ವೈರಲ್ ವಿಡಿಯೋ: ರೈಲ್ವೇ ನಿಲ್ದಾಣದಲ್ಲಿ ನಡೆಯಿತೊಂದು ಪವಾಡ!
Recommended Video

ಒಂದು ಕ್ಷಣ ಎದೆಯನ್ನು ಝಲ್ಲೆನ್ನಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ರೈಲನ್ನು ಹತ್ತುವುದಕ್ಕೆಂದು ಪರದಾಡಿ, ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾಗ ರೈಲ್ವೆ ಸಿಬ್ಬಂದಿ ಆತನನ್ನು ಪವಾಡವೆಂಬಂತೆ ರಕ್ಷಿಸಿದ ವಿಡಿಯೋ ಇದು!
ಈ ಘಟನೆ ನಡೆದಿದ್ದು ಮುಂಬೈಯ ಪಾನ್ವೆಲ್ ರೈಲ್ವೆ ನಿಲ್ದಾಣದಲ್ಲಿ. ಜು.14 ರಂದು ವ್ಯಕ್ತಿಯೊಬ್ಬ ರೈಲ್ವೇ ಸ್ಟೇಶನ್ನಿಗೆ ಬರುವ ಹೊತ್ತಿಗೆ ರೈಲು ಹೊರಟು ನಿಂತಿತ್ತು. ಮುಂದಿನ ರೈಲಿಗೆ ಕಾಯುತ್ತಿದ್ದರೆ ತಡವಾಗುತ್ತದೆಂದು ಆತ ಓಡುತ್ತಿರುವ ರೈಲಿಗೇ ಹತ್ತಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೀಳುವುದರಲ್ಲಿದ್ದರು. ತಕ್ಷಣವೇ ಪ್ರಯಾಣಿಕರೊಬ್ಬರು ಮತ್ತು ರೈಲ್ವೇ ಸಿಬ್ಬಂದಿ ಬಂದು ಅವರನ್ನು ಎಳೆದು ರಕ್ಷಿಸದಿದ್ದರೆ ಅವರು ಹಳಿಯೊಳಗೆ ಬಿದ್ದು ಮೃತರಾಗುತ್ತಿದ್ದರು!
#WATCH: Railway Police personnel & passengers save a man's life while he was trying to board a train at Mumbai's Panvel railway station. (CCTV footage) (14.07.18) pic.twitter.com/13DNtlJfaK
— ANI (@ANI) July 16, 2018
ಓಡುತ್ತಿರುವ ರೈಲು, ಬಸ್ಸುಗಳಿಗೆ ಹತ್ತುವುದು ಎಷ್ಟು ಅಪಾಯಕಾರಿ ಎಂಬುದು ಗೊತ್ತಿದ್ದರೂ ಜನರು ದಿವ್ಯನಿರ್ಲಕ್ಷ್ಯ ತಳೆದು ಮತ್ತದೇ ಕೆಲಸ ಮಾಡುತ್ತಿದ್ದಾರೆ. ಆದರೆ ಅದರಿಂದ ಪ್ರಾಣವನ್ನೇ ತೆರಬೇಕಾದೀತು ಎಂಬುದು ಎಷ್ಟೋ ಜನರಿಗೆ ಅರಿವಿಲ್ಲ.

ಓಡುತ್ತಿರುವ ರೈಲಿಗೆ ಹತ್ತುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ. ಎಲ್ಲಾ ಸಂದರ್ಭದಲ್ಲೂ ರಕ್ಷಣೆಗೆ ಪ್ರಯಾಣಿಕರೋ, ರೈಲ್ವೇ ಸಿಬ್ಬಂದಿಗಳೋ ಇರುವುದಕ್ಕೆ ಆಗದಿರಬಹುದು! ಒಂದು ಗಂಟೆ ತಡವಾದರೆ ಆದೀತು, ಜೀವಕ್ಕಿಂತ ಸಮಯ ಹೆಚ್ಚಲ್ಲವಲ್ಲ!
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications