ಮೈಸೂರು: ಸ್ಯಾಂಟ್ರೋ ರವಿ ಬ್ಯಾಂಕ್ ಖಾತೆ ಮುಟ್ಟುಗೋಲಿಗೆ ಕ್ರಮ: ಅಲೋಕ್ ಕುಮಾರ್
ಮೈಸೂರು, ಜನವರಿ, 11: ನಾಪತ್ತೆಯಾಗಿರುವ ಸ್ಯಾಂಟ್ರೊ ರವಿ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹುಬ್ಬಳ್ಳಿಯಲ್ಲಿ ತಿಳಿಸಿದರು.
ಮೈಸೂರು
ನಗರ
ಪೊಲೀಸ್
ಆಯುಕ್ತರ
ಕಚೇರಿಯಲ್ಲಿ
ರವಿ
ಪ್ರಕರಣ
ಸಂಬಂಧ
ಪೊಲೀಸ್
ಅಧಿಕಾರಿಗಳ
ಸಭೆ
ನಡೆಸಿದ
ಬಳಿಕ
ಸುದ್ದಿಗಾರರೊಂದಿಗೆ
ಮಾತನಾಡಿದರು.
ಸ್ಯಾಂಟ್ರೊ
ರವಿ
ಬ್ಯಾಂಕ್
ಖಾತೆ
ಮುಟ್ಟುಗೋಲಿಗೆ
ಕ್ರಮ
ಕೈಗೊಳ್ಳಲಾಗಿದೆ.
ಲುಕ್
ಔಟ್
ನೋಟಿಸ್
ಕೂಡ
ಜಾರಿ
ಮಾಡಲಾಗಿದೆ.
ಬೆಂಗಳೂರಿನ
ರಾಜರಾಜೇಶ್ವರಿ
ನಗರದ
ಸ್ಯಾಂಟ್ರೊ
ರವಿ
ಮನೆಯಲ್ಲಿ
ಶೋಧ
ನಡೆಸಿದ್ದೇವೆ.
ಬ್ಯಾಂಕ್
ಖಾತೆ,
ಲಾಕರ್
ಮಾಹಿತಿ
ಸಂಗ್ರಹಿಸಲಾಗಿದೆ.
ಆರೋಪಿ
ಹೊರದೇಶಕ್ಕೆ
ತೆರಳುವ
ಸಾಧ್ಯತೆ
ಇರುವುದರಿಂದ
ಲುಕ್ಔಟ್
ನೋಟಿಸ್
ನೀಡಿದ್ದು,
ಪ್ರಕರಣದ
ತನಿಖೆಯಲ್ಲಿ
ಯಾವುದೇ
ಒತ್ತಡವಿಲ್ಲ
ಎಂದು
ಸ್ಪಷ್ಟಪಡಿಸಿದರು.
ಎನ್ಆರ್ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ ತನ್ವೀರ್ ಸೇಠ್: ಈ ಬಾರಿ ಪ್ರತಿ ಸ್ಫರ್ಧಿ ಯಾರು..?
ಹಲವು ಜಿಲ್ಲೆಗಳಲ್ಲಿ ಶೋಧಕಾರ್ಯ
ರವಿ ವಿರುದ್ಧ ಮೈಸೂರು ನಗರದ ವಿಜಯನಗರ ಠಾಣೆಯಲ್ಲಿ ಅತ್ಯಾಚಾರ ಮತ್ತು ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಆತನ ಪತ್ತೆಗೆ ಮಂಡ್ಯ, ರಾಮನಗರ, ಮೈಸೂರು, ಬೆಂಗಳೂರು, ಗ್ರಾಮಾಂತರ ಜಿಲ್ಲೆಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಹೇಳಿದರು.
ಬ್ಯಾಂಕ್ ಖಾತೆ ಮುಟ್ಟುಗೋಲು
ರವಿ ಅಕ್ರಮವಾಗಿ ಹಣ ಸಂಪಾದನೆ ಮಾಡಿರುವ ಕುರಿತಂತೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ವಿಚಾರಣೆ ನಡೆಸಲಿದ್ದು, ಬ್ಯಾಂಕ್ ಖಾತೆಗೆ ಮುಟ್ಟುಗೋಲಿಗೆ ಕ್ರಮ ವಹಿಸಲಾಗುವುದು. ಸ್ಯಾಂಟ್ರೋ ರವಿ ವಿರುದ್ಧ ದೂರು ನೀಡಿದ್ದ ಸಂತ್ರಸ್ತೆ ಮತ್ತು ಆಕೆಯ ಸೋದರಿಯಿಂದ ಪ್ರಕರಣದ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಪಡೆದರು. ನಗರ ಪೊಲೀಸ್ ಆಯುಕ್ತರ ಕಚೇರಿಗೆ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಅವರೊಂದಿಗೆ ಆಗಮಿಸಿದ ಸಂತ್ರಸ್ತೆ ಮತ್ತು ಆಕೆಯ ಸೋದರಿ, ಇಡೀ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೆ ಆದಷ್ಟು ಬೇಗ ರವಿಯನ್ನು ಬಂಧಿಸಿ ನನಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.