ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿಗೆ ಉಡುಗೊರೆ ನೀಡಲು ಮೈಸೂರು ಬಿಜೆಪಿ ಘಟಕ ರೆಡಿ

|
Google Oneindia Kannada News

Recommended Video

ಪ್ರಧಾನಿ ಮೋದಿಗೆ ಉಡುಗೊರೆ ನೀಡಲು ಮೈಸೂರು ಬಿಜೆಪಿ ಘಟಕ ರೆಡಿ | Oneindia Kannada

ಮೈಸೂರು, ಏಪ್ರಿಲ್ 9:ಲೋಕಸಭೆ ಚುನಾವಣೆಯ ಪೂರ್ವಭಾವಿಯಾಗಿ ಮೈಸೂರಿಗೆ ಬಿಜೆಪಿ ನಾಯಕ ಪ್ರಧಾನಿ ಮೋದಿ ಆಗಮಿಸಿ ಪ್ರಚಾರ ನಡೆಸಲಿದ್ದು, ಸಕಲ ಸಿದ್ಧತೆಗಳೊಂದಿಗೆ ಮೈಸೂರು ಸಜ್ಜಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಗೆ ಶಾಸಕ ಎಸ್.ಎ ರಾಮದಾಸ್ ವಿಶೇಷ ಉಡುಗೊರೆಯೊಂದನ್ನು ನೀಡಲು ಸಜ್ಜಾಗಿದ್ದಾರೆ. ಸಿಂಹವಾಹಿನಿ ಚಾಮುಂಡೇಶ್ವರಿ ಬೆಳ್ಳಿ ವಿಗ್ರಹವನ್ನು ವಿಶೇಷ ಉಡುಗೊರೆಯಾಗಿ ನೀಡಲಿದ್ದಾರೆ.

 ಮೋದಿ ಚುನಾವಣಾ ಭಾಷಣಕ್ಕೆ ಮೈಸೂರಿನಲ್ಲಿ ಬೃಹತ್ ವೇದಿಕೆ ಸಜ್ಜು ಮೋದಿ ಚುನಾವಣಾ ಭಾಷಣಕ್ಕೆ ಮೈಸೂರಿನಲ್ಲಿ ಬೃಹತ್ ವೇದಿಕೆ ಸಜ್ಜು

ಮೋದಿ ಭಾವಚಿತ್ರ, ಮೋದಿ ರಚಿತ ಸಾಕ್ಷಿ ಭಾವ ಕವನ ಸಂಕಲನದ ಕನ್ನಡ ಅನುವಾದದ ಪ್ರತಿಯನ್ನೂ ಸಹ ನೀಡಲಿದ್ದಾರೆ. ಪ್ರಧಾನಿಗೆ ವಿಶೇಷ ಏಲಕ್ಕಿ ಹಾರ, ರೇಷ್ಮೆ ಶಲ್ಯ ಹೊದಿಸಿ ಸನ್ಮಾನಿಸಲಿದ್ದಾರೆ.

Mysuru BJP leaders are planning to give a special gift to PM Narendra modi

ಈ ಬಗ್ಗೆ ಮಾತನಾಡಿದ ರಾಮದಾಸ್, ಪ್ರಧಾನಿ ಮೋದಿ ದುರ್ಗಾದೇವಿ ಆರಾಧಕರು. ಜೊತೆಗೆ ಚಾಮುಂಡೇಶ್ವರಿ ಅಂದರೂ ವಿಶೇಷ ಭಕ್ತಿ. ಹೀಗಾಗಿ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ ಅವರಿಗೆ ಪ್ರಸಾದ ನೀಡಲಾಗುತ್ತದೆ. ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಮೋದಿ ಪ್ರಸಾದ ಯೋಜನೆ ಅಡಿ 100 ಕೋಟಿ ಅನುದಾನ ನೀಡಿದ್ದಾರೆ. ಅವರಿಗೆ ಉಪಯೋಗವಾಗುವ ವಸ್ತುವನ್ನು ನೀಡುತ್ತಿದ್ದೇವೆ. ಅವರಿಗೆ ಈ ಎಲ್ಲಾ ಉಡುಗೊರೆ ಅರ್ಪಿಸಲಾಗುವುದು. ನಮ್ಮ ಮನೆ ಮಗ ಬಂದಂತೆ ಅನಿಸುತ್ತಿದೆ. ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

Mysuru BJP leaders are planning to give a special gift to PM Narendra modi

ಪೆನ್ಸಿಲ್ ಲೆಡ್ ನಲ್ಲಿ ಮೋದಿ ಭಾವಚಿತ್ರ

ಪ್ರಧಾನಿ ಮೋದಿ ಮೇಲಿನ ಅಭಿಮಾನಕ್ಕೆ ತಿಲಕ್ ನಗರದ ನಂಜುಂಡ ಎಂಬ ಕಲಾವಿದ ಪೆನ್ಸಿಲ್ ಲೆಡ್ ನಲ್ಲಿ ಮೋದಿಯ ಚಹರೆಯನ್ನ ರೂಪಿಸಿ ಗಮನ ಸೆಳೆದಿದ್ದಾರೆ.

 ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರಣಕಹಳೆ, ಬಿಜೆಪಿಯಲ್ಲಿ ಪುಳಕ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರಣಕಹಳೆ, ಬಿಜೆಪಿಯಲ್ಲಿ ಪುಳಕ

ಸುಮಾರು ಎರಡೂವರೆ ಗಂಟೆ ಸಮಯ ತೆಗೆದುಕೊಂಡು ಮೋದಿಯ ಕಲಾಕೃತಿ ರೂಪಿಸಿದ್ದಾರೆ. ಮೆಚ್ಚಿನ ಪ್ರಧಾನಿಗೆ ಕಲಾಕೃತಿಯನ್ನು ಸಲ್ಲಿಸಲು ಕಲಾವಿದ ನಂಜುಂಡ ಕಾತುರದಿಂದ ಕಾಯುತ್ತಿದ್ದಾರೆ. ಇಂದು ಮೈಸೂರಿಗೆ ಆಗಮಿಸಲಿರುವ ಮೋದಿಯವರಿಗೆ ಕಲಾಕೃತಿ ತಲುಪಿಸಲು ನಂಜುಂಡ ಅವರು ಶಾಸಕರ ಸಹಕಾರ ಕೋರಿದ್ದು, ಮೋದಿ ಕೈಗೆ ತಲುಪಬೇಕಿದ್ದಲ್ಲಿ ಸಾಕಷ್ಟು ನಿಯಮಗಳನ್ನ ಪಾಲಿಸಬೇಕಿದ್ದು, ತನಗೆ ಸಹಕರಿಸುವಂತೆ ಶಾಸಕ ರಾಮದಾಸ್ ರವರ ಕೈಗೆ ಕಲಾಕೃತಿ ನೀಡಿದ್ದಾರೆ.

English summary
Mysuru BJP leaders are planning to give a special gift to PM Narendra modi in BJP Rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X