ಪುಸ್ತಕ ರೂಪದಲ್ಲಿ ಸುಳ್ವಾಡಿ ವಿಷ ಪ್ರಸಾದ, ಕನಗನಮರಡಿ ಬಸ್ ದುರಂತ
ಮೈಸೂರು, ಜುಲೈ 20: ಕಳೆದ ವರ್ಷದ ಡಿಸೆಂಬರ್ ನೆನೆಸಿಕೊಂಡರೆ ಸಾಕು, ದುರಂತದ ಚಿತ್ರಗಳು ಕಣ್ಮುಂದೆ ಹಾದು ಹೋಗುತ್ತವೆ. ಮಂಡ್ಯ - ಮೈಸೂರು ಭಾಗದ ಜನರಿಗೆ 2018ರ ಡಿಸೆಂಬರ್ ಅಕ್ಷರಶಃ ಕರಾಳ ತಿಂಗಳಾಗಿತ್ತು. ಇದಕ್ಕೆ ಕಾರಣ, ಮಂಡ್ಯದ ಪಾಂಡವಪುರ ಸಮೀಪದ ಕನಗನಮರಡಿ ಬಸ್ ಅಪಘಾತ ಹಾಗೂ ಸುಳ್ವಾಡಿ ಕಿಚ್ಚುಗತ್ತು ಮಾರಮ್ಮನ ದೇವಸ್ಥಾನದ ವಿಷ ಪ್ರಸಾದ ದುರಂತ.
ಈ ಎರಡೂ ಘಟನೆಗಳನ್ನು ಅತಿ ಹತ್ತಿರದಿಂದ ಕಂಡ ಮೈಸೂರು ಪತ್ರಕರ್ತ ರವಿ ಪಾಂಡವಪುರ ಅವರು ಈ ದುರಂತದ ವಾಸ್ತವತೆಯನ್ನು ಪುಸ್ತಕ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ವಿಷಪ್ರಸಾದ ದುರಂತ ವಿವರಿಸುವ ಪುಸ್ತಕ 'ಅಯ್ಯೋದ್ಯಾವ್ರೆ' 128 ಪುಟಗಳದ್ದಾಗಿದೆ. ಕನಗನಮರಡಿ ದುರಂತ ಹೇಳುವ 'ರೈಟ್, ರೈಟ್' 88 ಪುಟಗಳ ಪುಸ್ತಕವಾಗಿದೆ.

ಸುಳ್ವಾಡಿ ವಿಷಪ್ರಸಾದ ಪ್ರಕರಣ ದೇಶದಲ್ಲಿಯೇ ಮೊದಲು ಹಾಗೂ ಕನಗನಮರಡಿ ಬಸ್ ಅಪಘಾತವೂ ಈ ಹಿಂದೆ ಉಂಡಬತ್ತಿ ಕೆರೆಗೆ ಟೆಂಪೋ ಉರುಳಿ 33 ಜನ ಸಾವಿಗೀಡಾಗಿದ್ದದನ್ನು ನೆನಪಿಗೆ ತಂದಿತು. ಈ ಎರಡೂ ಪ್ರಕರಣಗಳು ದಿನ ಕಳೆದಂತೆ ಜನರಿಗೆ ಮರೆತು ಹೋಗುತ್ತದೆ.

ನೆನಪಿನಲ್ಲಿಟ್ಟುಕೊಳ್ಳುವ ಕರಾಳ ದುರಂತ ಇದಾದ್ದರಿಂದ ಪುಸ್ತಕ ರೂಪಕ್ಕೆ ಇಳಿಸಿದ್ದೇನೆ. ಪುಸ್ತಕ ಬರೆಯಲು ಮುಂದಾದಾಗ ಅನೇಕ ಸವಾಲುಗಳು ಎದುರಾದವು. ಪೊಲೀಸರು, ಜಿಲ್ಲಾಡಳಿತವಾಗಲೀ ಯಾರೂ ಮಾಹಿತಿ ನೀಡಲು ಮುಂದಾಗಲಿಲ್ಲ. ಆರೋಪಿಗಳು ಯಾರು? ಅವರ ಹಿನ್ನೆಲೆ ಏನು ? ಸಾಲೂರು ಮಠಕ್ಕೂ ಸುಳ್ವಾಡಿ ಮಾರಮ್ಮನ ದೇಗುಲಕ್ಕೂ ನಂಟೇನು ? ಪ್ರಕರಣ ಘಟಿಸಿದ್ದು ಏಕೆ ? ಸತ್ತವರು ಯಾರು, ಕುಟುಂಬದ ಸ್ಥಿತಿ ಹೇಗಿದೆ? ಎಲ್ಲವೂ ಗೋಜಲುಮಯವಾಗಿತ್ತು. ಅದನ್ನು ಹೊರ ತೆಗೆಯಲೇಬೇಕೆಂಬ ಹಠ ತೊಟ್ಟು ಪುಸ್ತಕ ಬರೆದೆ' ಎಂದು ಹೇಳಿಕೊಳ್ಳುತ್ತಾರೆ ರವಿ ಪಾಂಡವಪುರ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video












Click it and Unblock the Notifications