ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಪತ್ತೆಯಾಯ್ತು ಭಾರೀ ಮೊತ್ತದ ಹಣ
ಮೈಸೂರು, ಮೇ 04: ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಎಲ್ಲೆಲ್ಲೂ ಕಣ್ಗಾವಲಿಟ್ಟಿದ್ದರೂ ಅಕ್ರಮ ಹಣ ಹಂಚಿಕೆ ನಡೆಯುತ್ತಲೇ ಇದೆ.
ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಮೈಸೂರು-ಹುಣಸೂರು ರಸ್ತೆಯಲ್ಲಿರುವ ಮನುಗನಹಳ್ಳಿಯ ಚೆಕ್ ಪೋಸ್ಟ್ ನಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಂದ ಸುಮಾರು 50 ಲಕ್ಷ ರೂ.ಗೂ ಅಧಿಕ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಖಾಸಗಿ ವಾಹನಗಳನ್ನು ಬಳಸಿದರೆ ಅನುಮಾನ ಬರುತ್ತದೆ ಎಂದು ಹಣವನ್ನು ಕೆಎಸ್ ಆರ್ ಟಿಸಿ ಬಸ್ಸಿನಲ್ಲಿಯೇ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಬಸ್ ಅನ್ನು ತಪಾಸಣೆ ನಡೆಸಿದ ಚೆಕ್ ಪೋಸ್ಟ್ ಸಿಬ್ಬಂದಿಗೆ ಈ ಭಾರೀ ಮೊತ್ತದ ಹಣ ದೊರೆತಿದೆ.

ಹಣ ಯಾರಿಗೆ ಅಥವಾ ಯಾವಪ ಕ್ಷಕ್ಕೆ ಸೇರಿದ್ದು ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.












Click it and Unblock the Notifications