ಮೈಸೂರು-ಬೆಂಗಳೂರು 6 ಪಥದ ರಸ್ತೆ 24 ತಿಂಗಳಲ್ಲಿ ಪೂರ್ಣ
ಮೈಸೂರು, ನವೆಂಬರ್ 29 : ಬೆಂಗಳೂರು-ಮೈಸೂರು 6 ಪಥದ ರಸ್ತೆ ನಿರ್ಮಾಣ ಕಾಮಗಾರಿ 24 ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಡಿಸೆಂಬರ್ನಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.
ಮೈಸೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275ದನ್ನು ವಿಸ್ತರಣೆ ಮಾಡಿ, 10 ಪಥದ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗುತ್ತದೆ. 6 ಪಥದ ಮುಖ್ಯ ರಸ್ತೆ, 2 ಕಡೆಯೂ ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಬೆಂಗಳೂರು-ಮೈಸೂರು 6 ಪಥ ರಸ್ತೆ ಕಾಮಗಾರಿ ಡಿಸೆಂಬರ್ನಲ್ಲಿ ಆರಂಭ
2014ರಲ್ಲಿ ಈ ಯೋಜನೆಗೆ ಒಪ್ಪಿಗೆ ಸಿಕ್ಕಿತ್ತು. 2018ರ ಮಾರ್ಚ್ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ಮಾಡಿದ್ದರು. ವಿವಿಧ ಕಾರಣಗಳಿಂದಾಗಿ ಯೋಜನೆ ಆರಂಭವಾಗುವುದು ವಿಳಂಬವಾಗುತ್ತಿತ್ತು. ಡಿಸೆಂಬರ್ನಲ್ಲಿ ಈಗ ಕಾಮಗಾರಿ ಆರಂಭವಾಗುತ್ತಿದೆ.
ಬೆಂಗಳೂರು-ಮೈಸೂರು : 6 ಪಥ ರಸ್ತೆ ನಿರ್ಮಾಣ
ಮೈಸೂರು-ಬೆಂಗಳೂರು ನಡುವಿನ 117 ಕಿ.ಮೀ. ಮಾರ್ಗವನ್ನು ವಿಸ್ತರಣೆ ಮಾಡಿ 6 ಪಥದ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಯೋಜನೆಗೆ ಶೇ 40ರಷ್ಟು ಅನುದಾನ ನೀಡಲಿದೆ. ಉಳಿದ ಹಣವನ್ನು ಯೋಜನೆ ಗುತ್ತಿಗೆ ಪಡೆದ ಸಂಸ್ಥೆ ಹೂಡಿಕೆ ಮಾಡಲಿದ್ದು, ಟೋಲ್ ಸಂಗ್ರಹ ಮಾಡಲಿದೆ.
ಬೆಂಗಳೂರು-ಮೈಸೂರು ರಸ್ತೆ ಅಗಲೀಕರಣಕ್ಕೆ ಇಂಧನ, ಅರಣ್ಯ ಇಲಾಖೆ ಅಡ್ಡಿ
ಟೆಂಡರ್ ಪ್ರಕ್ರಿಯೆ ಪೂರ್ಣ
Dilip Buildcon Ltd. ಮೈಸೂರು-ಬೆಂಗಳೂರು 6 ಪಥದ ರಸ್ತೆ ನಿರ್ಮಾಣ ಕಾಮಗಾರಿಯ ಟೆಂಡರ್ ಪಡೆದಿದೆ. ಕಂಪನಿ ಕಾಮಗಾರಿಯನ್ನು ಪೂರ್ಣಗೊಳಿಸಲು 30 ತಿಂಗಳ ಡೆಡ್ಲೈನ್ ಪಡೆದಿದೆ. ಆದರೆ, 24 ತಿಂಗಳಿನಲ್ಲಿಯೇ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.
ಡಿಸೆಂಬರ್ 15ಕ್ಕೆ ಹಸ್ತಾಂತರ
6 ಪಥದ ರಸ್ತೆ ಯೋಜನೆಗೆ ಶೇ 82ರಷ್ಟು ಭೂ ಸ್ವಾಧೀನ ಪೂರ್ಣಗೊಂಡಿದೆ. ಡಿಸೆಂಬರ್ 15ರಂದು ಭೂಮಿಯನ್ನು ಕಂಪನಿಗೆ ಹಸ್ತಾಂತರ ಮಾಡಲಾಗುತ್ತದೆ. 6400 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 117 ಕಿ.ಮೀ. ರಸ್ತೆಯನ್ನು ಅಗಲೀಕರಣ ಮಾಡಿ ಅಭಿವೃದ್ಧಿ ಮಾಡಲಾಗುತ್ತದೆ.
ಕಾಮಗಾರಿಗೆ ಸಿದ್ಧತೆ
ಒಟ್ಟು 2 ಹಂತದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ. Dilip Buildcon Ltd. ಕಾಮಗಾರಿ ಆರಂಭಿಸಲು ಹೆದ್ದಾರಿ ಪಕ್ಕದಲ್ಲಿ 10 ಬೇಸ್ ಕ್ಯಾಂಪ್ಗಳನ್ನು ನಿರ್ಮಾಣ ಮಾಡಿದೆ. ಮೊದಲ ಹಂತದಲ್ಲಿ ಬೆಂಗಳೂರು-ನಿಢ್ಲಘಟ್ಟ (56 ಕಿ.ಮೀ) ಕಾಮಗಾರಿಯನ್ನು 1984 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ.
ಮೂಲ ಕೆಲಸ ಆರಂಭ
ಮೈಸೂರು-ಬೆಂಗಳೂರು ರಸ್ತೆಯ ಅಗಲೀಕರಣದ ಮೂಲ ಕೆಲಸಗಳನ್ನು ಆರಂಭಿಸಲಾಗಿದೆ. ಎಲ್ಲಿ ತನಕ ರಸ್ತೆ ಬರಲಿದೆ ಎಂದು ಮಾರ್ಕ್ ಮಾಡಲಾಗಿದ್ದು, ವಿದ್ಯುತ್ ಕಂಬ, ಮರ, ಅಂಗಡಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.
|
ಪ್ರತಾಪ್ ಸಿಂಹ ಟ್ವೀಟ್
ಮೈಸೂರು-ಬೆಂಗಳೂರು ರಸ್ತೆ ಕಾಮಗಾರಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.