ಮೂಡಾ ಅಧಿಕಾರಿಗಳ ಎಡವಟ್ಟಿಗೆ ಪೇಚಿಗೆ ಸಿಲುಕಿದ ಸಚಿವ ಜಿಟಿ ದೇವೇಗೌಡ!
ಮೈಸೂರು, ಫೆಬ್ರವರಿ 5:ಮೂಡಾ ಅಭಿವೃದ್ಧಿಪಡಿಸಲು ಉದ್ದೇಶಿಸಿ ಬಹುನಿರೀಕ್ಷಿತ 'ಬಲ್ಲಹಳ್ಳಿ ಬಡಾವಣೆ ಯೋಜನೆ'ಗೆ ಭೂಮಿ ನೀಡುವ ಸಂಬಂಧ ರೈತರಿಂದ ಪರ ಹಾಗೂ ವಿರುದ್ಧ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಲ್ಲಹಳ್ಳಿ ಗ್ರಾಮದಲ್ಲಿ ನಡೆದ ಸಭೆ ತೀವ್ರ ಗೊಂದಲದಲ್ಲಿ ಕೊನೆಗೊಂಡಿತು.
ಇದರಿಂದ ಮುಜುಗರಕ್ಕೀಡಾಗಿ ಮುಡಾ ಆಯುಕ್ತ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಸಭೆಯ ಅರ್ಧಕ್ಕೇ ವೇದಿಕೆಯಿಂದ ಹೊರನಡೆದರು.
ಬಡಾವಣೆಗೆ 50:50 ಅನುಪಾತದಲ್ಲಿ ಅಗತ್ಯವಿರುವ ಭೂಮಿಯನ್ನು ಪಡೆಯಲು ಮೂಡಾ ಬಲ್ಲಹಳ್ಳಿ ಗ್ರಾಮದಲ್ಲಿ ಸಭೆ ಏರ್ಪಡಿಸಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಿತ್ತು.

"ಈಗಾಗಲೇ ರೈತರೊಂದಿಗೆ 4 ಬಾರಿ ಸಭೆ ನಡೆಸಿ ಚರ್ಚಿಸಿದ್ದೇವೆ. ಭೂಮಿ ನೀಡಲು ಬಹುತೇಕ ಭೂ ಮಾಲೀಕರು ಸಮ್ಮತಿಸಿದ್ದಾರೆ. ನೀವು ಬಂದು ಗೊಂದಲ ನಿವಾರಿಸಿದಲ್ಲಿ ಉಳಿದವರು ಒಪ್ಪಿಕೊಳ್ಳುತ್ತಾರೆ. ನೀವು ಹೇಳಿದರೆ ಅಲ್ಲಿಯ ಜನ ಸಂಪೂರ್ಣ ಸಹಕಾರ ನೀಡುತ್ತಾರೆ" ಎಂದು ಮುಡಾ ಆಯುಕ್ತ ಕಾಂತರಾಜು ಹೇಳಿದ್ದರಿಂದ, ಸಚಿವರು ಸಭೆಗೆ ಆಗಮಿಸಿದ್ದರು.
ಆದರೆ ಸಭೆಯಲ್ಲಿ ಆಯುಕ್ತರು ವಿಷಯ ಪ್ರಸ್ತಾಪಿಸುತ್ತಿದ್ದಂತೆ ಕೆಲವರು ಆಕ್ಷೇಪಿಸಿ ತಾವು ಭೂಮಿ ನೀಡುವುದಿಲ್ಲ ಎಂದು ತಕರಾರು ತೆಗೆದರೆ, ಮತ್ತೊಂದು ಗುಂಪು ನಮಗೆ ಯೋಜನೆಯಿಂದ ಆರ್ಥಿಕ ಅನುಕೂಲವಾಗುತ್ತದೆ. ಜೊತೆಗೆ ಗ್ರಾಮದ ಅಭಿವೃದ್ಧಿಯಾಗುವುದರಿಂದ ಜಮೀನು ನೀಡುತ್ತೇವೆ ಎಂದರು.
ಗೊಂದಲದ ನಡುವೆ ಆಯುಕ್ತರು ಮಾತು ಮುಗಿಸಿ, ನಗರ ಯೋಜಕ ಸದಸ್ಯರು ಈ ಕುರಿತಾಗಿ ಮಾತು ಆರಂಭಿಸಿದರು. ಪರಿಸ್ಥಿತಿ ಗಂಭೀರ ಸ್ವರೂಪ ತಾಳುತ್ತಿದ್ದರಿಂದ ಸಚಿವ ಜಿಟಿಡಿ ಮಧ್ಯಪ್ರವೇಶಿಸಿ "ಮುಡಾ ಆಯುಕ್ತರು ನನ್ನನ್ನು ಕರೆದಿದ್ದರಿಂದ ನಾನು ಬಂದಿದ್ದೇನೆಯೇ ಹೊರತು ಬಲವಂತವಾಗಿ ನಿಮ್ಮ ಜಮೀನು ಕಿತ್ತುಕೊಳ್ಳಲಾಗದು" ಎಂದರು.
ಸಚಿವ ಜಿಟಿಡಿ ಮಾತನಾಡುತ್ತಿರುವಾಗಲೇ ಕೆಲವರು ನಮ್ಮೊಂದಿಗೆ ಮುಡಾ ಅಧಿಕಾರಿಗಳು ಯಾರೂ ಮಾತನಾಡಿಲ್ಲ. ನಾವು ಭೂಮಿ ಕೊಡಲು ಸಮ್ಮತಿಸಿಯೂ ಇಲ್ಲ. ನಮಗಿರುವುದು ಕಡಿಮೆ ಜಮೀನು. ನಾವು ಈ ಭೂಮಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ಅದನ್ನು ಕೊಟ್ಟು ನಾವು ಬೇರೆ ಯಾವ ಕಸುಬು ಮಾಡುವುದು? ಎಂದು ಪ್ರಶ್ನಿಸಿದರು. ಇದರಿಂದ ಕೆರಳಿದ ಜಿಟಿಡಿ ಮುಡಾ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಇಷ್ಟೆಲ್ಲಾ ಆದರೂ ವಿರೋಧ ವ್ಯಕ್ತಪಡಿಸಿದ ಕಾರಣ ಕೋಪಗೊಂಡ ಸಚಿವರು, ಮೂಡಾ ಆಯುಕ್ತರು ಮಾಡಿದ ಅವಾಂತರದಿಂದ ಕೋಪಗೊಂಡು ಕಡೆಗೆ ಮೈಕ್ ಎಸೆದು ವೇದಿಕೆಯಿಂದ ಇಳಿದು ಕಾರು ಏರಿ ಹೊರಟೇ ಬಿಟ್ಟರು. ಪರಿಣಾಮ ರೈತರೊಂದಿಗಿನ ಸಂಧಾನ ಸಭೆ ಅಪೂರ್ಣಗೊಂಡಿತು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications