ಕೊನೆಗೂ ಬಂತು ಬಂಡೀಪುರದ ಸಾಕಾನೆಗಳಿಗೆ ಆಹಾರ!
ಗುಂಡ್ಲುಪೇಟೆ, ಜವನರಿ 18: ಸರ್ಕಾರದಿಂದ ಸಾಕಾನೆಗಳಿಗೆ ನೀಡಲಾಗುವ ಪೌಷ್ಠಿಕ ಆಹಾರಗಳ ದಾಸ್ತಾನು ಸರಬರಾಜು ಆಗದ ಕಾರಣದಿಂದಾಗಿ ಸಾಕಾನೆಗಳಿಗೆ ಆಹಾರ ನೀಡಲು ಸಾಧ್ಯವಾಗದೆ ಅರಣ್ಯಕ್ಕೆ ಬಿಡಲಾಗಿದೆ ಎಂಬ ಸುದ್ದಿ ಇತ್ತೀಚೆಗೆ ಬಂಡೀಪುರದ ಸಾಕಾನೆ ಶಿಬಿರದಿಂದ ಕೇಳಿ ಬಂದಿತ್ತು.
ಸಾಕಾನೆಗಳಿಗೆ ಆಹಾರದಲ್ಲಿ ವ್ಯತ್ಯವಾಗಿದ್ದು, ಪ್ರಾಣಿಪ್ರಿಯರ ಬೇಸರಕ್ಕೆ ಕಾರಣವಾಗಿತ್ತು. ಆದರೆ ಈಗ ಸರ್ಕಾರದಿಂದ ಬರಬೇಕಾಗಿದ್ದ ಆಹಾರಗಳ ದಾಸ್ತಾನು ಬಂದಿದ್ದು ಸಾಕಾನೆಗಳಿಗೆ ಸಮರ್ಪಕವಾಗಿ ಆಹಾರವನ್ನು ನೀಡಲಾಗುತ್ತಿದೆಯಂತೆ.
ಬಂಡೀಪುರ ಅಭಯಾರಣ್ಯದ ಶಿಬಿರದಲ್ಲಿ ಜಯಪ್ರಕಾಶ್, ಚೈತ್ರ, ಲಕ್ಷ್ಮೀ ಹಾಗೂ ಎರಡು ಮರಿಯಾನೆ ಸೇರಿ 5 ಸಾಕಾನೆಗಳಿದ್ದು, ಸೂಕ್ತ ಸಮಯಕ್ಕೆ ಆಹಾರ ಸರಬರಾಜು ಆಗದ ಕಾರಣ ಅರಣ್ಯದಲ್ಲಿರುವ ಸೊಪ್ಪು ತಿಂದು ಬದುಕುವ ಪರಿಸ್ಥಿತಿ ಬಂದೊದಗಿತ್ತು. ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಸುದ್ದಿ ಪ್ರಾಸವಾರ ಕೂಡಲೇ ಎಚ್ಚೆತ್ತುಕೊಂಡ ಸಂಬಂಧಿಸಿದ ಅಧಿಕಾರಿಗಳು ಮಂಗಳವಾರದಿಂದ ಆನೆಗಳಿಗೆ ಆಹಾರವನ್ನು ಪೂರೈಕೆ ಮಾಡಿದ್ದಾರೆ. ಸದ್ಯ ಸಾಕಾನೆಗಳು ಇರುವ ಶಿಬಿರಕ್ಕೆ ಭತ್ತದ ಹುಲ್ಲು, ಭತ್ತ, ಉಪ್ಪು, ತೆಂಗಿನ ಕಾಯಿ ಬಂದಿದ್ದು ಮಾವುತರು ಮತ್ತು ಕಾವಾಡಿಗಳು ಆಹಾರವನ್ನು ತಯಾರಿಸಿ ಆನೆಗಳಿಗೆ ನೀಡುತ್ತಿದ್ದಾರೆ.
ಟೆಂಡರ್ ಪ್ರಕ್ರಿಯೆಯಿಂದಾಗಿ ಆಹಾರ ದಾಸ್ತಾನು ಸರಬರಾಜಿಗೆ ಅಡ್ಡಿಯಾಗಿ ಸಾಕಾನೆಗಳಿಗೆ ಆಹಾರದ ಸಮಸ್ಯೆ ಉಂಟಾಗಿತ್ತು. ಮುಂದೆ ಅಂತಹ ಪರಿಸ್ಥಿತಿ ನಿರ್ಮಾಣವಾಗಲಾರದು ಎಂಬುದಾಗಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ ಅವರು ತಿಳಿಸಿದ್ದಾರೆ.
ಕೆಲವು ದಿನಗಳ ಕಾಲ ಅರಣ್ಯದಲ್ಲೇ ಬೀಡು ಬಿಟ್ಟು ಹಸಿರು ಸೊಪ್ಪು ತಿನ್ನುತ್ತಾ ದಿನಕಳೆದಿದ್ದ ಸಾಕಾನೆಗಳು ಇದೀಗ ಎಂದಿನಂತೆ ಆಹಾರ ಸಿಗುತ್ತಿರುವುದರಿಂದ ಖುಷಿಯಾಗಿ ಆಹಾರ ಸೇವಿಸುತ್ತಿವೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications