Kabini Dam: ವ್ಯಾಪಕ ಮಳೆಗೆ ಒಂದೇ ದಿನದಲ್ಲಿ ಭಾರೀ ಒಳಹರಿವು ದಾಖಲು, ಇಂದಿನ ವಿವರ
ಬೆಂಗಳೂರು, ಜೂನ್ 28: ಕರ್ನಾಟಕ ರಾಜ್ಯದಲ್ಲಿ ಪಶ್ಚಿಮ ಘಟ್ಟದ ಸಾಲಿಗೆ ಸೇರುವ ವಿವಿಧ ಜಿಲ್ಲೆಗಳು ಹಾಗೂ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ತನ್ನ ಆರ್ಭಟ ಮುಂದುವರೆಸಿದೆ. ಕೇರಳ, ಮೈಸೂರು ಹಾಗೂ ಅರಣ್ಯ ಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ನಿತ್ಯ 50ರಿಂದ 200 ಮಿಲಿ ಮೀಟರ್ಗೂ ಹೆಚ್ಚು ಮಳೆ ದಾಖಲಾಗುತ್ತಿದೆ. ಪರಿಣಾಮ ಕಪಿಲಾ ನದಿಯಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದ್ದು, ಇದರಿಂದ ಕಬಿನಿ ಜಲಾಶಯದ (Kabini Dam) ಒಳಹರಿವು ವ್ಯಾಪಕವಾಗಿ ಏರತೊಡಗಿದೆ.
ಹೌದು, ಕಬಿನಿ ಜಲಾಶಯ ಹಾಗೂ ಕಪಿಲಾ ನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದು ಎರಡು ವಾರಗಳಿಂದ ಇನ್ನಿಲ್ಲದಂತೆ ಮಳೆ ಆಗುತ್ತಿದೆ. ಇದು ಪ್ರತಿ ವರ್ಷದಂತೆ ಈ ವರ್ಷವು ಸಾಮಾನ್ಯವಾಗಿ ಬೀಳುವ ಮಳೆ ಇದು ಎನ್ನಲಾಗುತ್ತಿದೆ. ತೀವ್ರ ಬರಗಾಲದಿಂದ ಉಂಟಾಗಿದ್ದ ಕೊರತೆಯನ್ನು ನೀಗಿಸುವಂತೆ ಅತೀ ಕಡಿಮೆ ಸಮಯದಲ್ಲಿ ಅತ್ಯಧಿಕ ಮಳೆ ದಾಖಲಾಗುತ್ತಿದೆ.

ಇದರಿಂದ ಕೇರಳ ಮೂಲದಲ್ಲಿ ಹುಟ್ಟುವ ಕಪಿಲಾ ನದಿಯುವ ಅರಣ್ಯ, ಕಣಿವೆ ಪ್ರದೇಶಗಳ ಹಾದು ಕರ್ನಾಟಕದ ಕಾವೇರಿ ನದಿಗೆ ಬಂದು ಸೇರುತ್ತದೆ. ಮುಂಗಾರು ಬಿರುಸಿನ ಹಿನ್ನೆಲೆಯಲ್ಲಿ ಇಂದು ಜೂನ್ 27ರಂದು ಶುಕ್ರವಾರ ಕಬಿನಿ ಜಲಾಶಯದಲ್ಲಿ ಅತ್ಯಧಿಕ ಒಳಹರಿವು ಕಂಡು ಬಂದಿದೆ. ತಕ್ಕಮಟ್ಟಿನ ಹೊರ ಹರಿವು ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
ಕಬಿನಿ ಜಲಾಶಯದಲ್ಲಿ (Kabini Reservoir) ಇಂದು ಅತ್ಯಧಿಕ ಒಳಹರಿವು ಹೆಚ್ಚಾಗಿದೆ. ಇಂದು 28ನೇ ಜೂನ್ 2024 ರಂದು ಕಬಿನಿ ಜಲಾಶಯದಲ್ಲಿ ಬರೋಬ್ಬರಿ 20,113 ಕ್ಯೂಸೆಕ್ ಒಳಹರಿವು ನಷ್ಟಿದೆ.
ಕಬಿನಿಯ ಡ್ಯಾಂ ನ ಒಟ್ಟು ಜಲಾಶಯದ ಮಟ್ಟ 19.52 ಟಿಎಂಸಿ ಎಂದು ಸರ್ಕಾರದ ಅಧಿಕೃತ ಮಾಹಿತಿ ಇದೆ. ಇದರಲ್ಲಿ ಇಂದಿನವರೆಗೆ 11.31 ಟಿಎಂಸಿ ಇದೆ. ಇಂದು ಒಳಹರಿವು 20,113 ಕ್ಯೂಸೆಕ್ ಇದ್ದರೆ, ನದಿ ಇನ್ನಿತರ ನೀರಾವರಿ ಮೂಲಗಳಿಗೆ ಹೊರ ಹರಿವಿನ ಮೂಲಕ 1577 ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ.

ಮುಂದುವರಿಯಲಿದೆ ಭಾರೀ ಮಳೆ
ಕಾವೇರಿ ನದಿಯ ಉಪನದಿ ಎನ್ನಲಾಗುತ್ತಿರುವ ಕಪಿಲಾ ನದಿಗೆ ಅಡ್ಡಲಾಗಿ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯಲ್ಲಿ ಈ ಕಬಿನಿ ಆಣೆಕಟ್ಟು ನಿರ್ಮಿಸಲಾಗಿದೆ. ಇದರಿಂದ ಹತ್ತಾರು ಗ್ರಾಮಗಳು, ಸಾವಿರಾರು ಎಕರೆಯ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಇದಕ್ಕೆಲ್ಲ ಜೀವಕಳೆ ಬರಲು ನಿತ್ಯ ಸುರಿಯುತ್ತಿರುವ ಮುಂಗಾರು ಮಳೆ ಕಾರಣ ಎನ್ನಲಾಗಿದ್ದು, ಭಾರೀ ಮುಂದುವರಿಯಲಿದೆ.
ಇತರ ಜಲಾಶಯಗಳ ಮಟ್ಟದ ವಿವರ
ಕಬಿನಿ ಜಲಾಶಯದ ಜೊತೆಗೆ ಇತರ ಜಲಾಶಯಗಳ ಒಳಹರಿವು ಸಹ ಏರಿಕೆ ಆಗಿದೆ. ಅವುಗಳ ವಿವರ ನೋಡುವುದಾದರೆ, ಇಂದು ಕೃಷ್ಣರಾಜ ಸಾಗರ (KRS Dam Water Level) 13,437 ಕ್ಯೂಸೆಕ್ ನೀರಿನ ಒಳಹರಿವು ಇದೆ. ಹೇಮಾವತಿ ಆಣೆಕಟ್ಟಿನಲ್ಲಿ (Hemavati dam) ಇಂದು 7695 ಕ್ಯೂಸೆಕ್ ಹಾಗೂ ಹಾರಂಗಿ ಜಲಾಶಯದಲ್ಲಿ (Harangi Dam water level) ಇಂದು ಒಟ್ಟು 2562 ಕ್ಯೂಸೆಕ್ ಒಳಹರಿವು ಇದೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications