ಮೂಡಾ ಅಧಿಕಾರಿಗಳ ಎಡವಟ್ಟಿಗೆ ಪೇಚಿಗೆ ಸಿಲುಕಿದ ಸಚಿವ ಜಿಟಿ ದೇವೇಗೌಡ!
ಮೈಸೂರು, ಫೆಬ್ರವರಿ 5:ಮೂಡಾ ಅಭಿವೃದ್ಧಿಪಡಿಸಲು ಉದ್ದೇಶಿಸಿ ಬಹುನಿರೀಕ್ಷಿತ 'ಬಲ್ಲಹಳ್ಳಿ ಬಡಾವಣೆ ಯೋಜನೆ'ಗೆ ಭೂಮಿ ನೀಡುವ ಸಂಬಂಧ ರೈತರಿಂದ ಪರ ಹಾಗೂ ವಿರುದ್ಧ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಲ್ಲಹಳ್ಳಿ ಗ್ರಾಮದಲ್ಲಿ ನಡೆದ ಸಭೆ ತೀವ್ರ ಗೊಂದಲದಲ್ಲಿ ಕೊನೆಗೊಂಡಿತು.
ಇದರಿಂದ ಮುಜುಗರಕ್ಕೀಡಾಗಿ ಮುಡಾ ಆಯುಕ್ತ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಸಭೆಯ ಅರ್ಧಕ್ಕೇ ವೇದಿಕೆಯಿಂದ ಹೊರನಡೆದರು.
ಬಡಾವಣೆಗೆ 50:50 ಅನುಪಾತದಲ್ಲಿ ಅಗತ್ಯವಿರುವ ಭೂಮಿಯನ್ನು ಪಡೆಯಲು ಮೂಡಾ ಬಲ್ಲಹಳ್ಳಿ ಗ್ರಾಮದಲ್ಲಿ ಸಭೆ ಏರ್ಪಡಿಸಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಿತ್ತು.

"ಈಗಾಗಲೇ ರೈತರೊಂದಿಗೆ 4 ಬಾರಿ ಸಭೆ ನಡೆಸಿ ಚರ್ಚಿಸಿದ್ದೇವೆ. ಭೂಮಿ ನೀಡಲು ಬಹುತೇಕ ಭೂ ಮಾಲೀಕರು ಸಮ್ಮತಿಸಿದ್ದಾರೆ. ನೀವು ಬಂದು ಗೊಂದಲ ನಿವಾರಿಸಿದಲ್ಲಿ ಉಳಿದವರು ಒಪ್ಪಿಕೊಳ್ಳುತ್ತಾರೆ. ನೀವು ಹೇಳಿದರೆ ಅಲ್ಲಿಯ ಜನ ಸಂಪೂರ್ಣ ಸಹಕಾರ ನೀಡುತ್ತಾರೆ" ಎಂದು ಮುಡಾ ಆಯುಕ್ತ ಕಾಂತರಾಜು ಹೇಳಿದ್ದರಿಂದ, ಸಚಿವರು ಸಭೆಗೆ ಆಗಮಿಸಿದ್ದರು.
ಆದರೆ ಸಭೆಯಲ್ಲಿ ಆಯುಕ್ತರು ವಿಷಯ ಪ್ರಸ್ತಾಪಿಸುತ್ತಿದ್ದಂತೆ ಕೆಲವರು ಆಕ್ಷೇಪಿಸಿ ತಾವು ಭೂಮಿ ನೀಡುವುದಿಲ್ಲ ಎಂದು ತಕರಾರು ತೆಗೆದರೆ, ಮತ್ತೊಂದು ಗುಂಪು ನಮಗೆ ಯೋಜನೆಯಿಂದ ಆರ್ಥಿಕ ಅನುಕೂಲವಾಗುತ್ತದೆ. ಜೊತೆಗೆ ಗ್ರಾಮದ ಅಭಿವೃದ್ಧಿಯಾಗುವುದರಿಂದ ಜಮೀನು ನೀಡುತ್ತೇವೆ ಎಂದರು.
ಗೊಂದಲದ ನಡುವೆ ಆಯುಕ್ತರು ಮಾತು ಮುಗಿಸಿ, ನಗರ ಯೋಜಕ ಸದಸ್ಯರು ಈ ಕುರಿತಾಗಿ ಮಾತು ಆರಂಭಿಸಿದರು. ಪರಿಸ್ಥಿತಿ ಗಂಭೀರ ಸ್ವರೂಪ ತಾಳುತ್ತಿದ್ದರಿಂದ ಸಚಿವ ಜಿಟಿಡಿ ಮಧ್ಯಪ್ರವೇಶಿಸಿ "ಮುಡಾ ಆಯುಕ್ತರು ನನ್ನನ್ನು ಕರೆದಿದ್ದರಿಂದ ನಾನು ಬಂದಿದ್ದೇನೆಯೇ ಹೊರತು ಬಲವಂತವಾಗಿ ನಿಮ್ಮ ಜಮೀನು ಕಿತ್ತುಕೊಳ್ಳಲಾಗದು" ಎಂದರು.
ಸಚಿವ ಜಿಟಿಡಿ ಮಾತನಾಡುತ್ತಿರುವಾಗಲೇ ಕೆಲವರು ನಮ್ಮೊಂದಿಗೆ ಮುಡಾ ಅಧಿಕಾರಿಗಳು ಯಾರೂ ಮಾತನಾಡಿಲ್ಲ. ನಾವು ಭೂಮಿ ಕೊಡಲು ಸಮ್ಮತಿಸಿಯೂ ಇಲ್ಲ. ನಮಗಿರುವುದು ಕಡಿಮೆ ಜಮೀನು. ನಾವು ಈ ಭೂಮಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ಅದನ್ನು ಕೊಟ್ಟು ನಾವು ಬೇರೆ ಯಾವ ಕಸುಬು ಮಾಡುವುದು? ಎಂದು ಪ್ರಶ್ನಿಸಿದರು. ಇದರಿಂದ ಕೆರಳಿದ ಜಿಟಿಡಿ ಮುಡಾ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಇಷ್ಟೆಲ್ಲಾ ಆದರೂ ವಿರೋಧ ವ್ಯಕ್ತಪಡಿಸಿದ ಕಾರಣ ಕೋಪಗೊಂಡ ಸಚಿವರು, ಮೂಡಾ ಆಯುಕ್ತರು ಮಾಡಿದ ಅವಾಂತರದಿಂದ ಕೋಪಗೊಂಡು ಕಡೆಗೆ ಮೈಕ್ ಎಸೆದು ವೇದಿಕೆಯಿಂದ ಇಳಿದು ಕಾರು ಏರಿ ಹೊರಟೇ ಬಿಟ್ಟರು. ಪರಿಣಾಮ ರೈತರೊಂದಿಗಿನ ಸಂಧಾನ ಸಭೆ ಅಪೂರ್ಣಗೊಂಡಿತು.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications