ಮೈಸೂರಲ್ಲಿ ಇದಕ್ಕಿದ್ದ ಹಾಗೆ ಪುಡಿ-ಪುಡಿಯಾಯ್ತು 2000 ನೋಟು…!
ಮೈಸೂರು , ಜನವರಿ 13 : ಇದ್ದಕ್ಕಿದ್ದ ಹಾಗೆ ಹೊಸ ನೋಟಿ ಪುಡಿಪುಡಿಯಾದರೆ ಆಶ್ಚರ್ಯ ಆಗೋದು ಸಾಮಾನ್ಯ, ಕೇಂದ್ರ ಸರ್ಕಾರದ ಅಪನಗದೀಕರಣ ಹಿನ್ನೆಲೆ ಹೊಸ ನೋಟುಗಳು ದೇಶಕ್ಕೆ ಲಗ್ಗೆಯಿಟ್ಟಿದ್ದವು. ಈ ನೋಟುಗಳು ಬೀರುವಿನಲ್ಲಿ ಭದ್ರವಾಗಿ ಇಟ್ಟಜಾಗದಲ್ಲಿಯೇ ಪುಡಿಯಾಗಿರುವ ಘಟನೆ ಮೈಸೂರಿನಲ್ಲಿ ಜರುಗಿದೆ.
ಮೈಸೂರಿನ ಪಡುವಾರಹಳ್ಳಿಯ ವಿನೋದ್ ಕುಮಾರ್ ಡಿಸೆಂಬರ್ 30 ರಂದು ವಿವಿ ಮೊಹಲ್ಲಾದ ಕರ್ನಾಟಕ ಬ್ಯಾಂಕ್ ನಿಂದ 10,000 ಹಣವನ್ನು 2 ಸಾವಿರ ಮುಖಬೆಲೆಯ 4 ನೋಟುಗಳು ಹಾಗೂ 100 ರೂ ಮುಖಬೆಲೆಯ 2 ಸಾವಿರ ಹಣವನ್ನು ಬ್ಯಾಂಕ್ ನಿಂದ ಡ್ರಾ ಮಾಡಿ ತಂದು ಬೀರುವಿನಲ್ಲಿಟ್ಟಿದ್ದರು. ಇಂದು (ಜ.13) ತಮ್ಮ ಜನ್ಮದಿನಕ್ಕೆಂದು ಹೊಸ ಮೊಬೈಲ್ ತೆಗೆದುಕೊಳ್ಳಲು ಬೀರುವಿನಿಂದ ಹಣ ತೆಗೆದು ಕೈಯಲ್ಲಿ ಹಿಡಿದರೆ ಪುಡಿಯಾಗುವುದು ಅನುಭವಕ್ಕೆ ಬಂದಿದೆ.[2000 ರು ನೋಟಿನಲ್ಲಿ ನ್ಯಾನೋ 'ಚಿಪ್' ಇರಲ್ಲ ಹುಡುಕಬೇಡಿ!]

2 ಸಾವಿರ ಮುಖಬೆಲೆಯ 4 ನೋಟುಗಳು ಗಾಂಧೀಜಿ ಭಾವಚಿತ್ರದ ಕಡೆ ಗೋಡೆಯ ಸುಣ್ಣ ಉದುರುವ ರೀತಿ ಉದುರುತ್ತಿದೆ. ಗಾಬರಿಯಿಂದ ಹಣ ತೆಗೆದುಕೊಂಡು ತಾವು ಡ್ರಾ ಮಾಡಿದ ಬ್ಯಾಂಕಿನವರ ಬಳಿ ಹೋದಾಗ, ಬ್ಯಾಂಕಿನವರು ಕರೆನ್ಸಿ ಸರಬರಾಜು ಮಾಡುವ ಎಸ್ಬಿಎಂ ಶಾಖೆಗೆ ಹೋಗುವಂತೆ ತಿಳಿಸಿದರು. ಅಲ್ಲಿ ಯಾವುದೇ ಸಿಬ್ಬಂದಿ ಇರದೆ ಗ್ರಾಹಕ ಕಂಗಾಲಾಗಿದ್ದಾರೆ.[ಬೆಂಗಳೂರಿನಲ್ಲಿ 2000 ರು ನಕಲಿ ನೋಟು, 4 ಬಂಧನ]
ಆರ್ಬಿಐ ಎಡವಟ್ಟು:
ಹೊಸ ನೋಟು ಪೂರೈಕೆಗಾಗಿ ದಿನದ 24 ಗಂಟೆ ಕೆಲಸ ಮಾಡುವ ಆರ್ಬಿಐ ನೋಟು ಮುದ್ರಣಕ್ಕೆ ಗುಣಮಟ್ಟದ ಕಾಗದ ಬಳಸದೆ ಈ ರೀತಿಯ ಎಡವಟ್ಟುಗಳು ಆಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಮೈಸೂರಿನ ಆರ್ಬಿಐ ಸ್ಪಷ್ಟೀಕರಣ ನೀಡಬೇಕೆಂದು ಗ್ರಾಹಕರು ಆಗ್ರಹಿಸಿದ್ದಾರೆ. ವಿಪರ್ಯಾಸವೆಂದರೆ ಮೈಸೂರಿನ ಆರ್ಬಿಐ ನೋಟು ಮುದ್ರಣ ಘಟಕದಲ್ಲಿ ಪ್ರಿಂಟ್ ಆದ 2 ಸಾವಿರ ಮುಖಬೆಲೆಯ ನೋಟು ಈ ರೀತಿ ಆಗಿರುವುದು ಸೋಜಿಗ ತಂದಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications