ಮಹಿಷ ರಾಕ್ಷಸ ಎಂಬುದು ಸುಳ್ಳು: ಪ್ರೊ. ಕೆಎಸ್ ಭಗವಾನ್
Recommended Video

ಮೈಸೂರು, ಅಕ್ಟೋಬರ್. 3 : ಚಿಂತಕ, ಪ್ರೊ. ಕೆ ಎಸ್ ಭಗವಾನ್ ದಸರಾ ಆರಂಭಕ್ಕೂ ಮುನ್ನವೇ ನಾಡಿನ ಶ್ರೇಷ್ಠ ದೇವತೆ ಚಾಮುಂಡಿಬೆಟ್ಟದ ಸನ್ನಿಧಿಯಲ್ಲಿರುವ ಮಹಿಷಾಸುರ ಮೂರ್ತಿಯನ್ನು ಕೆಡವಬೇಕೆಂದು ಹೇಳಿಕೆ ನೀಡಿದ್ದಾರೆ.
ಹೌದು, ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಚಾಮುಂಡಿಬೆಟ್ಟದಲ್ಲಿರುವ ರಾಕ್ಷಸ ರೂಪದ ಮಹಿಷನ ಪ್ರತಿಮೆ ಕೆಡವಬೇಕು. ಅದೇ ಜಾಗದಲ್ಲಿ ಬೌದ್ಧ ಬಿಕ್ಕುವಿನ ರೂಪದಲ್ಲಿರುವ ಮಹಿಷನ ಪ್ರತಿಮೆ ಸ್ಥಾಪಿಸಬೇಕು ಎಂದು ಹೇಳಿದ್ದಾರೆ.
1950 ರಲ್ಲಿ ಅಂದಿನ ರಾಜರು ಪುರೋಹಿತಶಾಹಿಗಳ ಮಾತು ಕೇಳಿ ರಕ್ಕಸ ರೂಪದಲ್ಲಿ ಇರುವ ಮಹಿಷನ ಪ್ರತಿಮೆ ಮಾಡಿದ್ದಾರೆ. ಮಹಿಷ ಒಬ್ಬ ರಾಕ್ಷಸ ಎಂಬುದು ಸುಳ್ಳು. ಪ್ರಸಿದ್ಧಿ ಪಡೆದಿರುವ ಮೈಸೂರಿಗೆ ಯಾರಾದರೂ ಮಹಿಷ ಅಂತಾ ಹೆಸರಿಡುತ್ತಾರಾ ? ಎಂದು ಮರು ಪ್ರಶ್ನಿಸಿದ್ದಾರೆ.

ಸ್ವಾಮಿ ವಿವೇಕಾನಂದರಷ್ಟು ಹಿಂದೂ ಧರ್ಮವನ್ನ ಯಾರೂ ಟೀಕಿಸಿಲ್ಲ. ಈ ಹಿಂದೆ ಬ್ಯಾಹ್ಮಣರು ರಾಕ್ಷಸರು ಅಂತ ಸ್ವಾಮಿ ವಿವೇಕಾನಂದರು ಹೇಳಿದ್ದರು. ಆದರೂ ಸ್ವಾಮಿ ವಿವೇಕಾನಂದರನ್ನು ಹಿಂದೂ ಐಕಾನ್ ಎನ್ನುತ್ತಾರೆ.
ಗೌತಮ ಬುದ್ಧರು ಅಸಮಾನತೆಯನ್ನ ವಿರೋಧಿಸಿದ್ದರು. ಆದರೆ ಅದೇ ಬುದ್ಧ ಕಳ್ಳ ಎಂದು ರಾಮನ ಬಾಯಲ್ಲಿ ಬುದ್ಧನನ್ನ ಪುರಾಣದಲ್ಲಿ ಬೈಸಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications