ಥಾಣೆ ಪಾಲಿಕೆ: ಠಾಕ್ರೆ ಬಣಕ್ಕುಳಿದದ್ದು ಒಬ್ಬನೇ ಸದಸ್ಯ; ಎಲ್ಲಾ ಶಿಂಧೆಮಯ
ಮುಂಬೈ, ಜುಲೈ 7: ಶಿವಸೇನಾ ಪಕ್ಷದೊಳಗೆ ಕೇವಲ ಶಾಸಕರು ಮತ್ತು ಸಂದರ ಬಂಡಾಯ ಮಾತ್ರವಲ್ಲ, ಇನ್ನೂ ಕೆಳಗಿನ ಹಂತದ ಜನಪ್ರತಿನಿಧಿಗಳವರೆಗೂ ವಿಸ್ತರಣೆಯಾಗಿದೆ. ಥಾಣೆ ಮಹಾ ನಗರಪಾಲಿಕೆಯಲ್ಲಿ ಇರುವ 67 ಶಿವಸೇನಾ ಸದಸ್ಯರ ಪೈಕಿ ಬರೋಬ್ಬರಿ 66 ಮಂದಿ ಸದಸ್ಯರು ಏಕನಾಥ್ ಶಿಂಧೆ ಬಣ ಸೇರಿಕೊಂಡಿದ್ದಾರೆ. ಒಬ್ಬ ಸದಸ್ಯ ಮಾತ್ರ ಠಾಕ್ರೆ ಬಣದಲ್ಲಿ ಉಳಿದುಕೊಂಡಿದ್ದಾರೆ.
ಥಾಣೆ ನಗರಪಾಲಿಕೆಯಲ್ಲಿ ಆದ ಈ ಬೆಳವಣಿಗೆ ಅನಿರೀಕ್ಷಿತವೇನಲ್ಲ. ಥಾಣೆ ಜಿಲ್ಲೆ ಏಕನಾಥ್ ಶಿಂಧೆಯ ವೈಯಕ್ತಿಕ ವರ್ಚಸ್ಸು ಇರುವ ಪ್ರದೇಶ. ಆದರೆ ಮುಂಬೈ ಬಳಿಕ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಪಾಲಿಕೆ ಥಾಣೆಯದ್ದು. ಹೀಗಾಗಿ, ಉದ್ಧವ್ ಠಾಕ್ರೆಗೆ ತಮ್ಮ ಪ್ರಭಾವ ಬೆಳೆಸಿಕೊಳ್ಳಲು ಥಾಣೆ ಬಹಳ ಮುಖ್ಯ.
ಥಾಣೆ ಮಹಾನಗರಪಾಲಿಕೆಯನ್ನು ಇತ್ತೀಚೆಗೆ ವಿಸರ್ಜಿಸಲಾಗಿತ್ತು. ಬೇರೆ ಬೇರೆ ಕಾರಣಕ್ಕೆ ಚುನಾವಣೆಯನ್ನು ಮುಂದೂಡುತ್ತಾ ಬರಲಾಗಿದೆ. ಇದೇ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಥಾಣೆ ಪಾಲಿಕೆಯ ಶಿವಸೇನಾ ಸದಸ್ಯರು ಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಭೇಟಿಯಾಗಿ ಅವರಿಗೆ ಬೆಂಬಲ ನೀಡಿರುವುದು ತಿಳಿದುಬಂದಿದೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೋಮವಾರ ನಡೆದ ಬಹುಮತ ಪರೀಕ್ಷೆಯಲ್ಲಿ ಶಿವಸೇನಾ ಪಕ್ಷದ 55 ಶಾಸಕರ ಪೈಕಿ 40 ಮಂದಿ ಸಿಎಂ ಏಕನಾಥ್ ಶಿಂಧೆಗೆ ಬೆಂಬಲ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳು ಮಾಜಿ ಸಿಎಂ ಉದ್ಧವ್ ಠಾಕ್ರೆಗೆ ಪಕ್ಷದ ಮೇಲೆ ಹೊಂದಿರುವ ಹಿಡಿತ ದುರ್ಬಲವಾಗಿರುವುದನ್ನು ಸೂಚಿಸುತ್ತಿವೆ.
ಬಾಳಾ ಠಾಕ್ರೆ ಹೆಸರು
ಶಿವಸೇನಾ ಪಕ್ಷವನ್ನು ಹುಟ್ಟುಹಾಕಿದ್ದ ಬಾಳಾ ಸಾಹೇಬ್ ಠಾಕ್ರೆ ಅವರ ಹೆಸರನ್ನು ಏಕನಾಥ್ ಶಿಂಧೆ ಕೂಡ ಬಳಸಿಕೊಳ್ಳುತ್ತಿದ್ದಾರೆ. ಶಿವಸೇನಾ ಪಕ್ಷ ಅಧಿಕೃತವಾಗಿ ತಮ್ಮದೇ ಎಂದು ಶಿಂಧೆ ಹೇಳಿಕೊಳ್ಳುತ್ತಿದ್ದಾರೆ. ಒಂದು ವೇಳೆ ಶಿವಸೇನಾ ಪಕ್ಷ ವಿಭಜನೆ ಆಗುವುದಾದರೆ ಆ ಪಕ್ಷದ ಅಧಿಕೃತ ಚಿಹ್ನೆ ಯಾವ ಬಣಕ್ಕೆ ಹೋಗಬೇಕೆಂಬುದನ್ನು ಚುನಾವಣಾ ಆಯೋಗ ಮಾತ್ರ ನಿರ್ಧರಿಸಬಲ್ಲುದು.
ಶಿವಸೇನಾ ಶಾಸಕರು ಬಿಟ್ಟುಹೋಗಿರಬಹುದು. ಆದರೆ, ಕಾರ್ಯಕರ್ತರು ತಮ್ಮ ಜೊತೆ ಇದ್ದಾರೆ. ಮತ್ತೊಮ್ಮೆ ಪಕ್ಷ ಕಟ್ಟುತ್ತೇನೆ ಎಂದು ಉದ್ಧವ್ ಠಾಕ್ರೆ ಹೇಳಿಕೊಂಡಿದ್ದರು. ಆದರೆ, ಈಗ ಥಾಣೆ ಮಹಾನಗರಪಾಲಿಕೆಯ ಸದಸ್ಯರು ಏಕನಾಥ್ ಶಿಂಧೆಗೆ ಬೆಂಬಲ ನೀಡಿರುವ ಬೆಳವಣಿಗೆ ಈ ಹಿನ್ನೆಲೆಯಲ್ಲಿ ಕುತೂಹಲ ಮೂಡಿಸಿದೆ. ಥಾಣೆ ಏಕನಾಥ್ ಶಿಂಧೆಯ ಪ್ರಾಬಲ್ಯ ಇರುವ ಪ್ರದೇಶವಾದ್ದರಿಂದ ಇಷ್ಟು ದೊಡ್ಡ ಬೆಂಬಲ ಸಹಜ. ಪುಣೆ ಇತ್ಯಾದಿ ಬೇರೆ ಕಡೆಯ ಸ್ಥಳೀಯ ಸಂಸ್ಥೆಗಳಲ್ಲಿ ಶಿವಸೇನಾ ಸದಸ್ಯರು ಯಾವ ಬಣಕ್ಕೆ ಬೆಂಬಲ ನೀಡುತ್ತಾರೆ ಎಂಬುದು ಕುತೂಹಲ.

ಶಿವಸೇನಾ ಮತ್ತು ಹಿಂದುತ್ವ
ಶಿವಸೇನಾ ಪಕ್ಷದ್ದು ಸಾಂಪ್ರದಾಯಿಕವಾಗಿ ಹಿಂದುತ್ವ ವಿಚಾರ ಮತ್ತು ಮರಾಠಿ ಅಸ್ಮಿತೆ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಾ ಬಂದಿದೆ. ಬಿಜೆಪಿಗಿಂತಲೂ ಹೆಚ್ಚು ಉಗ್ರ ಹಿಂದುತ್ವವಾದಿ ಪಕ್ಷವಾಗಿದ್ದುದು ಹೌದು. ರಾಮಜನ್ಮಭೂಮಿ ಮೊದಲಾದ ಆಂದೋಲನಗಳಲ್ಲಿ ಬಹಳ ಸಕ್ರಿಯವಾಗಿ ತೊಡಗಿಸಿಕೊಂಡ ಪಕ್ಷ ಅದು. ಆದರೆ, ಉದ್ಧವ್ ಠಾಕ್ರೆ ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆ ಕೈ ಜೋಡಿಸಿದ್ದು ಪಕ್ಷದೊಳಗೆ ಅನೇಕರಿಗೆ ಮುಜುಗರ ಮಾಡಿದ್ದು ನಿಜ.
ಏಕನಾಥ್ ಶಿಂಧೆಗೆ ಇದೇ ಪ್ಲಸ್ ಪಾಯಿಂಟ್ ಆಗಿದೆ. ಹಿಂದುತ್ವವನ್ನು ಕೈಬಿಟ್ಟಿದ್ದರಿಂದ ತಾವು ಬಂಡಾಯ ಏಳಬೇಕಾಯಿತು ಎಂದು ಅವರು ವಾದಿಸಿದ್ದಾರೆ. ಇದು ಶಿವಸೇನಾ ಪಕ್ಷದ ಕಟ್ಟರ್ ಬೆಂಬಲಗರನ್ನು ಸಮಾಧಾನಗೊಳಿಸುತ್ತದಾ ಎಂಬುದು ಪ್ರಶ್ನೆ.
ಉದ್ಧವ್ ಠಾಕ್ರೆ ತಮ್ಮ ಅಧಿಕಾರದ ಕೊನೆಯ ಘಳಿಗೆಯಲ್ಲಿ ಕೆಲ ನಗರಗಳ ಹೆಸರನ್ನು ಬದಲಾಯಿಸುವ ಮೂಲಕ ತಾನು ಹಿಂದುತ್ವವನ್ನು ಮರೆತಿಲ್ಲ ಎಂಬ ಸಂದೇಶ ನೀಡಲು ಪ್ರಯತ್ನಿಸಿದ್ದರು. ಈಗ ಅಧಿಕಾರ ಕಳೆದುಕೊಂಡಿರುವ ಉದ್ಧವ್ ಠಾಕ್ರೆ ಮುಂದೆ ತಮ್ಮ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಯಾವ ಕಾರ್ಯತಂತ್ರ ರೂಪಿಸುತ್ತಾರೆ ಎಂಬ ಕುತೂಹಲ ಇದೆ.
(ಒನ್ಇಂಡಿಯಾ ಸುದ್ದಿ)
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications