ಮೈಸೂರಿನ ನೀಲಿಯ ಬಾನಂಗಳದಲ್ಲಿ ಹಾರಾಡಿದ ಹಾವು, ರೈಲು, ಹುಲಿ... !
ಮೈಸೂರು, ಸೆಪ್ಟೆಂಬರ್.30:ಸೂತ್ರದ ಹಿಡಿತದಿಂದ ಬಾನಂಗಳದಲ್ಲಿ ತೇಲಾಡುತ್ತ, ಒದ್ದಾಡುತ್ತ, ನಸು ನಗುತ್ತ, ಮನಸ್ಸಿಗೆ ಮುದ ನೀಡುತ್ತ, ಬಾನು-ಭುವಿಗಳನ್ನು ಅಪ್ಪಿಕೊಳ್ಳಲು ಹಾತೊರೆಯುವ ಗಾಳಿಪಟಗಳ ಚೆಲ್ಲಾಟವೇ ಅದ್ಭುತ.
ಕತ್ತು ಎತ್ತರಿಸಿ ಕಣ್ಣು ಪಿಳುಕಿಸುತ್ತ, ಬಾನಂಗಳದ ಕಡೆ ಅತ್ತಿಂದಿತ್ತ ಕಣ್ಣೋಟ ಹಾಯಿಸುತ್ತ ಸೂರ್ಯನೆದುರಿಸಿ ಗಾಳಿಪಟಗಳನ್ನು ನೋಡುವುದೇ ಒಂದು ಹೊಸ ಲೋಕದಲ್ಲಿ ವಿರಮಿಸಿದಷ್ಟು ಖುಷಿ ನೀಡುವ ಅನುಭವ.
ಚಿಕ್ಕ ಮಕ್ಕಳಷ್ಟೇ ಅಲ್ಲದೆ ಎಲ್ಲ ವಯೋಮಾನದವರನ್ನು ಆಕರ್ಷಿಸುವ ತಾಕತ್ತಿದೆ ಗಾಳಿಪಟಕ್ಕೆ. ಅಂದಹಾಗೆ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಗಾಳಿಪಟ ಉತ್ಸವ ಶನಿವಾರ (ಸೆ. 29) ಮತ್ತು ಭಾನುವಾರ (ಸೆ. 30) ಆಯೋಜನೆಯಾಗಿದೆ.

ಹೆಲಿಪ್ಯಾಡ್ ನ ವಿಶಾಲ ಮೈದಾನದಲ್ಲಿ ಈ ಉತ್ಸವ ಏರ್ಪಡಿಸಲಾಗಿದ್ದು, ಸಣ್ಣವರಿಂದ ಹಿಡಿದು ವೃದ್ಧರವರೆಗೂ ಗಾಳಿಪಟ ಹಬ್ಬವನ್ನು ಎಂಜಾಯ್ ಮಾಡುತ್ತಿದ್ದಾರೆ.
ರಂಗುರಂಗಿನ ವಿವಿಧ ಕಲ್ಪನೆಗಳಲ್ಲಿ ಸಾಕಾರಗೊಂಡ, ಪಕ್ಷಿ, ಪ್ರಾಣಿಗಳ ಗಾಳಿಪಟಗಳು ಆಕಾಶದಲ್ಲಿ ಹಾರಿ ಹೊಂಗನಸು ಸೃಷ್ಟಿಸಿದವು. ಚಿತ್ತಾರದ ಮೂಲಕ ಮಾಯಾಂಗನೆಯಂತೆ ಕಣ್ಮುಂದೆ ಹಾದುಹೋದವು. ಬಣ್ಣಬಣ್ಣದ ಹಕ್ಕಿಗಳು ಸಾಲಾಗಿ ಹೋಗುವಂತೆ ಕಂಡು ಬರುವ ದೃಶ್ಯಾವಳಿ ಮನಸ್ಸನ್ನು ಪುಳಕಗೊಳಿಸುತ್ತಿದೆ.

ಹಾವು, ರೈಲು, ಹುಲಿ ಸೇರಿದಂತೆ ವಿವಿಧ ಪ್ರಾಣಿಗಳ ಚಿತ್ರಗಳನ್ನು ಹೊಂದಿದ ಗಾಳಿಪಟಗಳು ಆಕಾಶದಲ್ಲಿ ಸದ್ದು ಮಾಡುತ್ತಿವೆ.
ಮಂಗಳೂರು ನೇತೃತ್ವದಲ್ಲಿ ಎರಡು ದಿನಗಳ ಕಾಲ ಗಾಳಿಪಟ ಉತ್ಸವ ನಡೆದಿದ್ದು, ಮುಂಬೈನಿಂದ 4, ಅಹಮದಾಬಾದ್ 6, ಸೂರತ್ 5, ಹೈದರಾಬಾದ್ 3 ಮತ್ತು ಮಂಗಳೂರಿನ 10ಕ್ಕೂ ಹೆಚ್ಚು ವೃತ್ತಿನಿರತ ಕೈಟ್ ಪ್ಲೈಯರ್ಸ್ ಗಳು ಭಾಗವಹಿಸಿದ್ದಾರೆ.

ನೀಲಿಯ ಬಾನಂಗಳದಲ್ಲಿ ಬಿಳಿ ಮೋಡಗಳ ಮಗ್ಗುಲಲ್ಲಿ ಬಹುವರ್ಣ, ವೈವಿಧ್ಯಮಯ ಆಕಾರದ ಕಲರ್, ಕಲರ್ ಗಾಳಿಪಟಗಳು ಸ್ವಚ್ಛಂದವಾಗಿ ವಿಹರಿಸಿ ವೀಕ್ಷಕರ ಮನಸೂರೆಗೊಳಿಸುತ್ತಿವೆ.

ಸುಂದರ ಚಿಟ್ಟೆಗಳಂತೆ ರೂಪುಗೊಂಡ ಗಾಳಿಪಟಗಳು, ಮುಗಿಲಲ್ಲಿ ರೆಕ್ಕೆ ಬೀಸುತ್ತಾ ನರ್ತಿಸುವಂತೆ ಕಾಣುತ್ತಿತ್ತು. ರಾತ್ರಿ ಹೊತ್ತಿನಲ್ಲಿ ಎಲ್ಇಡಿ ಲೈಟ್ ಬಳಸಿ ಹಾರುವ ಪಟಗಳೂ ಗಮನ ಸೆಳೆಯುತ್ತಿರುವುದು ವಿಶೇಷವಾಗಿದೆ.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications