ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ಯಾನುಭೋಗರ ಮಾತು ಕೇಳಿದ್ರೆ ಸಿಎಂ ಆಗುತ್ತಿರಲಿಲ್ಲ:ಸಿದ್ದರಾಮಯ್ಯ

|
Google Oneindia Kannada News

ಮೈಸೂರು, ಫೆಬ್ರವರಿ 03: ನಮ್ಮೂರಿನ ಶ್ಯಾನುಭೋಗರ ಮಾತು ಕೇಳಿದ್ರೆ ನಾನು ಸಿಎಂ ಆಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಸುತ್ತೂರಿನಲ್ಲಿ ಶನಿವಾರ (ಫೆಬ್ರವರಿ 02) ನಡೆದ ಭಜನಾ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಪ್ಪ ಹಿಂದಿನಿಂದಲೂ ನಮ್ಮೂರಿನ ಶ್ಯಾನಭೋಗರ ಮಾತು ಹೆಚ್ಚಾಗಿ ಕೇಳುತ್ತಿದ್ದರು. ನಾನು ಅವರ ಮಾತು ಕೇಳಿದ್ದರೆ ಸಿಎಂ ಆಗುತ್ತಿರಲಿಲ್ಲ. ಊರಿನಲ್ಲಿ ಪಂಚಾಯಿತಿ ಸೇರಿಸಿ ಎಲ್ಲರನ್ನು ಒಪ್ಪಿಸಿ ನಾನು ಕಾನೂನು ಪದವಿ ಓದಿದೆ.

ಸುಮಲತಾ ಅಂಬರೀಶ್‌ಗೆ ಮಂಡ್ಯ ಟಿಕೆಟ್: ಸಿದ್ದರಾಮಯ್ಯ ಪ್ರತಿಕ್ರಿಯೆಸುಮಲತಾ ಅಂಬರೀಶ್‌ಗೆ ಮಂಡ್ಯ ಟಿಕೆಟ್: ಸಿದ್ದರಾಮಯ್ಯ ಪ್ರತಿಕ್ರಿಯೆ

ನನ್ನ ಮಗ ಎಲ್.ಎಲ್.ಬಿ ಕೋರ್ಸ್ ಮಾಡಬೇಕು ಎಂದು ನಮ್ಮಪ್ಪ ಶ್ಯಾನುಭೋಗರ ಬಳಿ ಕೇಳಿದ್ದರು. ಆಗ ಶ್ಯಾನುಭೋಗರು, ಹೇ.. ಕುರುಬರು ಲಾಯರ್ ಓದಲು ಆಗುವುದಿಲ್ಲ ಬೇಡ. ಲಾಯರ್ ಗಿರಿ ಏನಿದ್ರೂ ಬ್ರಾಹ್ಮಣರ ಕೆಲಸ ಅಂತ ಆ ಶ್ಯಾನುಭೋಗರು ಹೇಳಿದ್ದರು. ಶ್ಯಾನುಭೋಗರ ಮಾತು ಕೇಳಿದ್ದ ನಮ್ಮಪ್ಪ ನನಗೆ ಓದಿಸೋಲ್ಲ ಎಂದಿದ್ದರು.

Former CM Siddaramaiah remember his college life in Mysuru

 ಹಳೆ ಮೈಸೂರು ಭಾಗದ ಮುಖಂಡರೊಂದಿಗೆ ಸಿದ್ದರಾಮಯ್ಯ ಸಭೆ ಹಳೆ ಮೈಸೂರು ಭಾಗದ ಮುಖಂಡರೊಂದಿಗೆ ಸಿದ್ದರಾಮಯ್ಯ ಸಭೆ

ಮನೆಯಲಿ ಗಲಾಟೆ ಮಾಡಿದೆ. ಎಲ್.ಎಲ್.ಬಿ ಓದಿಸಲಿಲ್ಲ ಅಂದ್ರೆ, ಪಾಲು ಕೊಟ್ಟು ಬಿಡು ಅಂತ ಕೇಳಿದ್ದೆ. ಆಗ ಊರಿನಲ್ಲಿ ಪಂಚಾಯಿತಿ ಸೇರಿಸಿ ಕೊನೆಗೆ ನಾನು ಎಲ್.ಎಲ್.ಬಿ ಓದಲು ಅನುಮತಿ ನೀಡಿದರು ಎಂದು ತಮ್ಮ ಕಾಲೇಜಿನ ದಿನವನ್ನು ನೆನಪಿಸಿಕೊಂಡರು.

Former CM Siddaramaiah remember his college life in Mysuru

 ಹಳೆ ಮಿತ್ರ ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೇವೇಗೌಡ ಹಳೆ ಮಿತ್ರ ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೇವೇಗೌಡ

ರಾಜ್ಯದ ಜನತೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದರು ಕೂಡ, ಚಾಮುಂಡೇಶ್ವರಿ ಜನರು ನನ್ನನ್ನು ಸೋಲಿಸಿದರು. ಆದರೆ ದೂರದ ಎಲ್ಲೋ ಬಾದಾಮಿ ಕ್ಷೇತ್ರದ ಜನ ಗೆಲ್ಲಿಸಿದರು. ವರುಣಾ ಕ್ಷೇತ್ರದಲ್ಲಿ ನಿಂತಿದ್ದರು ಕೂಡ ನೀವು ಆಶೀರ್ವಾದ ನೀಡುತ್ತಿದ್ದೀರಿ. ಹೀಗಾಗಿ ಈ ವರುಣಾ ಕ್ಷೇತ್ರ ಹಾಗೂ ಸುತ್ತೂರು ಮಠದ ಮೇಲೆ ನನಗೆ ಅಪಾರ ಗೌರವ ಇದೆ ಎಂದರು.

English summary
Former CM Siddaramaiah remembers his college life and political journey in bhajan mela programme at Suttur mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X