ಮೈಸೂರು: ಮಹಿಳಾ ಕ್ರಿಕೆಟ್ ವಿಶ್ವಕಪ್, ಭಾರತ ಗೆಲುವಿಗಾಗಿ ರ್ಯಾಲಿ
ಮೈಸೂರು, ಜುಲೈ 23: ಐಸಿಸಿ ಮಹಿಳೆಯರ ವಿಶ್ವಕಪ್ ಫೈನಲ್ ನಲ್ಲಿ ಭಾರತ ಗೆಲುವಿಗಾಗಿ ಇಂದು (ಭಾನುವಾರ) ಸೈಕಲ್ ಪ್ಯೂರ್ ಅಗರಬತ್ತೀಸ್ ರವರಿಂದ ರ್ಯಾಲಿಯನ್ನು ಆಯೋಜಿಸಲಾತ್ತು.
ಶುಕ್ರವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಫೈನಲ್ ನಲ್ಲಿ ಭಾರತದ ಗೆಲುವಿಗೆ ನಗರದ ಅರಮನೆ ಹತ್ತಿರದ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥಿನೆ ಮಾಡಿದರು. ಸೈಕಲ್ ಪ್ಯೂರ್ ಅಗರಬತ್ತೀಸ್ ಆಯೋಜಿಸಿದ್ದ ಅಭಿಯಾನಕ್ಕೆ ಕ್ರಿಕೆಟರ್ ವನಿತಾ ಅವರು ಆರು ಅಡಿ ಎತ್ತರದ ಅಖಂಡ ಅಗರಬತ್ತಿಯನ್ನು ಹಚ್ಚುವುದರ ಮೂಲಕ ಚಾಲನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಾಗಿದೆ.ದೇಶವನ್ನು ಒಂದುಗೂಡಿಸುವಂತಹ ಕ್ರೀಡೆ ಇದಾಗಿದೆ.
ಸೈಕಲ್ ಪ್ಯೂರ್ ಅಗರಬತ್ತೀಸ್ ಅಭಿಯಾನ ಮೈಸೂರಿನ ಜನರಿಗೆ ಈ ಆಟವನ್ನು ಕುರಿತು ತಮ್ಮ ಪ್ರೇಮವನ್ನು ಪ್ರದರ್ಶಿಸಲು ಹಾಗೂ ಭಾರತದ ಗೆಲುವಿಗೆ ತಮ್ಮ ಬೆಂಬಲವನ್ನು ವಿಸ್ತರಿಸಲು ಮತ್ತೊಂದು ಅವಕಾಶವನ್ನು ನೀಡಿದೆ.

ಇದುವರೆಗೆ ತಂಡದ ಪ್ರದರ್ಶನ ಶ್ಲಾಘನೀಯವಾಗಿದ್ದು, ಸಂಪೂರ್ಣ ದೇಶ ಅವರನ್ನು ಬೆಂಬಲಿಸುತ್ತದೆ. ಜೊತೆಗೆ ನಮ್ಮ ಶುಭಾ ಹಾರೈಕೆ ಕೂಡ ಇದೇ ಗೆದ್ದು ಬಾ ಇಂಡಿಯಾ" ಎಂದರು.












Click it and Unblock the Notifications