ಕಣ್ಮನಸೆಳೆದ ಮೈಸೂರಿನ ಬನ್ನೂರು ಬಂಡೀ ಉತ್ಸವ

ಮೈಸೂರು, ಫೆಬ್ರವರಿ,23: ಹೇಮಾದ್ರಂಭ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಬನ್ನೂರಿನಲ್ಲಿ ಸೋಮವಾರ ನಡೆದ ರೋಮಾಂಚನಕಾರಿ 'ಬಂಡಿ ಉತ್ಸವ' ನೆರೆದಿದ್ದವರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಹುಣ್ಣಿಮೆ ದಿನದಂದು ರತ್ನಮಹಲ್ ಮುಂಭಾಗದಲ್ಲಿ ನಡೆದ ಈ ಬಂಡಿ ಉತ್ಸವದಲ್ಲಿ ದೇವಿಗೆ ವಿಶೇಷ ಪೂಜೆ-ಪುನಸ್ಕಾರಗಳು ವಿಜೃಂಭಣೆಯಿಂದ ಜರುಗಿದವು. ಈ ವೈಭವದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಸಾವಿರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.[10ನೇ ಮಹಾಕುಂಭಮೇಳದಿಂದ ಕಳೆಗಟ್ಟಿದ ಟಿ. ನರಸೀಪುರ]

Mysuru

ರಂಗೋಲಿಯಿಂದ ಸಿಂಗಾರಗೊಂಡಿದ್ದ ರಸ್ತೆಯಲ್ಲಿ ದೇವಿಯ ಮೆರವಣಿಗೆ ನಡೆಯಿತು. ಈ ಸಂದರ್ಭ ಮಾರ್ಗದುದ್ದಕ್ಕೂ ಭಕ್ತರು ಎಳನೀರನ್ನು ಸಮರ್ಪಿಸಿ ದೇವಿಗೆ ಕಾಸು ಹಾಗೂ ಹೂವಿನ ಸುರಿಳೆಗೈದರು.

ದೇವಿ ತೋಪಿನಲ್ಲಿ ದೇವಿಯು ಬರುವ ಮುನ್ನವೇ ಕಾವೇರಿ ಮಡುವಿನ ಸಮೀಪದಲ್ಲಿ ಕಾದಿದ್ದ ಸಾವಿರಾರು ಜನರು ದೇವಿಯ ದರ್ಶನವಾಗುತ್ತಿದ್ದಂತೆ ದೇವಿಗೆ ಜೈಕಾರ ಹಾಕಿದರು. ಈ ಸಂದರ್ಭದಲ್ಲಿ ನೈವೇದ್ಯಕ್ಕಾಗಿ ಅನ್ನವನ್ನು ಸಿದ್ದಪಡಿಸಲು ಅಗ್ಗಿಷ್ಟಿಕೆಯನ್ನು ಸಿದ್ದಪಡಿಸಿಕೊಂಡರು. ನಂತರ ಕಾವೇರಿ ಮಡುವಿನಲ್ಲಿ ದೇವಿಗೆ ಅವಭೃತ ಸ್ನಾನವಾಯಿತು.[ಅಂದದೂರು ಮೈಸೂರಿಗೆ ಸ್ವಚ್ಛನಗರಿ ಪಟ್ಟ ದಕ್ಕಿದ್ದು ಹೇಗೆ?]

Mysuru

ದೇವಿ ತೋಪಿನಲ್ಲಿ ದೇವಿಗೆ ಅವಭೃತ ಸ್ನಾನವಾದ ನಂತರ ಮಹಿಳೆಯರು ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಅವಭೃತ ಸ್ನಾನವಾಗುತ್ತಿದ್ದಂತೆ ಅನ್ನಸಂತರ್ಪಣೆಯ ಕಾರ್ಯವು ನಡೆಯಿತು.[ಭಾರತದ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಮೈಸೂರು ನಂ.1]

ಸಂಜೆ ದೇವಿ ತೋಪಿನಿಂದ ದೇವಿಯು ಬಂದ ನಂತರ ರತ್ನಮಹಲ್ ಬಳಿಯಿರುವ ಮಂಟಪದಲ್ಲಿ ಪ್ರತಿಷ್ಟಾಪಿಸಲಾಯಿತು. ಭಕ್ತರು ದೇವಿಯ ದರ್ಶನ ಪಡೆದ ನಂತರ ವಿಜೃಂಭಣೆಯ ಉತ್ಸವದೊಂದಿಗೆ ದೇವಿಯನ್ನು ಸ್ವಸ್ಥಾನಕ್ಕೆ ಸೇರಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+