Kabini Dam: ವ್ಯಾಪಕ ಮಳೆಗೆ ಒಂದೇ ದಿನದಲ್ಲಿ ಭಾರೀ ಒಳಹರಿವು ದಾಖಲು, ಇಂದಿನ ವಿವರ
ಬೆಂಗಳೂರು, ಜೂನ್ 28: ಕರ್ನಾಟಕ ರಾಜ್ಯದಲ್ಲಿ ಪಶ್ಚಿಮ ಘಟ್ಟದ ಸಾಲಿಗೆ ಸೇರುವ ವಿವಿಧ ಜಿಲ್ಲೆಗಳು ಹಾಗೂ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ತನ್ನ ಆರ್ಭಟ ಮುಂದುವರೆಸಿದೆ. ಕೇರಳ, ಮೈಸೂರು ಹಾಗೂ ಅರಣ್ಯ ಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ನಿತ್ಯ 50ರಿಂದ 200 ಮಿಲಿ ಮೀಟರ್ಗೂ ಹೆಚ್ಚು ಮಳೆ ದಾಖಲಾಗುತ್ತಿದೆ. ಪರಿಣಾಮ ಕಪಿಲಾ ನದಿಯಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದ್ದು, ಇದರಿಂದ ಕಬಿನಿ ಜಲಾಶಯದ (Kabini Dam) ಒಳಹರಿವು ವ್ಯಾಪಕವಾಗಿ ಏರತೊಡಗಿದೆ.
ಹೌದು, ಕಬಿನಿ ಜಲಾಶಯ ಹಾಗೂ ಕಪಿಲಾ ನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದು ಎರಡು ವಾರಗಳಿಂದ ಇನ್ನಿಲ್ಲದಂತೆ ಮಳೆ ಆಗುತ್ತಿದೆ. ಇದು ಪ್ರತಿ ವರ್ಷದಂತೆ ಈ ವರ್ಷವು ಸಾಮಾನ್ಯವಾಗಿ ಬೀಳುವ ಮಳೆ ಇದು ಎನ್ನಲಾಗುತ್ತಿದೆ. ತೀವ್ರ ಬರಗಾಲದಿಂದ ಉಂಟಾಗಿದ್ದ ಕೊರತೆಯನ್ನು ನೀಗಿಸುವಂತೆ ಅತೀ ಕಡಿಮೆ ಸಮಯದಲ್ಲಿ ಅತ್ಯಧಿಕ ಮಳೆ ದಾಖಲಾಗುತ್ತಿದೆ.

ಇದರಿಂದ ಕೇರಳ ಮೂಲದಲ್ಲಿ ಹುಟ್ಟುವ ಕಪಿಲಾ ನದಿಯುವ ಅರಣ್ಯ, ಕಣಿವೆ ಪ್ರದೇಶಗಳ ಹಾದು ಕರ್ನಾಟಕದ ಕಾವೇರಿ ನದಿಗೆ ಬಂದು ಸೇರುತ್ತದೆ. ಮುಂಗಾರು ಬಿರುಸಿನ ಹಿನ್ನೆಲೆಯಲ್ಲಿ ಇಂದು ಜೂನ್ 27ರಂದು ಶುಕ್ರವಾರ ಕಬಿನಿ ಜಲಾಶಯದಲ್ಲಿ ಅತ್ಯಧಿಕ ಒಳಹರಿವು ಕಂಡು ಬಂದಿದೆ. ತಕ್ಕಮಟ್ಟಿನ ಹೊರ ಹರಿವು ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
ಕಬಿನಿ ಜಲಾಶಯದಲ್ಲಿ (Kabini Reservoir) ಇಂದು ಅತ್ಯಧಿಕ ಒಳಹರಿವು ಹೆಚ್ಚಾಗಿದೆ. ಇಂದು 28ನೇ ಜೂನ್ 2024 ರಂದು ಕಬಿನಿ ಜಲಾಶಯದಲ್ಲಿ ಬರೋಬ್ಬರಿ 20,113 ಕ್ಯೂಸೆಕ್ ಒಳಹರಿವು ನಷ್ಟಿದೆ.
ಕಬಿನಿಯ ಡ್ಯಾಂ ನ ಒಟ್ಟು ಜಲಾಶಯದ ಮಟ್ಟ 19.52 ಟಿಎಂಸಿ ಎಂದು ಸರ್ಕಾರದ ಅಧಿಕೃತ ಮಾಹಿತಿ ಇದೆ. ಇದರಲ್ಲಿ ಇಂದಿನವರೆಗೆ 11.31 ಟಿಎಂಸಿ ಇದೆ. ಇಂದು ಒಳಹರಿವು 20,113 ಕ್ಯೂಸೆಕ್ ಇದ್ದರೆ, ನದಿ ಇನ್ನಿತರ ನೀರಾವರಿ ಮೂಲಗಳಿಗೆ ಹೊರ ಹರಿವಿನ ಮೂಲಕ 1577 ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ.

ಮುಂದುವರಿಯಲಿದೆ ಭಾರೀ ಮಳೆ
ಕಾವೇರಿ ನದಿಯ ಉಪನದಿ ಎನ್ನಲಾಗುತ್ತಿರುವ ಕಪಿಲಾ ನದಿಗೆ ಅಡ್ಡಲಾಗಿ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯಲ್ಲಿ ಈ ಕಬಿನಿ ಆಣೆಕಟ್ಟು ನಿರ್ಮಿಸಲಾಗಿದೆ. ಇದರಿಂದ ಹತ್ತಾರು ಗ್ರಾಮಗಳು, ಸಾವಿರಾರು ಎಕರೆಯ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಇದಕ್ಕೆಲ್ಲ ಜೀವಕಳೆ ಬರಲು ನಿತ್ಯ ಸುರಿಯುತ್ತಿರುವ ಮುಂಗಾರು ಮಳೆ ಕಾರಣ ಎನ್ನಲಾಗಿದ್ದು, ಭಾರೀ ಮುಂದುವರಿಯಲಿದೆ.
ಇತರ ಜಲಾಶಯಗಳ ಮಟ್ಟದ ವಿವರ
ಕಬಿನಿ ಜಲಾಶಯದ ಜೊತೆಗೆ ಇತರ ಜಲಾಶಯಗಳ ಒಳಹರಿವು ಸಹ ಏರಿಕೆ ಆಗಿದೆ. ಅವುಗಳ ವಿವರ ನೋಡುವುದಾದರೆ, ಇಂದು ಕೃಷ್ಣರಾಜ ಸಾಗರ (KRS Dam Water Level) 13,437 ಕ್ಯೂಸೆಕ್ ನೀರಿನ ಒಳಹರಿವು ಇದೆ. ಹೇಮಾವತಿ ಆಣೆಕಟ್ಟಿನಲ್ಲಿ (Hemavati dam) ಇಂದು 7695 ಕ್ಯೂಸೆಕ್ ಹಾಗೂ ಹಾರಂಗಿ ಜಲಾಶಯದಲ್ಲಿ (Harangi Dam water level) ಇಂದು ಒಟ್ಟು 2562 ಕ್ಯೂಸೆಕ್ ಒಳಹರಿವು ಇದೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications