ಮೈಸೂರಿನಲ್ಲಿ ಬಿಸಿ ಊಟಕ್ಕೆ ಬಿಸಿಬಿಸಿ ರಾಗಿ ಮುದ್ದೆ
ಮೈಸೂರು, ಏ.9 : ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಮುದ್ದೆ ನೀಡುವ ಪ್ರಾಯೋಗಿಕ ಯೋಜನೆಗೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 32 ಪ್ರೌಢಶಾಲೆಗಳಲ್ಲಿ ವಾರಕ್ಕೊಮ್ಮೆ ರಾಗಿಮುದ್ದೆ ನೀಡಲಾಗುತ್ತಿದೆ.
ಎಚ್.ಡಿ.ಕೋಟೆ
ತಾಲೂಕಿನ
ಪ್ರೌಢಶಾಲೆಗಳಲ್ಲಿ
ವಾರಕ್ಕೆ
ಒಂದು
ದಿನ,
ಇನ್ನು
ಕೆಲವು
ಶಾಲೆಗಳಲ್ಲಿ
ಮಕ್ಕಳ
ಬೇಡಿಕೆಯಂತೆ
ವಾರಕ್ಕೆ
2
ದಿನ
ಬಿಸಿಯೂಟಕ್ಕೆ
ರಾಗಿ
ಮುದ್ದೆ
ನೀಡಲಾಗುತ್ತಿದೆ.
ಪ್ರಾಯೋಗಿಕ
ಯೋಜನೆಗೆ
ಉತ್ತಮ
ಪ್ರತಿಕ್ರಿಯೆ
ಬಂದಿದೆ
ಎನ್ನುತ್ತಾರೆ
ಕ್ಷೇತ್ರ
ಶಿಕ್ಷಣಾಧಿಕಾರಿ
ಎಂ.ಉದಯ್
ಕುಮಾರ್.
ಮಧ್ಯಾಹ್ನದ ಬಿಸಿಯೂಟಕ್ಕೆ ರಾಗಿ ಮುದ್ದೆ ಜೊತೆ ಬಸ್ಸಾರು, ಸೊಪ್ಪಿನಿಂದ ಮಾಡಿದ ಸಾರನ್ನು ನೀಡಲಾಗುತ್ತಿದೆ. ಪ್ರಾಢಶಾಲೆಗಳಲ್ಲಿ ಮಾತ್ರ ಈ ಯೋಜನೆ ಜಾರಿಯಲ್ಲಿದೆ. ಮಕ್ಕಳು ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಕೆಲವು ಶಾಲೆಗಳಲ್ಲಿ 2 ದಿನ ಮುದ್ದೆ ನೀಡುವಂತೆ ಮನವಿ ಮಾಡುತ್ತಿದ್ದಾರೆ. [ವಾರಕ್ಕೊಮ್ಮೆ ಮಕ್ಕಳಿಗೆ ರಾಗಿಮುದ್ದೆ]
ಮೂರು, ನಾಲ್ಕು ಕಿ.ಮೀ.ದೂರದಿಂದ ಶಾಲೆಗೆ ಆಗಮಿಸುವ ಮಕ್ಕಳು ಬೆಳಗ್ಗೆ ಸರಿಯಾಗಿ ಉಪಹಾರ ಸೇವಿಸಿರುವುದಿಲ್ಲ. ಆದ್ದರಿಂದ, ಮಧ್ಯಾಹ್ನದ ಬಿಸಿಯೂಟಕ್ಕೆ ಮುದ್ದೆ ನೀಡುವ ಯೋಜನೆಯನ್ನು ಆರಂಭಿಸಲಾಯಿತು ಎನ್ನುತ್ತಾರೆ ಶಿಕ್ಷಕರು. [ಬಿಸಿ ಊಟಕ್ಕೆ ಉಪ್ಪಿಟ್ಟು ಪೊಂಗಲ್ಲಿಗೆ ಬದಲು ಚಪಾತಿ]
ಮುದ್ದೆಯಿಂದ ಮಕ್ಕಳಿಗೆ ಅರ್ಧಕೆಜಿ ಅನ್ನದಲ್ಲಿರುವಷ್ಟು ಮತ್ತು 100 ಗ್ರಾಂ ಬೆಳೆಯಲ್ಲಿರುವಷ್ಟು ಪೌಷ್ಠಿಕಾಂಶ ದೊರೆಯುತ್ತಿದೆ. ಇದುವರೆಗೂ ಎಲ್ಲಾ ಮಕ್ಕಳು ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಶಿಕ್ಷರು ಹೇಳಿದ್ದಾರೆ.