ಮೈಸೂರು ದಸರಾ ಕೆಎಸ್ ಆರ್ಟಿಸಿ ಪ್ಯಾಕೇಜ್ ಟೂರಿಗೆ ಭರ್ಜರಿ ರೆಸ್ಪಾನ್ಸ್
ಮೈಸೂರು, ನವೆಂಬರ್. 2: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ಕೆಎಸ್ ಆರ್ಟಿಸಿ ರೂಪಿಸಿದ್ದ ಪ್ಯಾಕೇಜ್ ಪ್ರವಾಸಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟಾರೆ ಈ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಒಟ್ಟು 4.03 ಲಕ್ಷ ಆದಾಯ ನಿಗಮಕ್ಕೆ ಲಭಿಸಿದೆ.
ಜಲದರ್ಶನಿ, ಗಿರಿದರ್ಶಿನಿ ಹಾಗೂ ದೇವದರ್ಶಿನಿ ಎಂಬ ಮೂರು ಬಗೆಯ ಪ್ಯಾಕೇಜ್ ಪ್ರವಾಸ ಯೋಜನೆಯನ್ನು ಅ. 11ರಿಂದ 25ರವರೆಗೆ ಕೆಎಸ್ ಆರ್ಟಿಸಿ ಜಾರಿಗೆ ತಂದಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ₹ 82,260ನಷ್ಟು ಆದಾಯ ಕಡಿಮೆ ಬಂದಿದ್ದರೂ, ಸಾರ್ವಜನಿಕರು ವ್ಯಕ್ತಪಡಿಸಿದ ಬೇಡಿಕೆಯಿಂದ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು.
ಕಳೆದ ವರ್ಷ ಕೇವಲ 32 ಬಸ್ಗಳನ್ನು ಮಾತ್ರ ಯೋಜನೆಗೆ ಬಳಸಿಕೊಳ್ಳಲಾಗಿತ್ತು. ಈ ಬಾರಿ ಒಟ್ಟು 36 ಬಸ್ಗಳನ್ನು ಬಳಸಿಕೊಳ್ಳಲಾಗಿದೆ.
ಸಾರ್ವಜನಿಕರು ಜಲದರ್ಶಿನಿ ಹಾಗೂ ಗಿರಿದರ್ಶಿನಿಗೆ ತೋರಿಸಿದ ಉತ್ಸಾಹ ದೇವದರ್ಶಿನಿಗೆ ವ್ಯಕ್ತಪಡಿಸಿಲ್ಲ. ಜಲದರ್ಶಿನಿಯಿಂದ 1.86 ಲಕ್ಷ ಆದಾಯ ಬಂದಿದ್ದರೆ, ಗಿರಿದರ್ಶಿನಿಯಿಂದ 1.83 ಲಕ್ಷ ಆದಾಯ ಲಭಿಸಿದೆ. ಆದರೆ, ದೇವದರ್ಶಿನಿಯಿಂದ ಕೇವಲ 33,703 ಮಾತ್ರ ಆದಾಯ ಸಿಕ್ಕಿದೆ.
ದೇವದರ್ಶಿನಿಗೆ ಅತಿ ಕಡಿಮೆ ದರ ನಿಗದಿ ಮಾಡಲಾಗಿತ್ತು. ಆದರೂ, ಪ್ರವಾಸಿಗಳು ಜಲಾಶಯಗಳು ಹಾಗೂ ಬೆಟ್ಟಗುಡ್ಡಗಳನ್ನು ಕಣ್ತುಂಬಿಕೊಳ್ಳಲು ತೋರಿಸಿದ ಉತ್ಸಾಹವನ್ನು ದೇಗುಲಗಳಿಗೆ ತೋರಿಸಿಲ್ಲ. ಈ ಬಾರಿ ಕಡಿಮೆ ಜನರಿದ್ದರೂ ಬಸ್ಗಳನ್ನು ರಿಯಾಯಿತಿ ದರದಲ್ಲಿ ಚಾಲನೆ ಮಾಡಿರುವುದು ವಿಶೇಷ ಎನಿಸಿದೆ.

ಆದಾಯದಲ್ಲಿ ಕೊಂಚ ಇಳಿಕೆ
ಕೆಲವೊಂದು ಸಂದರ್ಭಗಳಲ್ಲಿ ಕೇವಲ ಐದಾರು ಮಂದಿಯಷ್ಟೇ ಪ್ರಯಾಣಿಕರಿದ್ದರೂ ಬಸ್ಗಳನ್ನು ನಿಗದಿಯಂತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹೀಗಾಗಿ, ಬಸ್ಗಳ ಸಂಖ್ಯೆ ಹೆಚ್ಚಾಗಿ ಆದಾಯದಲ್ಲಿ ಕೊಂಚ ಇಳಿಕೆಯಾಗಿದೆ ಎಂದು ಕೆಎಸ್ ಆರ್ಟಿಸಿ ಮೂಲಗಳು ಹೇಳಿವೆ.

ಗಿರಿದರ್ಶಿನಿಗೆ 350 ರೂ. ನಿಗದಿ
ಗಿರಿದರ್ಶಿನಿಯಡಿ 350 ರೂ.ದರ ನಿಗದಿ ಮಾಡಿ ಬಂಡೀಪುರ, ಗೋಪಾಲಸ್ವಾಮಿಬೆಟ್ಟ, ಬಿಳಿಗಿರಿರಂಗನಬೆಟ್ಟ, ನಂಜನಗೂಡು, ಚಾಮುಂಡಿಬೆಟ್ಟಗಳಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಒಟ್ಟು 325 ಕಿ.ಮೀ ಸಂಚಾರ ಇರುತ್ತಿತ್ತು. ಈ ಪ್ಯಾಕೇಜ್ನಡಿ ಮಕ್ಕಳಿಗೆ 175 ರೂ.ದರ ನಿಗದಿಯಾಗಿತ್ತು.

ಜಲದರ್ಶಿನಿಗೆ 375 ರೂ.
ಜಲದರ್ಶಿನಿಯಡಿ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ, ಅಬ್ಬಿಜಲಪಾತ, ರಾಜಾಸೀಟ್, ಹಾರಂಗಿ ಜಲಾಶಯ, ಕೆ.ಆರ್.ಎಸ್ಗಳು ಇದ್ದವು. ಹಿರಿಯರಿಗೆ 375 ರೂ., ಮಕ್ಕಳಿಗೆ 190 ರೂ. ಟಿಕೆಟ್ ದರ ನಿಗದಿಯಾಗಿತ್ತು. ಒಟ್ಟು 350 ಕಿ.ಮೀ. ದೂರದ ಪ್ರಯಾಣ ಇದಾಗಿತ್ತು.

ದೇವದರ್ಶಿನಿಗೆ 275 ರೂ.
ದೇವದರ್ಶಿನಿಯಡಿ ನಂಜನಗೂಡು, ತಲಕಾಡು, ಬ್ಲಫ್, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆ.ಆರ್.ಎಸ್ ಅನ್ನು ಸೇರಿಸಲಾಗಿತ್ತು. ಒಟ್ಟು 250 ಕಿ.ಮೀ ದೂರದ ಈ ಪ್ರಯಾಣಕ್ಕೆ ಹಿರಿಯರಿಗೆ 275 ರೂ. ಹಾಗೂ ಮಕ್ಕಳಿಗೆ 140 ರೂ.ಟಿಕೆಟ್ ದರ ನಿಗದಿಯಾಗಿತ್ತು. ಈ ಯೋಜನೆಯ ಎಲ್ಲಾ ಬಸ್ಗಳೂ ಬೆಳಗ್ಗೆ 6.30ಕ್ಕೆ ಗ್ರಾಮಾಂತರ ಬಸ್ನಿಲ್ದಾಣದಿಂದ ಹೊರಡುತ್ತಿದ್ದವು.
ಮುಂಚಿತವಾಗಿ ಬುಕಿಂಗ್ ಮಾಡುವ ಸೌಲಭ್ಯವನ್ನೂ ಈ ಬಾರಿ ಒದಗಿಸಲಾಗಿತ್ತು. ಒಟ್ಟಿನಲ್ಲಿ ರಾಜ್ಯ ರಸ್ತೆ ಸಾರಿಗೆಯ ಭರ್ಜರಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿರುವುದಂತೂ ಸಂತಸದ ವಿಚಾರವೇ ಸರಿ.
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications