ಬಸ್ ಕಿಟಕಿಯಿಂದ ಗುಟ್ಕಾ ಉಗುಳಲು ತಲೆ ಹೊರಹಾಕಿದ ITI ವಿದ್ಯಾರ್ಥಿ ರುಂಡವೇ ಹಾರಿಹೋಯ್ತು!

ಧಾರವಾಡ: ಬಸ್‌ ಅಥವಾ ಕಾರುಗಳಲ್ಲಿ ಪ್ರಯಾಣಿಸುವಾಗ ಎಚ್ಚರ ತಪ್ಪಿದರೆ ಅಥವಾ ಕಿಟಕಿಯಿಂದ ದೇಹದ ಭಾಗಗಳನ್ನು ಹೊರಹಾಕಿದರೆ ಅದು ಎಷ್ಟು ಅಪಾಯಕಾರಿ ಎಂಬುದಕ್ಕೆ ಹುಬ್ಬಳ್ಳಿ ಸಮೀಪದ ಕುಂದಗೋಳದಲ್ಲಿ ನಡೆದ ಭೀಕರ ಅಪಘಾತವೊಂದು ಉದಾಹರಣೆಯಾಗಿದೆ. ಚಲಿಸುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಎನ್‌ಡ್ಬ್ಯೂಕೆಆರ್‌ಟಿಸಿ) ಬಸ್‌ನ ಕಿಟಕಿಯಿಂದ ಗುಟ್ಕಾ ಉಗುಳುವುದಕ್ಕಾಗಿ ತಲೆ ಹೊರಹಾಕಿದ್ದ ವಿದ್ಯಾರ್ಥಿಯೊಬ್ಬ, ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿಗೆ ಸಿಲುಕಿ ಶಿರಚ್ಛೇದಗೊಂಡಿದ್ದಾನೆ. ಈ ಅಮಾನವೀಯ ಘಟನೆ ಇಡೀ ಸಹ ಪ್ರಯಾಣಿಕರನ್ನು ಹಾಗೂ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಚಲಿಸುವ ಬಸ್‌ನಲ್ಲಿ ನಿರ್ಲಕ್ಷ್ಯ: ಐಟಿಐ ವಿದ್ಯಾರ್ಥಿ ಭೀಕರ ಸಾವು

ಮೃತಪಟ್ಟ ದುರ್ದೈವಿ ವಿದ್ಯಾರ್ಥಿಯನ್ನು ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ನಿವಾಸಿ ಪಕ್ಕಿರೇಶ್ (17) ಎಂದು ಗುರುತಿಸಲಾಗಿದೆ. ಈತ ಐಟಿಐ ವ್ಯಾಸಂಗ ಮಾಡುತ್ತಿದ್ದನು. ಗುರುವಾರ ಹುಬ್ಬಳ್ಳಿಯಿಂದ ತನ್ನ ಸ್ವಗ್ರಾಮವಾದ ಶಿರೂರಿಗೆ ತೆರಳುವ ಉದ್ದೇಶದಿಂದ, ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರದ ಕಡೆಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ ಅನ್ನು ಪಕ್ಕಿರೇಶ್ ಹತ್ತಿದ್ದನು. ಬಸ್ಸಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಆತನಿಗೆ, ಮುಂದೆ ಕಾದಿದ್ದ ಭೀಕರ ಮರಣದ ಅರಿವಿರಲಿಲ್ಲ. ತನ್ನ ಒಂದು ಸಣ್ಣ ನಿರ್ಲಕ್ಷ್ಯವೇ ತನ್ನ ಪ್ರಾಣಕ್ಕೆ ಕುತ್ತು ತರುತ್ತದೆ ಎಂದು ಆತ ಊಹಿಸಿರಲಿಲ್ಲ.

Hubballi

ಬಸ್ಸು ಕುಂದಗೋಳ ಪಟ್ಟಣದ ಹೊರವಲಯದಲ್ಲಿ ವೇಗವಾಗಿ ಚಲಿಸುತ್ತಿತ್ತು. ಈ ವೇಳೆ ಪಕ್ಕಿರೇಶ್ ಬಾಯಲ್ಲಿದ್ದ ಗುಟ್ಕಾವನ್ನು ಉಗುಳುವುದಕ್ಕಾಗಿ ಬಸ್ಸಿನ ಕಿಟಕಿಯಿಂದ ತನ್ನ ತಲೆಯನ್ನು ಹೊರಗೆ ಹಾಕಿದ್ದಾನೆ. ಅದೇ ಸಮಯದಲ್ಲಿ ಹಿಂದಿನಿಂದ ವೇಗವಾಗಿ ಧಾವಿಸಿ ಬಂದ ಟಿಪ್ಪರ್ ಲಾರಿಯೊಂದು ಆತನ ತಲೆಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಟಿಪ್ಪರ್ ಡಿಕ್ಕಿ ಹೊಡೆದ ರಭಸ ಎಷ್ಟಿತ್ತೆಂದರೆ, ಕ್ಷಣಾರ್ಧದಲ್ಲಿ ಆತನ ತಲೆ ದೇಹದಿಂದ ಸಂಪೂರ್ಣವಾಗಿ ಬೇರ್ಪಟ್ಟು ರಸ್ತೆ ಬದಿಗೆ ಉರುಳಿಕೊಂಡು ಹೋಗಿದೆ.

ಈ ಅಪಘಾತದ ಭೀಕರತೆಗೆ ಇಡೀ ಬಸ್‌ನಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ವಿದ್ಯಾರ್ಥಿಯ ರುಂಡ ರಸ್ತೆಯ ಬದಿಯಲ್ಲಿ ಬಿದ್ದಿದ್ದರೆ, ಮುಂಡವು ಬಸ್ಸಿನ ಕಿಟಕಿಯಲ್ಲೇ ನೇತಾಡುತ್ತಿತ್ತು. ಈ ರಕ್ತಸಿಕ್ತ ಹಾಗೂ ಅಘಾತಕಾರಿ ದೃಶ್ಯವನ್ನು ನೋಡಿದ ಸಹ ಪ್ರಯಾಣಿಕರು ಮತ್ತು ರಸ್ತೆ ಬದಿಯಲ್ಲಿದ್ದ ಜನರು ಅಕ್ಷರಶಃ ನಡುಗಿಹೋಗಿದ್ದಾರೆ. ಇಡೀ ಬಸ್ಸಿನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರಿದ್ದರು, ಅವರೆಲ್ಲರೂ ಭಯಭೀತರಾಗಿ ಕೂಗಾಟ ನಡೆಸಿದ್ದಾರೆ. ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕುಂದಗೋಳ ಪೊಲೀಸ್ ಠಾಣೆ ಅಧಿಕಾರಿಗಳ ಭೇಟಿ ಹಾಗೂ ತನಿಖೆ

ಘಟನೆಯ ಬಗ್ಗೆ ಮಾಹಿತಿ ಲಭ್ಯವಾದ ತಕ್ಷಣವೇ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಿದ ಪೊಲೀಸರು, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಈ ಭೀಕರ ಅಪಘಾತಕ್ಕೆ ಕಾರಣವಾದ ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಾಹನವನ್ನು ಜಪ್ತಿ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಸಂಚಾರ ಸುರಕ್ಷತೆ ಕುರಿತು ಸಾರ್ವಜನಿಕರಿಗೆ ಇದೊಂದು ಎಚ್ಚರಿಕೆ

ಈ ದುರ್ಘಟನೆಯು ಪ್ರತಿಯೊಬ್ಬ ಪ್ರಯಾಣಿಕರಿಗೂ ದೊಡ್ಡ ಪಾಠವಾಗಿದೆ. ಬಸ್ಸು, ರೈಲು ಅಥವಾ ಯಾವುದೇ ವಾಹನದಲ್ಲಿ ಪ್ರಯಾಣಿಸುವಾಗ ಕಿಟಕಿಯಿಂದ ಕೈ ಅಥವಾ ತಲೆಯನ್ನು ಹೊರಹಾಕುವುದು ನೇರವಾಗಿ ಸಾವವನ್ನುಆಹ್ವಾನಿಸಿದಂತೆ. ನಿರ್ದಿಷ್ಟವಾಗಿ ಯುವಜನತೆ ಇಂತಹ ಅಪಾಯಕಾರಿ ಅಭ್ಯಾಸಗಳನ್ನು ಬಿಡಬೇಕು. ಚಾಲಕರು ಎಷ್ಟೇ ಜಾಗರೂಕತೆಯಿಂದ ವಾಹನ ಚಲಾಯಿಸಿದರೂ, ಪ್ರಯಾಣಿಕರ ಸಣ್ಣ ನಿರ್ಲಕ್ಷ್ಯವು ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಪ್ರಯಾಣದ ವೇಳೆ ಎಚ್ಚರಿಕೆ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಣ್ಣ ನಿರ್ಲಕ್ಷ್ಯವೂ ಜೀವಕ್ಕೆ ಹೇಗೆ ಕುತ್ತು ತರುತ್ತದೆ ಎಂಬುದಕ್ಕೆ ಪಕ್ಕಿರೇಶ್ ಸಾವು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+