Get Updates
Get notified of breaking news, exclusive insights, and must-see stories!

Karnataka election 2023: ವರುಣದಲ್ಲಿ ಸಿದ್ದರಾಮಯ್ಯವರೇ ಗೆಲ್ತಾರೆಂದು 2 ಲಕ್ಷ ರೂ. ಬೆಟ್ಟಿಂಗ್ ಕಟ್ಟಿದ ಭೂಪ

ಮೈಸೂರು, ಮೇ, 12: ಈಗಾಗಲೇ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಮುಗಿದಿದ್ದು, ಶನಿವಾರ (ಮೇ 13) ರಂದು ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ನಿರ್ಧಾರ ಆಗಲಿದೆ. ಮತ್ತೊಂದೆಡೆ ಫಲಿತಾಂಶದ ವಿಚಾರವಾಗಿ ಐಪಿಎಲ್‌ ರೀತಿಯಲ್ಲೇ ಬೆಟ್ಟಿಂಗ್‌ ಕಾಳಗವೂ ಕೂಡ ಹೆಚ್ಚಾಗಿದೆ. ಅದೇ ರೀತಿ ಮೈಸೂರು ಜಿಲ್ಲೆಯಲ್ಲಿಯೂ ಕೂಡ ಬೆಟ್ಟಿಂಗ್‌ ದಂಧೆ ಸದ್ದು ಮಾಡುತ್ತಿದೆ. ಇಲ್ಲೊಬ್ಬ ಭೂಪ ವರುಣದಲ್ಲಿ ಸಿದ್ದರಾಮಯ್ಯವರೇ ಗೆಲ್ಲುತ್ತಾರೆಂದು 2 ಲಕ್ಷ ರೂ. ಬೆಟ್ಟಿಂಗ್ ಕಟ್ಟಿ ಪೇಚಿಗೆ ಸಿಲುಕಿದ್ದಾನೆ.

ರಾಜ್ಯ ವಿಧಾನಸಭೆ ಚುನಾವಣೆ ಅಂತೂ ಮುಗಿದಿದೆ. ಈಗ ಏನಿದ್ದರೂ ಫಲಿತಾಂಶದ್ದೆ ಜಪವಾಗಿದೆ. ಮೈಸೂರು ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಚುನಾವಣಾ ಫಲಿತಾಂಶದ್ದೆ ಲೆಕ್ಕಾಚಾರ. ಈ ನಡುವೆ ಬೆಟ್ಟಿಂಗ್ ದಂಧೆ ಕೂಡ ಜೋರಾಗಿಯೇ ನಡೆಯುತ್ತಿದೆ.

Betting on election results

ಜಿಲ್ಲೆಯ 11 ಕ್ಷೇತ್ರಗಳ ನಾನಾ ಪಕ್ಷಗಳ ನಾಯಕರು ಸೇರಿದಂತೆ ಒಟ್ಟು 143 ಮಂದಿ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಹಾಗಯೆ ನಾಳೆ ಮಧ್ಯಾಹ್ನದೊಳಗೆ ಫಲಿತಾಂಶ ಪ್ರಕಟವಾಗಲಿದ್ದು, ಇದು ಕಾರ್ಯಕರ್ತರು ಹಾಗೂ ಸಾರ್ವಜನಿಕರ ಕುತೂಹಲಕ್ಕೆ ತೆರೆ ಬೀಳಲಿದೆ.

ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ವರುಣ‌ ಕೂಡ ಒಂದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ವಿ.ಸೋಮಣ್ಣ ಅವರ ಮುಖಾಮುಖಿಯಿಂದ ರಾಜ್ಯದಲ್ಲೇ ಹೆಚ್ಚು ಸದ್ದು ಮಾಡಿರುವ ವರುಣ ಕ್ಷೇತ್ರದ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಇದರ ಬೆನ್ನಲ್ಲೇ ಅಭ್ಯರ್ಥಿಗಳ ಸೋಲು-ಗೆಲುವಿನ ಕುರಿತು ಲೆಕ್ಕಾಚಾರ ಜೋರಾಗಿದ್ದು, ಬೆಟ್ಟಿಂಗ್ ಭರಾಟೆ ನಡೆಯುತ್ತಿದೆ. ಸಿದ್ದರಾಮಯ್ಯ 100ಕ್ಕೆ ನೂರರಷ್ಟು ಗೆಲ್ಲುತ್ತಾರೆ ಎಂದು ಅಭಿಯಾನಿಯೊಬ್ಬ 2 ಲಕ್ಷ ರೂ. ಬೆಟ್ಟಿಂಗ್ ಕಟ್ಟಿದ್ದಾನೆ.

ಬೆಟ್ಟಿಂಗ್ ಭರಾಟೆ ಲಕ್ಷಾಂತರ ರೂಪಾಯಿ ಹಣದೊಂದಿಗೆ ಹೊಲ, ಜಮೀನು, ಜಾನುವಾರುಗಳನ್ನು ಪಣಕ್ಕಿಟ್ಟು ಅಭ್ಯರ್ಥಿಗಳ ಪರವಾಗಿ ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.‌ ಇಡೀ ರಾಜ್ಯ ನೋಡುತ್ತಿರುವ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗೆಲ್ಲುತ್ತಾರೋ ಅಥವಾ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಗೆಲ್ಲುತ್ತಾರೋ ಎಂಬ ಕುತೂಹಲ ಹೆಚ್ಚಾಗಿದೆ.

ಇತರೇ ಕ್ಷೇತ್ರಗಳಿಗಿಂತ ವರುಣ ಕ್ಷೇತ್ರದಲ್ಲಿ ಬೆಟ್ಟಿಂಗ್ ಭರಾಟೆ ಹೆಚ್ಚಿದೆ. ವರುಣ ಕ್ಷೇತ್ರವಲ್ಲದೆ ಇಡೀ ಜಿಲ್ಲೆಯಲ್ಲಿ ಟೀ ಅಂಗಡಿ, ಅರಳಿಕಟ್ಟೆ ಮಾರುಕಟ್ಟೆ ಸೇರಿದಂತೆ ಎಲ್ಲಿ ನೋಡಿದರೂ ರಾಜಕೀಯ ಆಸಕ್ತರು ಮರುಣ ಕ್ಷೇತ್ರದ ಫಲಿತಾಂಶದ ಬಗ್ಗೆಯೇ ಚರ್ಚೆ ನಡೆಸುತ್ತಿದ್ದಾರೆ.

ಕೆ.ಆರ್.ನಗರದಲ್ಲೂ ಬೆಟ್ಟಿಂಗ್‌ ದಂಧೆ ಜೋರು

ಸಾಕಷ್ಟು ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಕೆ.ಆರ್.ನಗರ ಕೂಡ ಒಂದು. ಇಲ್ಲಿ ಜೆಡಿಎಸ್‌ನಿಂದ ಸಾರಾ ಮಹೇಶ್ ಹಾಗೂ ಕಾಂಗ್ರೆಸ್‌ನಿಂದ ರವಿಶಂಕರ್ ಸ್ಪರ್ಧಿಸಿದ್ದಾರೆ. ಮತ್ತೊಂದೆಡೆ ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಕೃಷ್ಣರಾಜನಗರದಲ್ಲೂ ಬೆಟ್ಟಿಂಗ್ ಭರಾಟೆ ಜೋರಾಗಿಯೇ ಇದೆ. ರವಿಶಂಕರ್ ಹಾಗೂ ಸಾರಾ ಮಹೇಶ್ ಗೆಲ್ಲುತ್ತಾರೆ ಎಂದು ಅಭಿಮಾನಿಗಳು ಜಮೀನು, ಹೊಲ ಪಣಕ್ಕೆ ಇಡುತ್ತಿದ್ದಾರೆ.

ಇತ್ತ ಪಿರಿಯಾಪಟ್ಟಣದಲ್ಲೂ ಬೆಟ್ಟಿಂಗ್ ಹಾಗೂ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿಯೇ ಇದೆ. ಕಾಂಗ್ರೆಸ್‌ನಿಂದ ವೆಂಕಟೇಶ್ ಹಾಗೂ ಜೆಡಿಎಸ್‌ನಿಂದ ಮಹದೇವು ಸ್ಪರ್ಧಿಸಿದ್ದಾರೆ. ಇಲ್ಲೂ ಜನ ಕುರಿ, ಮೇಕೆ, ನಾಟಿ‌ಕೋಳಿ ಹಾಗೂ ನಗದು ಹಲಣವನ್ನು ಬೆಟ್ಟಿಂಗ್‌ಗೆ ಕಟ್ಟುತ್ತಿದ್ದಾರೆ.

ಅದೇ ರೀತಿ ಜಿ.ಟಿ.ದೇವೇ ಗೌಡ ಸ್ಪರ್ಧಿಸಿರುವ ಚಾಮುಂಡೇಶ್ವರಿ, ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಗೌಡ ಸ್ಪರ್ಧಿಸಿರುವ ಹುಣಸೂರು, ದರ್ಶನ್ ಧ್ರುವ ನಾರಾಯಣ್ ಸ್ಪರ್ಧಿಸಿರುವ ನಂಜನಗೂಡು, ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಡಾ. ಎಚ್.ಸಿ.ಮಹದೇವಪ್ಪ ಸ್ಪರ್ಧಿಸಿರುವ ನರಸೀಪುರ ಕ್ಷೇತ್ರಗಳಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+