ಅಶ್ಲೀಲ ಶೋ ಬಿಗ್ ಬಾಸ್ ನಿಷೇಧಕ್ಕೆ ಆಗ್ರಹಿಸಿ ಮೋದಿ ಸರ್ಕಾರಕ್ಕೆ ಪತ್ರ
ಮುಂಬೈ, ಅಕ್ಟೋಬರ್ 08: ಅತ್ಯಂತ ವಿವಾದಾತ್ಮಕ, ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಹಿಂದಿ ಆವೃತ್ತಿ ಮತ್ತೊಮ್ಮೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಬಿಗ್ ಬಾಸ್ 13ರ ಪ್ರಸಾರ ನಿಲ್ಲಿಸುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಕಾರ್ಮಿಕರ ಒಕ್ಕೂಟ ಪತ್ರ ಬರೆದಿದ್ದಾರೆ.
ಅಖಿಲ ಭಾರತ ಕಾರ್ಮಿಕರ ಒಕ್ಕೂಟದಿಂದ ಅಧಿಕೃತವಾಗಿ ಮೋದಿ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಐಎಎನ್ ಎಸ್ ವರದಿ ಮಾಡಿದೆ. ಈ ರಿಯಾಲಿಟಿ ಶೋನಲ್ಲಿ ಅತ್ಯಂತ ಅಸಭ್ಯ ರೀತಿಯ ದೃಶ್ಯಗಳಿದ್ದು, ಮನೆಯಲ್ಲಿ ಎಲ್ಲರೂ ಕುಳಿತು ನೋಡುವಂಥ ಕಾರ್ಯಕ್ರಮವಂತೂ ಅಲ್ಲ,
"ಬಿಗ್ ಬಾಸ್ 13ರಲ್ಲಿ ಆರಂಭವಾಗಿರುವ 'Bed friend forever' ಬಗ್ಗೆ ಅಕ್ಷೇಪ, ಟೀಕೆ, ಆಕ್ರೋಶ ವ್ಯಕ್ತವಾಗಿದ್ದು, ನೈತಿಕತೆಯ ಎಲ್ಲೆ ಮೀರಿರುವುದು ಕಂಡು ಬಂದಿದೆ. ಟಿವಿ ಮಾಧ್ಯಮದ ಸೆನ್ಸಾರ್ ಶಿಪ್ ಮೀರಿ ಇಂಥ ಚಟುವಟಿಕೆಗಳನ್ನು ಜನರ ಮುಂದಿಡಲಾಗುತ್ತಿದೆ. ಅದು ಅಲ್ಲದೆ, ಪ್ರೈಮ್ ಅವಧಿಯಲ್ಲಿ ಇಂಥ ಶೋ ಪ್ರಸಾರವಾಗುತ್ತದೆ. ಎಲ್ಲಾ ವಯೋಮಿತಿಯ, ಎಲ್ಲಾ ಸ್ತರ ವೀಕ್ಷಕರು ಬಿಗ್ ಬಾಸ್ ನೋಡುತ್ತಾರೆ.
ಈ ಹಿಂದೆ ಎಲ್ಲಾ ಹದ್ದು ಮೀರಿದಾಗ ಕೋರ್ಟ್ ಮೆಟ್ಟಿಲೇರಿ, ಶೋನ ಚಟುವಟಿಕೆಗಳು ಮಿತಿ ಮೀರದಂತೆ ನೋಡಿಕೊಳ್ಳಲಾಗಿತ್ತು. ಆದರೆ ಈ ಬಾರಿ ಮತ್ತೊಮ್ಮೆ ವೀಕ್ಷಣೆಗೆ ಅರ್ಹವಲ್ಲದೆ ದೃಶ್ಯಗಳು ನುಸುಳಿವೆ" ಎಂದು ಆಕ್ಷೇಪ ವ್ಯಕ್ತಪಡಿಸಿ ಪತ್ರದಲ್ಲಿ ಬರೆಯಲಾಗಿದೆ.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್
ಪತ್ರ ಕಳಿಸಿರುವ ಬಗ್ಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಾಂಡೆಲ್ ವಾಲ್ ಅವರು ಖಚಿತಪಡಿಸಿದ್ದು, "ಪ್ರತಿ ಎಪಿಸೋಡ್ ಸೆನ್ಸಾರ್ ಮಂಡಳಿ ವೀಕ್ಷಣೆಗೆ ಒಳಪಡಲಿದೆ. ಯಾವುದೇ ಕಾರಣಕ್ಕೂ ಸ್ವೇಚ್ಛಾಚಾರಕ್ಕೆ ಆಸ್ಪದ ನೀಡುವುದಿಲ್ಲ. ಕುಟುಂಬದ ಜೊತೆ ಕುಳಿತು ನೋಡುವಂಥ ಕಾರ್ಯಕ್ರಮಗಳಿಗೆ ಮಾತ್ರ ಅನುಮತಿ ಸಿಗಲಿದೆ, ಈ ಬಗ್ಗೆ ಪ್ರಕಾಶ್ ಜಾವಡೇಕರ್ ಭೇಟಿ ಮಾಡಿ ಚರ್ಚಿಸಲಿದ್ದೇವೆ' ಎಂದರು. ಇತ್ತೀಚಿಗೆ ಮುಕ್ತಾಯವಾದ ಬಿಗ್ ಬಾಸ್ ತಮಿಳು ಆವೃತ್ತಿ ಕೂಡಾ ಮಹಿಳೆಯರಿಗೆ ಅಗೌರವ ತೋರುವ ರೀತಿಯಲ್ಲಿ ನಡೆದುಕೊಂಡ ದೃಶ್ಯಗಳಿದ್ದ ಕಾರಣಕ್ಕೆ ತಮಿಳು ಸಂಸ್ಕೃತಿ ನಾಶ ಪಡಿಸುತ್ತಿದ್ದು ನಿಷೇಧಕ್ಕೊಳಪಡಿಸುವಂತೆ ಆಗ್ರಹಿಸಿ ಹಿಂದೂ ಮಕ್ಕಳ್ ಕಚ್ಚಿ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
|
ಸಾಮಾಜಿಕ ಜಾಲ ತಾಣಗಳಲ್ಲೂ ಆಕ್ರೋಶ
ಕಾರ್ಮಿಕರ ಒಕ್ಕೂಟ ಅಷ್ಟೇ ಅಲ್ಲ ಸಾರ್ವಜನಿಕ ವಲಯದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿಗ್ ಬಾಸ್ 13ರ ಎಪಿಸೋಡ್ ಗಳ ಬಗ್ಗೆ ಭಾರಿ ಆಕ್ಷೇಪ ವ್ಯಕ್ತವಾಗಿದೆ. ಬೆಡ್ ಫ್ರೆಂಡ್ ಫಾರೇವರ್ ಎಪಿಸೋಡ್, ಕಿಸ್ ಬಗ್ಗೆ ಸಲ್ಮಾನ್ ಖಾನ್ ವೀಕೇಂಡ್ ಕಾ ವಾರ್ ನಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದಿಂದ ಈ ಶೋನ ವಿರೋಧಿಗಳು ಹೆಚ್ಚಾಗಿದ್ದಾರೆ. ಟ್ವಿಟ್ಟರ್ ನಲ್ಲಿ 'BoycottBiggBoss13', 'JehadFelataBiggBoss' and 'UnsubscribeColorsTV'. ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡಲಾಗುತ್ತಿದೆ. ಟೀಕೆ ಟಿಪ್ಪಣಿ, ಆಕ್ರೋಶದ ಪ್ರತಿಕ್ರಿಯೆಗಳು ಬರುತ್ತಿವೆ.

ಸ್ಪರ್ಧಿಗಳ ಕಿಸ್ಸಿಂಗ್ ಸೀನ್ ವೈರಲ್
ಸ್ಪರ್ಧಿಗಳ ಕಿಸ್ಸಿಂಗ್ ಸೀನ್ ವೈರಲ್ ಆಗುತ್ತಿದ್ದಂತೆ ಎಚ್ಚರಗೊಂಡ ಕಲರ್ಸ್ ವಾಹಿನಿ, ಇದು ಈ ಹಿಂದಿನ ಸೀಸನ್ ಗೂ ಎಂದು ಸಮಜಾಯಿಷಿ ಕೊಡುವ ಪ್ರಯತ್ನ ಮಾಡಿದೆ. ಆದರೆ, ಕಲರ್ಸ್ ವಾಹಿನಿ ಹಾಗೂ ಬಿಗ್ ಬಾಸ್ ವಿರುದ್ಧ ಆಕ್ರೋಶ ದಿನದಿಂದ ದಿನಕ್ಕೆ ಎಪಿಸೋಡ್ ನಿಂದ ಎಪಿಸೋಡಿಗೆ ಹೆಚ್ಚಾಗುತ್ತಿದೆ.

ಜನರು ಯಾಕೆ ಈ ಶೋ ನೋಡುತ್ತಾರೆ?
"ಜನರು ಯಾಕೆ ಈ ಶೋ ನೋಡುತ್ತಾರೆ?, ಇದರಿಂದ ಏನಾದರೂ ಪ್ರಯೋಜನವಿದೆಯೇ? ಬೆಡ್ ಶೇರಿಂಗ್ ಅಂತೆ, ವೀಕ್ಷಕರು ಮನೋವೈದ್ಯರನ್ನು ಕಾಣುವುದು ಉತ್ತಮ" ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ಭಾರತೀಯ ಸಂಸ್ಕೃತಿಯನ್ನು ಈ ಶೋ ನಾಶ ಮಾದುತ್ತಿದೆ. ಯುವ ಜನಾಂಗದ ಹಾದಿ ತಪ್ಪಿಸುತ್ತಿದೆ. ಅಶ್ಲೀಲತೆಯನ್ನು ಹಬ್ಬಿಸುವುದೆ ಇದರ ಉದ್ದೇಶ, ಇದಲ್ಲದೆ ಹಿಂದೂ ಮುಸ್ಲಿಂ ನಡುವೆ ಲವ್ ಜಿಹಾದ್ ಗೂ ಕಾರಣವಾಗಿದೆ. ಬಿಗ್ ಬಾಸ್ ನಿಷೇಧ ಮಾಡಿ, ಜಿಹಾದ್ ಬೆಳೆಸುತ್ತಿರುವ ಶೋ ಬಂದ್ ಆಗಲಿ.
ಇನ್ನೂ ಅನೇಕ ಶೋಗಳನ್ನು ಬಂದ್ ಮಾಡಿ
ಬಿಗ್ ಬಾಸ್ ಅಷ್ಟೇ ಅಲ್ಲ, ರೋಡಿಸ್, ಸ್ಲಿಟ್ಸ್ ವಿಲ್ಲಾ. ಇತ್ಯಾದಿ ಎಲ್ಲಾ ಅನಿಷ್ಟ ಕಾರ್ಯಕ್ರಮಗಳನ್ನು ಬಂದ್ ಮಾಡಿ. ಭಾರತೀಯ ಸಂಸ್ಕೃತಿ, ಹಿಂದೂ ಸಂಪ್ರದಾಯಕ್ಕೆ ಮಾರಕವಾಗಿರುವ ಕಾರ್ಯಕ್ರಮ ನಿಲ್ಲಿಸುವಂತೆ ಆಗ್ರಹಿಸಬೇಕಿದೆ. ಧಾರ್ಮಿಕ ಭಾವನೆ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಸಲ್ಮಾನ್ ಖಾನ್ ನಿಮ್ಮ ಮುಖವಾಡ ಕಳಚಿ ಎಂದು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications