ಲಕ್ಷ್ಮಣತೀರ್ಥ ನದಿ ನೀರು ಕುಡಿದವರಿಗೆ ದೇವ್ರೇ ಗತಿ
ಮೈಸೂರು ಜಿಲ್ಲೆ ಹುಣಸೂರಿನ ಲಕ್ಷ್ಮಣ ತೀರ್ಥ ನದಿಯ ನೀರಲ್ಲಿ ಕಲ್ಮಶ ಸೇರಿ ಕುಡಿಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ನದಿಯ ದುಃಸ್ಥಿತಿಯ ಬಗ್ಗೆ ವಿವರವಾದ ವರದಿಯಿದು.
ಮೈಸೂರು, ಏಪ್ರಿಲ್ 24: ಮೇಲ್ನೋಟಕ್ಕೆ ಅಚ್ಚ ಹಸಿರಿನಿಂದ ಕಂಗೊಳಿಸುವ ಮೈದಾನದಂತೆ ಕಾಣುವ ಈ ದೃಶ್ಯ ಹುಣಸೂರು ಪಟ್ಟಣದ ಮೂಲಕ ಹಾದು ಹೋಗುವ ಲಕ್ಷ್ಮಣ ತೀರ್ಥ ನದಿಯ ದುಃಸ್ಥಿತಿ ಎಂದರೆ ಅಚ್ಚರಿಯಾಗುತ್ತದೆ. ಅಷ್ಟೇ ಅಲ್ಲ, ಸಣ್ಣದೊಂದು ಆತಂಕವೂ ಶುರುವಾಗುತ್ತದೆ.
ತ್ಯಾಜ್ಯ, ಪಾಚಿ, ಜೊಂಡು ಹುಲ್ಲು, ಜಲಸಸ್ಯಗಳಿಂದ ಕೂಡಿರುವ ಕಲುಷಿತ ನೀರನ್ನು ಅದೆಷ್ಟೋ ಮಂದಿ ಬಳಸುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯದ ಬಗ್ಗೆಯೂ ಪ್ರಶ್ನೆಗಳೇಳುತ್ತಿವೆ. ಕೊಡಗಿನ ಇರ್ಪುನಲ್ಲಿ ಜಲಧಾರೆಯಾಗಿ ಹರಿದು ಬರುವ ಲಕ್ಷ್ಮಣ ತೀರ್ಥ ನದಿ ಇದೇನಾ ಎಂಬ ಎಂದು ಹುಣಸೂರು ಪಟ್ಟಣದ ಹೃದಯ ಭಾಗದಲ್ಲಿ ಹರಿದು ಹೋಗುವ ನದಿಯನ್ನು ನೋಡಿದರೆ ಖಂಡಿತಾ ಅಚ್ಚರಿ ಆಗುತ್ತದೆ.[ಕಿಡಿಗೇಡಿಗಳ ಕೃತ್ಯಕ್ಕೆ ಕಣ್ಣೀರಿಡುತ್ತಿದ್ದಾಳೆ ಸುಳ್ಯದ ಜೀವನದಿ ಪಯಸ್ವಿನಿ]

ಪ್ರತಿ ವರ್ಷ ಬೇಸಿಗೆ ಬರುತ್ತಿದ್ದಂತೆಯೇ ಲಕ್ಷ್ಮಣತೀರ್ಥ ನದಿ ಹುಣಸೂರು ಪಟ್ಟಣದಲ್ಲಿ ಹಸಿರಾಗುವುದು ಹೊಸತೇನಲ್ಲ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಅದರ ವ್ಯಾಪ್ತಿ ಹೆಚ್ಚಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿ ನದಿಯಲ್ಲಿದ್ದ ಕೊಳಚೆ, ಪಾಚಿ ಇನ್ನಿತರ ಎಲ್ಲ ಕಲ್ಮಶಗಳು ಹರಿದು ಹೋಗಿ ನದಿ ಸ್ವಚ್ಛವಾಗಿ ಬಿಡುತ್ತಿತ್ತು.
ಆದರೆ, ಅದ್ಯಾಕೋ ಕಳೆದ ಬಾರಿ ಪ್ರವಾಹ ಸೃಷ್ಟಿಸುವ ಮಳೆ ಬರಲಿಲ್ಲ. ಪರಿಣಾಮ ಲಕ್ಷ್ಮಣತೀರ್ಥ ಶುದ್ಧವಾಗಿಲ್ಲ. ಅದರ ಪರಿಣಾಮ ಈ ಬಾರಿ ದಡದಿಂದ ಆರಂಭವಾಗಿ ನದಿಯನ್ನೇ ಸತ್ತೆ, ಜೊಂಡು ಹುಲ್ಲು, ಪಾಚಿ ಆವರಿಸಿ ಹಸಿರು ಕ್ರಾಂತಿ ಸೃಷ್ಟಿಯಾದಂತೆ ಭಾಸವಾಗುತ್ತಿದೆ.[ಕಪಿಲ ನದಿಯಲ್ಲಿ ಸಿಕ್ಕಿದ್ದು ಮೂರು ಟ್ರ್ಯಾಕ್ಟರ್ ತ್ಯಾಜ್ಯ]
ಇರ್ಪುನಲ್ಲಿ ಈ ನದಿಯ ನೀರನ್ನು ಪವಿತ್ರ ಜೀವಜಲ ಎಂದು ಸೇವಿಸಲಾಗುತ್ತದೆ. ಅದೇ ನದಿ ನಾಗರಹೊಳೆ ಅಭಯಾರಣ್ಯದ ಮೂಲಕ ಹರಿದು ಸುಮಾರು 75 ಕಿ.ಮೀ ಹಾದು ಬಂದು ಹುಣಸೂರು ತಲುಪುವ ವೇಳೆಗೆ ಸಂಪೂರ್ಣ ಕಲ್ಮಶವಾಗಿ ಬಿಡುತ್ತದೆ. ನದಿಯನ್ನೊಮ್ಮೆ ನೋಡಿದರೆ ಕುಡಿಯುವುದಕ್ಕೆ ಅಸಹ್ಯವಾಗುತ್ತದೆ.

ಹುಣಸೂರು ಪಟ್ಟಣದ ತ್ಯಾಜ್ಯ ಈ ನದಿಯನ್ನು ಸೇರುತ್ತಿದೆ. ಜತೆಗೆ ಸಿಕ್ಕಿದ್ದನ್ನೆಲ್ಲ ನದಿಗೆ ಎಸೆದು ತೆಪ್ಪಗೆ ಕೈಕಟ್ಟಿ ಕೂರುವ ಮಂದಿಗೂ ಕೊರತೆಯಿಲ್ಲ. ಆದರೆ ಈ ನದಿಯನ್ನೇ ನಂಬಿ ಹಲವರು ಬದುಕುತ್ತಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚಿನ ಹಳ್ಳಿಗಳು ಇದೇ ನೀರನ್ನು ಬಳಸುತ್ತಿವೆ.
ಹುಣಸೂರು ಪಟ್ಟಣದಲ್ಲಿ ಸಮತಟ್ಟಾಗಿ, ನಿಧಾನವಾಗಿ ಹರಿಯುವ ಕಾರಣ ನದಿಯಲ್ಲಿ ಕೊಳಚೆ, ತ್ಯಾಜ್ಯಗಳೆಲ್ಲವೂ ಸಂಗ್ರಹವಾಗುತ್ತಿದ್ದು, ಇದನ್ನು ವ್ಯಾಪಿಸಿಕೊಂಡು ಪಾಚಿ ಸೇರಿದಂತೆ ಇತರೆ ಜಲ ಸಸ್ಯಗಳು ಹುಲುಸಾಗಿ ಬೆಳೆಯುತ್ತಾ ಇದೊಂದು ನದಿ ಎಂಬ ಕಲ್ಪನೆ ಬಾರದಂತೆ ಮಾಡಿವೆ.
ಜಿಲ್ಲಾಡಳಿತವಾಗಲೀ ತಾಲೂಕು ಆಡಳಿತವಾಗಲೀ ಸಂಬಂಧಿಸಿದ ಜನಪ್ರತಿನಿಧಿಗಳಾಗಲೀ ಮನಸ್ಸು ಮಾಡಿದರೆ ಗಬ್ಬೆದ್ದು ನಾರುತ್ತಿರುವ ಲಕ್ಷ್ಮಣತೀರ್ಥ ನದಿಯನ್ನು ಸ್ವಚ್ಛಗೊಳಿಸಬಹುದು. ಆದರೆ ಇದು ಪ್ರತಿ ವರ್ಷ ಇದ್ದದ್ದೇ, ಮಳೆಗಾಲದಲ್ಲಿ ಸರಿ ಹೋಗುತ್ತದೆ ಎಂಬ ಅಭಿಪ್ರಾಯ ಮೂಡಿರುವುದರಿಂದ ಯಾರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ.[ತುಂಬಿ ಹರಿವ ಲಕ್ಷ್ಮಣತೀರ್ಥವನ್ನು ನೋಡುವುದೇ ಆನಂದ]
ಪಟ್ಟಣದಿಂದ ಹರಿದು ಬರುವ ತ್ಯಾಜ್ಯವು ನೀರನ್ನು ತಡೆದು, ನದಿಯನ್ನು ಆವರಿಸಿರುವ ಜಲಸಸ್ಯಗಳನ್ನು ತೆಗೆದು ಸ್ವಚ್ಛಗೊಳಿಸುವ ಮೂಲಕ ಲಕ್ಷ್ಮಣ ತೀರ್ಥ ನದಿಗೆ ಮರುಹುಟ್ಟು ನೀಡಬಹುದು. ಆದರೆ ಸದ್ಯಕ್ಕೆ ಆ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅದರ ಪರಿಣಾಮವೇ ಗಬ್ಬೆದ್ದು ನಾರುತ್ತಾ ಅಸಹ್ಯ ಹುಟ್ಟಿಸುತ್ತಿದೆ.
ಇನ್ನು ಮುಂದೆಯಾದರೂ ಪರಿಸರದ ಬಗ್ಗೆ ಕಾಳಜಿಯಿರುವ ಮಂದಿ ಇದರತ್ತ ಗಮನಹರಿಸಿ, ಲಕ್ಷ್ಮಣತೀರ್ಥ ನದಿಗೆ ಕೊಳಚೆಯಿಂದ ಮುಕ್ತಿ ತೋರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications