ಬ್ಲೂ ವೇಲ್ ಹುಡುಕಾಟದಲ್ಲಿ ಮೈಸೂರಿಗೆ ದೇಶದಲ್ಲಿ 9ನೇ ಸ್ಥಾನ!
ಮೈಸೂರು, ಸೆಪ್ಟೆಂಬರ್ 9: ಆತ್ಮಹತ್ಯೆಗೆ ಪ್ರಚೋದನೆ ನೀಡುವ ಅಪಾಯಕಾರಿ ಬ್ಲೂ ವೇಲ್ ಆಟಕ್ಕಾಗಿ ಹುಡುಕಾಟ ನಡೆಸಿದವರಲ್ಲಿ ಮೈಸೂರು ನಗರ ದೇಶದಲ್ಲೇ 9 ನೇ ಸ್ಥಾನದಲ್ಲಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ .
ಕಳೆದ ಮೂರು ತಿಂಗಳ ಅವಧಿಯಲ್ಲಿ ದೇಶದ 44 ನಗರಗಳಲ್ಲಿ ಅಪಾಯಕಾರಿ ಬ್ಲೂ ವೇಲ್ ಗೇಮ್ ಆಟಕ್ಕಾಗಿ ಹುಡುಕಾಟ ನಡೆಸಿದವರಲ್ಲಿ ಮೈಸೂರು 9ನೇಸ್ಥಾನ ಪಡೆದಿದ್ದರೆ , ಕೋಲ್ಕತ್ತಾ ಮೊದಲ ಸ್ಥಾನ ಪಡೆದಿದೆ! ಸಿಲಿಕಾನ್ ಸಿಟಿ ಬೆಂಗಳೂರು 23 ನೇಸ್ಥಾನದಲ್ಲಿದೆ . ಮೈಸೂರು ಹಾಗೂ ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಯಾವುದೇ ನಗರಗಳು ಇದರಲ್ಲಿ ಸ್ಥಾನ ಪಡೆದಿಲ್ಲ ಎಂದು ಗೂಗಲ್ ಟ್ರೆಂಡ್ಸ್ ಅಂಕಿ ಅಂಶಗಳು ತಿಳಿಸುತ್ತವೆ .

ಇಂತಹ ವಿವಾದಾತ್ಮಕ ಆನ್ ಲೈನ್ ವಿಡಿಯೋ ಗೇಮ್ ಚಾಲೆಂಜ್ ಗೆ ಮಕ್ಕಳು ಬಲಿಯಾಗುತ್ತಿರುವುದು ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ , ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಆಲೋಚನೆ ಮಾಡಬೇಕು . ಆದರೆ ಅಪಾಯಕಾರಿ ವಿಡಿಯೋ ಗೇಮ್ ಮೂಲಕ ಆತ್ಮಹತ್ಯೆಗೆ ಮುಂದಾಗುತ್ತಿರುವುದು ದೇಶವೇ ಕಳವಳ ವ್ಯಕ್ತಪಡಿಸುವ ವಿಷಯವಾಗಿದೆ . ಈ ಸಂಬಂಧ ದೇಶದ ಎಲ್ಲ ಶಾಲೆಗಳ ಮುಖ್ಯಸ್ಥರಿಗೆ ಪತ್ರ ಬರೆದು ಮಕ್ಕಳ ವರ್ತನೆ ಮೇಲೆ ನಿಗಾ ಇಡುವಂತೆ ಸೂಚನೆ ನೀಡಿದ್ದಾರೆ .
ಈಗಾಗಲೇ ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿ ಸೇಂಟ್ ಆನ್ಸ್ ಪಬ್ಲಿಕ್ ಶಾಲೆಗೆ ಮೇನಕಾ ಗಾಂಧಿ, ಬರೆದಿರುವ ಪತ್ರ ತಲುಪಿದೆ. ಬ್ಲೂ ವೇಲ್ ಗೇಮ್ ದುಷ್ಪರಿಣಾಮದ ಬಗ್ಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಮೂಲಕ ಅದಕ್ಕೆ ಇನ್ನಷ್ಟು ಮಕ್ಕಳು ಬಲಿಯಾಗುವುದನ್ನು ತಡೆಯುವಂತೆ ಶಾಲೆಗಳ ಮುಖ್ಯಸ್ಥರನ್ನು ಕೋರಿದ್ದಾರೆ. ಅಗತ್ಯವಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆಮಾಡಿ ಅದರ ನೆರವು ಪಡೆಯುವುದಕ್ಕೆ ಸೂಚಿಸಿದೆ.
ಈ ಕುರಿತಾಗಿ ಮಾಹಿತಿ ನೀಡಿದ ಡಿಡಿಪಿಐ ಡಾ.ವರ್ಧನ್ , ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಒಟ್ಟು 3309 ಶಾಲೆಗಳಿವೆ . ಅಪಾಯಕಾರಿ ಬ್ಲೂ ವೇಲ್ ಗೇಮ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ನಮಗೆ ಪತ್ರ ಬಂದಿಲ್ಲ . ಆದರೆ ರಾಜ್ಯ ಸರ್ಕಾರದಿಂದ ಇದರ ಬಗ್ಗೆ ಜಾಗೃತಿ ಮೂಡಿಸುವಂತೆ ಪತ್ರದ ಮೂಲಕ ಸೂಚನೆ ಬಂದಿದೆ. ಶಾಲೆಯ ಮುಖ್ಯಸ್ಥರು ಮಕ್ಕಳು ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಈ ಅಪಾಯಕಾರಿ ಗೇಮ್ ಬಗ್ಗೆ ಜಾಗೃತಿ ಮೂಡಿಸುವಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಪಾಯಕಾರಿ ಆಟದ ಬಗ್ಗೆ ಮಕ್ಕಳು ಒಗ್ಗದ ರೀತಿಯಲ್ಲಿ ಅವರ ಮನಸ್ಸನ್ನು ಪರಿವರ್ತನೆ ಮಾಡಲು ಹಲವಾರು ಕಾರ್ಯಕ್ರಮ ಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಗೂಗಲ್ ತಜ್ಞರು ಅಭಿಪ್ರಾಯಪಟ್ಟಿರುವಂತೆ ಬ್ಲೂ ವೇಲ್ ಗೇಮ್ ಗಾಗಿ ಆನ್ ಲೈನ್ ನಲ್ಲಿ ಶೋಧ ನಡೆಸಿದವರೆಲ್ಲರೂ ಗೇಮ್ ಗಾಗಿ ಶೋಧ ನಡೆಸಿದ್ದಾರೆ ಎಂದು ಹೇಳಲಾಗುವುದಿಲ್ಲ. ಈ ಡೆಡ್ಲಿ ಗೇಮ್ ಬಗ್ಗೆ ತಿಳಿದುಕೊಳ್ಳಲು ಹಾಗೂ ಈ ಗೇಮ್ ನಿಂದ ಹೊರಬರುವುದು ಹೇಗೆ ಎಂದು ತಿಳಿಯಲು ಕೂಡ ಸಾಕಷ್ಟು ಮಂದಿ ಅಂತರ್ಜಾಲ ಜಾಲಾಡಿದ್ದಾರೆ ಎಂಬುದು ಅಷ್ಟೇ ಸತ್ಯ. ಒಟ್ಟಾರೆ ಈ ಬ್ಲ್ಯೂ ಗೇಮ್ ಎಂಬ ಪೆಡಂಭೂತ ನಮ್ಮ ಮಕ್ಕಳ ಬಳಿ ಸುಳಿಯದಿದ್ದರೆ ಸಾಕು ಎಂಬುದೇ ನಮ್ಮ ಆಶಯ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications