ಪಂಚರಾಜ್ಯದ ಚುನಾವಣೆಗೆ ಮೈಸೂರಿನಿಂದ ಮಸಿ ಬಳಕೆ!
ಮೈಸೂರು, ಜನವರಿ 31 : ದೇಶದಲ್ಲಿ ನಡೆಯುತ್ತಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಮೈಸೂರಿನಿಂದಲೇ ಶಾಯಿ ವಿತರಣೆಯಾಗುತ್ತಿದೆ. ಉತ್ತರ ಪ್ರದೇಶ ಒಂದಕ್ಕೆ 3.30 ಲಕ್ಷ ಅಳಿಸಲಾಗದ ಮಸಿ ಬಾಟಲ್ ಗಳು ಪೂರೈಕೆಯಾಗಿದೆ ಎನ್ನಲಾಗಿದೆ.
ಪಂಚರಾಜ್ಯಗಳಾದ ಉತ್ತರಪ್ರದೇಶ, ಮಣಿಪುರ, ಗೋವಾ, ಪಂಜಾಬ್, ಉತ್ತರಾಖಂಡ್ ವಿಧಾನಸಭಾ ಚುನಾವಣೆ ಮತದಾರರ ಕೈ ಬೆರಳಿಗೆ ಹಾಕುವ ಅಳಿಸಲಾಗದ ಶಾಯಿಯನ್ನು ಮೈಸೂರಿನ ಮೈಲ್ಯಾಕ್(ಮೈಸೂರು ಪೆಯಿಂಟ್ ಮತ್ತು ವಾರ್ನಿಷ್ ಲಿಮಿಟೆಡ್) ನಿಂದ ಪೂರೈಕೆ ಮಾಡಲಾಗುತ್ತಿದೆ. ಚುನಾವಣಾ ಆಯೋಗದಿಂದ ಇನ್ನೂ 2 ಲಕ್ಷ ಬಾಟಲ್ ಗಳಿಗೆ ಬೇಡಿಕೆ ಬಂದಿದ್ದು ಅದನ್ನು ಕೂಡ ಪೂರೈಕೆ ಮಾಡಲಾಗುತ್ತಿದೆ.[ಚಿತ್ರಗಳಲ್ಲಿ : ಬ್ಯಾಂಕುಗಳಲ್ಲಿ ಬೆರಳುಗಳಿಗೆ ಅಂಟಿದ ಮಸಿ]
'ಮೈಲಾಕ್ ಸಂಸ್ಥೆ 6.5 ಕೋಟಿ ರೂ. ವ್ಯವಹಾರ ನಡೆಸಿದ್ದು, ಯಾವುದೇ ಕ್ಷಣದಲ್ಲಿ ಬೇಡಿಕೆ ಬಂದರೂ ಶಾಯಿ ಪೂರೈಕೆ ಮಾಡಲು ನಾವು ಸಿದ್ದರಿದ್ದೇವೆ. ಮೈಲ್ಯಾಕ್ ಅಳಿಸಲಾಗದ ಶಾಯಿ ತಯಾರಿಸುವ ದೇಶದ ಏಕೈಕ ಸಂಸ್ಥೆಯಾಗಿದ್ದು, ದೇಶ ಅಲ್ಲದೆ ವಿಶ್ವದ ಇತರ ರಾಷ್ಟ್ರಗಳಿಗೂ ಶಾಯಿ ಪೂರೈಸುತ್ತಾ ಬಂದಿದೆ. ಇದರ ಜೊತೆಯಲ್ಲಿ ಪಂಚ ರಾಜ್ಯಗಳಿಗೂ ಶಾಯಿ ಬಾಟಲ್ ರವಾನೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಮೈಲಾಕ್ ತಿಳಿಸಿದರು.

ವಿಶ್ವ ವಿಖ್ಯಾತ ಮೈಸೂರು
ಮೈಸೂರಿನ ಹೆಸರು ಜಗದ್ವಿಖ್ಯಾತ. ಸದಾ ಒಂದಿಲ್ಲೊಂದು ರೀತಿಯಲ್ಲಿ ಹೆಸರು ಮಾಡುತ್ತಲೇ ಇರುತ್ತದೆ. ಹಲವಾರು ಪ್ರವಾಸಿತಾಣಗಳನ್ನು ಹೊಂದಿರುವ ಮೈಸೂರು ಪ್ರವಾಸಿಗರ ಆಕರ್ಷಕ ತಾಣವೂ ಹೌದು. ಜನತೆ ಬಳಸುವ ನೋಟುಗಳ ಮುದ್ರಣವೂ ಮೈಸೂರಿನಲ್ಲಿಯೇ ಆಗುತ್ತದೆ ಎಂಬ ಹೆಗ್ಗಳಿಕೆ ಒಂದೆಡೆಯಾದರೆ, ತಮ್ಮ ಹಕ್ಕು ಚಲಾಯಿಸಿದ್ದೇವೆ ಎಂದು ತೋರಿಸಲು ಗುರುತಿಗಾಗಿ ಬಳಸುವ ಶಾಯಿಯೂ ಇಲ್ಲಿಯೇ ಸಿದ್ಧಗೊಳ್ಳುತ್ತದೆ. ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶಕ್ಕೆ 5.30 ಲಕ್ಷ ಅಳಿಸಲಾಗದ ಶಾಯಿಯ ಬಾಟಲಿಗಳನ್ನು ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆಯಿಂದ ಪೂರೈಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಲಕ್ಷಗಟ್ಟಲೆ ಮಸಿ ಬಾಟಲಿಗಳು
ಫೆಬ್ರವರಿ 4 ರಿಂದ ಮತ್ತು ಮಾರ್ಚ್ 11 ವರೆಗೆ ನಡೆಯಲಿರುವ ಉತ್ತರಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಕಾಂಡ ವಿಧಾನಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾರರ ಬೆರಳಿಗೆ ಹಾಕುವ ಶಾಯಿಯನ್ನ ಪೂರೈಸುವಂತೆ ಚುನಾವಣಾ ಆಯೋಗ ಕಳೆದ ಮೂರು ತಿಂಗಳ ಹಿಂದೆಯೇ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಟ್ ಗೆ 4.18 ಲಕ್ಷ ಶಾಯಿ ಬಾಟಲ್ ಗಳನ್ನು ಪೂರೈಸುವಂತೆ ಕೇಳಿತ್ತು.
ಈ ಹಿನ್ನೆಲೆ ಕಳೆದ ಒಂದು ತಿಂಗಳಿಂದಲೇ ಮೈಲಾಕ್ ನಲ್ಲಿ 50 ಮಂದಿ ಖಾಯಂ ಮತ್ತು 100 ಮಂದಿ ಹೊರ ಗುತ್ತಿಗೆ ಕಾರ್ಮಿಕರು ದಿನದ 2 ಪಾಳಯದಲ್ಲೂ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಉತ್ತರ ಪ್ರದೇಶ ಸೇರಿದಂತೆ ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಗೆ ಶಾಯಿಯನ್ನ ಪೂರೈಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಐದು ರಾಜ್ಯಗಳಿಗೂ ಶಾಯಿ ಪೂರೈಕೆ…!
ಪಂಚರಾಜ್ಯಗಳ ಚುನಾವಣೆಗೆ ಒಟ್ಟು 10 ಎಂಎಲ್ ಸಾಮರ್ಥ್ಯದ 4.18 ಲಕ್ಷ ಶಾಯಿಯನ್ನ ಪೂರೈಸುವಂತೆ ಕೇಂದ್ರ ಚುನಾವಣಾ ಆಯೋಗ ಮೈಲಾಕ್ ಗೆ ಬೇಡಿಕೆ ಸಲ್ಲಿಸಿತ್ತು. ಇದರನ್ವಯ ಫೆ. 4 ರಂದು ಒಂದೇ ಹಂತದಲ್ಲಿ ಚುನಾವಾಣೆ ನಡೆಯುವ ಗೋವಾ ರಾಜ್ಯಕ್ಕೆ 10 ಎಂಎಲ್ ನ 4 ಸಾವಿರ ಬಾಟಲ್ ಪೂರೈಸಲಾಗಿದೆ. ಪಂಜಾಬ್ಗೆ 10 ಎಂಎಲ್ ನ 52 ಸಾವಿರ ಬಾಟಲ್ ಗಳನ್ನ ಪೂರೈಕೆ ಮಾಡಲಾಗಿದೆ. ಇನ್ನು ಮಣಿಪುರಕ್ಕೆ 7,300 ಬಾಟಲ್ ಗಳನ್ನ ಈಗಾಗಲೇ ರವಾನಿಸಲಾಗಿದೆ.
ಫೆ. 11 ರಿಂದ ಮಾ. 8ರವರೆಗೆ 7 ಹಂತದಲ್ಲಿ ಮತದಾನ ನಡೆಯಲಿರುವ ಉತ್ತರಪ್ರದೇಶ ರಾಜ್ಯಕ್ಕೆ 10 ಎಂಎಲ್ ನ 3.30 ಲಕ್ಷ ಬಾಟಲ್ ಪೈಕಿ ಜ. 16ರಂದು 1 ಲಕ್ಷ ಬಾಟಲ್ ಗಳನ್ನು ಕಳುಹಿಸಲಾಗಿದೆ. ಇನ್ನುಳಿದ 2.30 ಲಕ್ಷ ಬಾಟಲ್ ಗಳನ್ನು ಜ. 24 ರಂದು ಕಳುಹಿಸಲು ಮೈಲಾಕ್ ಸಿದ್ಧತೆ ಮಾಡಿಕೊಂಡಿದೆ. ಚಿಕ್ಕ ರಾಜ್ಯ ಉತ್ತಾರಕಾಂಡಗೆ 25 ಸಾವಿರ ಬಾಟಲ್ ಗಳ ಶಾಯಿಯನ್ನು ಪೂರೈಸಲು ಕೇಂದ್ರ ಚುನಾವಣಾ ಆಯೋಗ ಬೇಡಿಕೆ ಸಲ್ಲಿಸಿದೆ ಎಂದು ಮೈಲಾಕ್ ನ ಅಧ್ಯಕ್ಷ ಹೆಚ್.ಎ ವೆಂಕಟೇಶ ತಿಳಿಸಿದರು.

ಬಾಟಲ್ ಗಳ ಮೌಲ್ಯವೆಷ್ಟು?
10 ಎಂಎಲ್ ನ ಶಾಯಿಯ ಬೆಲೆ 142 ರೂ. ನಿಗದಿ ಪಡಿಸಲಾಗಿದ್ದು, 1 ಬಾಟಲ್ ನಿಂದ 750 ಜನ ಮತದಾರರ ಬೆರಳಿಗೆ ಶಾಯಿ ಹಚ್ಚಬಹುದು . ಅಂದರೆ ಒಟ್ಟು 4.18 ಲಕ್ಷ ಬಾಟಲಿಗಳಿಗೆ ಮೌಲ್ಯ ಎಷ್ಟಾಗಬಹುದು ಎಂದು ನಿವೇ ಅಂದಾಜಿಸಿಕೊಳ್ಳಿ.

ಚುನಾವಣೆಯೇತರ ಬಳಕೆ
ಮೊದಲ ಬಾರಿಗೆ ನೋಟು ರದ್ದತಿ ಆದ ನಂತರ ಬ್ಯಾಂಕ್ಗಳು ಗುರುತಿಗಾಗಿ ಶಾಯಿಯನ್ನ ಬಳಸುವಂತೆ ತಿಳಿಸಿದ್ದರು. 3 ಲಕ್ಷ ಬಾಟಲ್ ಗಳನ್ನ ದೇಶದ ಆರ್ಬಿಐ ನಿರ್ದೆಶನದಂತೆ ವಿವಿದ ಬ್ಯಾಂಕ್ಗಳಿಗೆ ಮೈಲಾಕ್ ನಿಂದ ಶಾಯಿಯನ್ನ ಪೂರೈಸಲಾಗಿತ್ತು. ಈ ಮೂಲಕ ಮೊದಲ ಬಾರಿಗೆ ಚುನಾವಣೇತ್ತರ ಉದ್ದೇಶಕ್ಕಾಗಿ ಮೈಲಾಕ್ ಅಳಿಸಲಾಗದ ಶಾಯಿಯನ್ನ ಪೂರೈಸುವ ಮೂಲಕ ಹೆಚ್ಚಿನ ಲಾಭವನ್ನ ಪಡೆದಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications