂ ಮಾಲೀಕರ ಕೈ ಹಿಡಿದವು. ಅಮಿತಾಬ್ ಬಚ್ಚನ್ ನಟನೆಯ ಡಾನ್, ಸಿಲ್ವೆಸ್ಟರ್ ಸ್ಟಲ್ಲೋನ್ ಅಭಿನಯದ ಸ್ಪೆಷಲಿಸ್ಟ್, ಕೋಬ್ರಾ, ಲಿಯೊನಾರ್ಡ್ ಡಿಕಾಪ್ರಿಯೊ ಅವರ ಟೈಟಾನಿಕ್, ಜುರಾಸಿಕ್ ಪಾರ್ಕ್ ಸೇರಿದಂತೆ ಜಾಕಿಚಾನ್ ನಟನೆಯ ಬಹುತೇಕ ಜನಪ್ರಿಯ ಇಂಗ್ಲಿಷ್ ಸಿನಿಮಾಗಳು ಈ ಅವಳಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿವೆ.
ಹೆಚ್ಚಾದ ಆಸ್ತಿ ತೆರಿಗೆ ಮತ್ತು ನಿರ್ವಾಹಣ ವೆಚ್ಚ, ಸಿನಿ ರಸಿಕರ ಕೊರತೆ, ಮಲ್ಟಿಫೆಕ್ಸ್ ಅಬ್ಬರ ಸೇರಿದಂತೆ ಹತ್ತಾರು ಕಾರಣಗಳಿಂದ ಮೈಸೂರಿನಲ್ಲಿ 10ಕ್ಕೂ ಹೆಚ್ಚು ಚಿತ್ರಮಂದಿಗಳು ನೆಲಸಮಗೊಂಡಿದ್ದವು. ಕಳೆದ 2024ರ ನವೆಂಬರ್ನಲ್ಲಿ ಸರಸ್ವತಿ ಚಿತ್ರಮಂದಿರವೂ ಇದೇ ಕಾರಣಕ್ಕೆ ನೆಲಸಮವಾಗಿತ್ತು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾವಿರಾರು ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದ್ದ 20ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 10ಕ್ಕೂ ಹೆಚ್ಚು ಚಿತ್ರಮಂದಿರಗಳು ಈಗಾಗಲೇ ನೆಲಸಮಗೊಂಡಿದ್ದು, ಬೆರಳೆಣಿಕೆಯಷ್ಟು ಮಾತ್ರ ಇಂದಿಗೂ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಹೀಗೆ ಕಾಲದ ಹೊಡೆತಕ್ಕೆ ಕಣ್ಮರೆಯಾದ ಚಿತ್ರಮಂದಿರಗಳ ಪಟ್ಟಿಯೂ ದೊಡ್ಡದಿದೆ. ರಣಜಿ, ಅಪೆರಾ, ಶಾಲಿಮಾರ್, ಶ್ರೀನಾಗರಾಜ, ರತ್ನ, ಶಾಂತಲಾ, ಲಕ್ಷ್ಮೀ, ಗೋಕುಲ, ಗಣೇಶ, ಓಲಂಪಿಯಾ, ರಿಜೆನ್ಸಿ, ವಿದ್ಯಾರಣ್ಯ, ಚಾಮುಂಡೇಶ್ವರಿ, ಉಮಾ ಚಿತ್ರಮಂದಿರಗಳು ಈಗಾಗಲೇ ಕಣ್ಮರೆಯಾಗಿವೆ.
-
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications