ಪುಸ್ತಕ ರೂಪದಲ್ಲಿ ಸುಳ್ವಾಡಿ ವಿಷ ಪ್ರಸಾದ, ಕನಗನಮರಡಿ ಬಸ್ ದುರಂತ
ಮೈಸೂರು, ಜುಲೈ 20: ಕಳೆದ ವರ್ಷದ ಡಿಸೆಂಬರ್ ನೆನೆಸಿಕೊಂಡರೆ ಸಾಕು, ದುರಂತದ ಚಿತ್ರಗಳು ಕಣ್ಮುಂದೆ ಹಾದು ಹೋಗುತ್ತವೆ. ಮಂಡ್ಯ - ಮೈಸೂರು ಭಾಗದ ಜನರಿಗೆ 2018ರ ಡಿಸೆಂಬರ್ ಅಕ್ಷರಶಃ ಕರಾಳ ತಿಂಗಳಾಗಿತ್ತು. ಇದಕ್ಕೆ ಕಾರಣ, ಮಂಡ್ಯದ ಪಾಂಡವಪುರ ಸಮೀಪದ ಕನಗನಮರಡಿ ಬಸ್ ಅಪಘಾತ ಹಾಗೂ ಸುಳ್ವಾಡಿ ಕಿಚ್ಚುಗತ್ತು ಮಾರಮ್ಮನ ದೇವಸ್ಥಾನದ ವಿಷ ಪ್ರಸಾದ ದುರಂತ.
ಈ ಎರಡೂ ಘಟನೆಗಳನ್ನು ಅತಿ ಹತ್ತಿರದಿಂದ ಕಂಡ ಮೈಸೂರು ಪತ್ರಕರ್ತ ರವಿ ಪಾಂಡವಪುರ ಅವರು ಈ ದುರಂತದ ವಾಸ್ತವತೆಯನ್ನು ಪುಸ್ತಕ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ವಿಷಪ್ರಸಾದ ದುರಂತ ವಿವರಿಸುವ ಪುಸ್ತಕ 'ಅಯ್ಯೋದ್ಯಾವ್ರೆ' 128 ಪುಟಗಳದ್ದಾಗಿದೆ. ಕನಗನಮರಡಿ ದುರಂತ ಹೇಳುವ 'ರೈಟ್, ರೈಟ್' 88 ಪುಟಗಳ ಪುಸ್ತಕವಾಗಿದೆ.

ಸುಳ್ವಾಡಿ ವಿಷಪ್ರಸಾದ ಪ್ರಕರಣ ದೇಶದಲ್ಲಿಯೇ ಮೊದಲು ಹಾಗೂ ಕನಗನಮರಡಿ ಬಸ್ ಅಪಘಾತವೂ ಈ ಹಿಂದೆ ಉಂಡಬತ್ತಿ ಕೆರೆಗೆ ಟೆಂಪೋ ಉರುಳಿ 33 ಜನ ಸಾವಿಗೀಡಾಗಿದ್ದದನ್ನು ನೆನಪಿಗೆ ತಂದಿತು. ಈ ಎರಡೂ ಪ್ರಕರಣಗಳು ದಿನ ಕಳೆದಂತೆ ಜನರಿಗೆ ಮರೆತು ಹೋಗುತ್ತದೆ.

ನೆನಪಿನಲ್ಲಿಟ್ಟುಕೊಳ್ಳುವ ಕರಾಳ ದುರಂತ ಇದಾದ್ದರಿಂದ ಪುಸ್ತಕ ರೂಪಕ್ಕೆ ಇಳಿಸಿದ್ದೇನೆ. ಪುಸ್ತಕ ಬರೆಯಲು ಮುಂದಾದಾಗ ಅನೇಕ ಸವಾಲುಗಳು ಎದುರಾದವು. ಪೊಲೀಸರು, ಜಿಲ್ಲಾಡಳಿತವಾಗಲೀ ಯಾರೂ ಮಾಹಿತಿ ನೀಡಲು ಮುಂದಾಗಲಿಲ್ಲ. ಆರೋಪಿಗಳು ಯಾರು? ಅವರ ಹಿನ್ನೆಲೆ ಏನು ? ಸಾಲೂರು ಮಠಕ್ಕೂ ಸುಳ್ವಾಡಿ ಮಾರಮ್ಮನ ದೇಗುಲಕ್ಕೂ ನಂಟೇನು ? ಪ್ರಕರಣ ಘಟಿಸಿದ್ದು ಏಕೆ ? ಸತ್ತವರು ಯಾರು, ಕುಟುಂಬದ ಸ್ಥಿತಿ ಹೇಗಿದೆ? ಎಲ್ಲವೂ ಗೋಜಲುಮಯವಾಗಿತ್ತು. ಅದನ್ನು ಹೊರ ತೆಗೆಯಲೇಬೇಕೆಂಬ ಹಠ ತೊಟ್ಟು ಪುಸ್ತಕ ಬರೆದೆ' ಎಂದು ಹೇಳಿಕೊಳ್ಳುತ್ತಾರೆ ರವಿ ಪಾಂಡವಪುರ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications