ಮೈಸೂರು: ಕಸದ ತೊಟ್ಟಿಯಲ್ಲಿ ವ್ಯಕ್ತಿಯ ಕಾಲು, ಶವ ಅಂದುಕೊಂಡವರು ಬೆಸ್ತು
ಮೈಸೂರು, ಡಿಸೆಂಬರ್ 25: ಕಸದ ತೊಟ್ಟಿಯಲ್ಲಿ ವ್ಯಕ್ತಿಯ ಕಾಲು ಕಂಡ ಮೈಸೂರಿನ ಜನ ಹೌಹಾರಿ ಹೋಗಿದ್ದಾರೆ. ಆದರೆ ಸತ್ಯ ಗೊತ್ತಾದ ನಂತರ 'ಛೇ..' ಎಂದು ನಗುತ್ತಾ ತಿಳಿಯಾಗಿದ್ದಾರೆ.
ಇಂದು ಬೆಳಿಗ್ಗೆ ಮಂಡಿ ಮೊಹಲ್ಲಾದ ಆರ್ ಎಂಸಿ ಬಳಿ ಮಾಮೂಲಿನಂತೆ ಪೌರ ಕಾರ್ಮಿಕರು ಕಸ ಒಯ್ಯಲು ಗಾಡಿ ತಂದಿದ್ದಾರೆ. ಕಸ ತುಂಬಿದ್ದ ತೊಟ್ಟಿಯನ್ನು ಆಟೋಮ್ಯಾಟಿಕ್ ಯಂತ್ರಕ್ಕೆ ಕಟ್ಟಿ ವಾಹನದ ಒಳಕ್ಕೆ ಹಾಕಿಕೊಳ್ಳುವಾಗ ವ್ಯಕ್ತಿಯೊಬ್ಬನ ಕಾಲುಗಳು ಕಸದ ತೊಟ್ಟಿಯ ಅಡಿಯಲ್ಲಿ ಕಣ್ಣಿಗೆ ಬಿದ್ದಿದೆ.
ಕಸದ ತೊಟ್ಟಿಯಲ್ಲಿ ವ್ಯಕ್ತಿಯ ಕಾಲುಗಳು ನೋಡಿ ಸುತ್ತ-ಮುತ್ತ ಇದ್ದ ಜನ ಗಾಬರಿಗೊಂಡು, 'ಶವವೇ ಇರಬೇಕು' ಎಂದು ಅನುಮಾನ ಗೊಂಡಿದ್ದಾರೆ. ಕೂಡಲೇ ಗಾಡಿಗೆ ಏರಿಸಲಾಗಿದ್ದ ತೊಟ್ಟಿಯನ್ನು ಕೆಳಕ್ಕೆ ಇಳಿಸಿ ಕಸವನ್ನು ಕೆಳಗೆ ಹಾಕಿದರೆ ತೊಟ್ಟಿಯ ಒಳಗಿಂದ ವ್ಯಕ್ತಿಯೊಬ್ಬ ಕೆಳಕ್ಕೆ ಉದುರಿದ್ದಾನೆ.

ಕೆಳಕ್ಕೆ ಉದುರಿದ ವ್ಯಕ್ತಿ ಬದುಕಿದ್ದು, ಸಾರಾಯಿ ಅಮಲಿನಲ್ಲಿ ರಾತ್ರಿ ಬಂದು ತೊಟ್ಟಿಯಲ್ಲಿ ಮಲಗಿದ್ದನಂತೆ. ಆತ ಮಲಗಿರುವುದು ನೋಡದೇ ಜನ ಆತನ ಮೇಲೆಯೇ ಕಸ ಸುರಿದು ಹೋಗಿದ್ದಾರೆ. ಪೌರ ಕಾರ್ಮಿಕರೂ ಕಸದ ತೊಟ್ಟಿ ತಳದಲ್ಲಿ ವ್ಯಕ್ತಿ ಇರುವುದು ನೋಡದೇ ವಾಹನಕ್ಕೆ ತುಂಬಿಸಿದ್ದಾರೆ.
ಕಸದ ತೊಟ್ಟಿಯಿಂದ ಕೆಳಕ್ಕೆ ಬಿದ್ದ ಕುಡುಕನನ್ನು ಕೂಡಲೇ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಕಸದ ಜೊತೆ ಡಂಪಿಂಗ್ ಯಾರ್ಡ್ ಗೆ ಸೇರಬೇಕಿದ್ದ ಕುಡುಕ ಜನರ ಸಹಾಯದಿಂದ ಆಸ್ಪತ್ರೆ ಬೆಡ್ ಮೇಲಿದ್ದಾನೆ. ಆತನ ವೈಯಕ್ತಿಕ ಮಾಹಿತಿ ಲಭ್ಯವಾಗಿಲ್ಲ. ಆತ ಅಲೆಮಾರಿ ಇರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications